ಸಿಎಂ ಎಚ್ಡಿಕೆ ಬಜೆಟ್ ಹೈಲೈಟ್ಸ್!

ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್‌ನ್ನು ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿದರು.

ಬಜೆಟ್‌ನ ಪ್ರಮುಖ ಅಂಶಗಳು

* 2 ಲಕ್ಷದ 13 ಸಾವಿರದ 734 ಕೋಟಿ ರೂಪಾಯಿ ಬಜೆಟ್ ಗಾತ್ರ.

* ಪ್ರತಿ ರೈತ ಕುಟುಂಬದ 2 ಲಕ್ಷ ರೂಪಾಯಿವರೆಗಿನ ಸುಸ್ತಿ ಬೆಳೆ ಸಾಲ ಮನ್ನಾ.

* ಸಾಲ ಮನ್ನಾ ಮಾಡಲು 34 ಸಾವಿರ ಕೋಟಿ ರೂಪಾಯಿ ಮೀಸಲು

* ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂಪಾಯಿ ವಿನಿಯೋಗ.

*ಪೆಟ್ರೋಲ್ ಬೆಲೆ ಲೀಟರ್ ಗೆ 1.14 ರೂಪಾಯಿ, ಡೀಸೆಲ್ ಬೆಲೆ 1.12 ರೂಪಾಯಿ ಹೆಚ್ಚಳ.

*ವಿದ್ಯುತ್ ದರ ಪ್ರತಿ ಯೂನಿಟ್ ಗೆ 20 ಪೈಸೆ ಹೆಚ್ಚಳ

*ಕನಕಪುರಕ್ಕೆ ಹೊಸ ವೈದ್ಯಕೀಯ ಕಾಲೇಜು.

*ಮಂಡ್ಯ ವೈದ್ಯಕೀಯ ಆಸ್ಪತ್ರೆಯ ಮೇಲ್ದರ್ಜೆಗೆ 30 ಕೋಟಿ ರೂಪಾಯಿ.

* ಸಂಧ್ಯಾ ಸುರಕ್ಷಾ ಯೋಜನೆ ಮೊತ್ತ 600 ರೂಪಾಯಿಯಿಂದ 1 ಸಾವಿರ ರೂಪಾಯಿಗೆ ಏರಿಕೆ.

* ರಾಮನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

* ರಾಮನಗರದಲ್ಲಿ ಚಲನಚಿತ್ರ ವಿವಿ ಆರಂಭಿಸಲು 30 ಕೋಟಿ ರೂ. ಅನುದಾನ

* 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಗೆ ನಿಗಾವಹಿಸಲು ಬಯೋಮೆಟ್ರಿಕ್ ಅವಳವಡಿಕೆ 5 ಕೋಟಿ ರೂಪಾಯಿ ಅನುದಾನ, ಮುಂದಿನ 3 ವರ್ಷ ಗಳಲ್ಲಿ ಜಾರಿ.

* ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ.

* ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂಪಾಯಿ.

* ಮಂಡ್ಯ ವಿಮ್ಸ್ ಅಭಿವೃದ್ಧಿಗೆ 30 ಕೋಟಿ ರೂಪಾಯಿ ಮೀಸಲು.

* ಮೈಸೂರಿನಲ್ಲಿ ರೇಶ್ಮೆ ಮಾರುಕಟ್ಟೆ ಸ್ಥಾಪನೆ.

*ಮದ್ಯ ಮೇಲಿನ ತೆರಿಗೆ ಶೇ. 4ರಷ್ಟು ಹೆಚ್ಚಳ.

* ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಟ್ರಾನ್ಸ್ ಪ್ಲಾಂಟ್ ಘಟಕ ಸ್ಥಾಪನೆ.

* ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂಪಾಯಿ.

* ಹಂತ ಹಂತವಾಗಿ ಮರು ಭೂ ಮಾಪನ ಕಾರ್ಯ. ಐದು ಜಿಲ್ಲೆಗಳಲ್ಲಿ ಪ್ರಾರಂಭ.

* 10 ಕೋಟಿ ರೂಪಾಯಿ ವೆಚ್ಚದಲ್ಲಿ ನಾಡಕಚೇರಿಗಳಿಗೆ ಮೂಲಭೂತ ಸೌಕರ್ಯ, 50 ನಾಡಕಚೇರಿಗಳಿಗೆ ತಲಾ 20 ಲಕ್ಷ ರೂಪಾಯಿ ಅನುದಾನ.

* ಅನ್ಯಭಾಗ್ಯ ಯೋಜನೆಯಡಿ ಪ್ರತಿ ಫಲಾನುಗಳಿವೆ 5 ಕೆ.ಜಿ ಅಕ್ಕಿ ಉಚಿತ, ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿಬೇಳೆ.

* ಹಾಸನ ನಗರದ ಸುತ್ತ 30 ಕೋಟಿ ರೂ. ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಾಣ.

* ವಿದ್ಯುತ್ ಪ್ರಸರಣ ಜಾಲ ಬಲವರ್ಧನೆ 35 ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ.75 ಉಪ ಕೇಂದ್ರಗಳು ಮೇಲ್ದರ್ಜೆಗೆ.

* ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಚಾಲ್ತಿಯಲ್ಲಿರುವ ಶೇ.6 ರಿಂದ ಶೇ.9 ಕ್ಕೆ ಹೆಚ್ಚಳ.

* ಸ್ವಂತ ಬಳಕೆಯ ವಿದ್ಯುತ್ ಮೇಲಿನ ತೆರಿಗೆ ದರವನ್ನು ಪ್ರತಿ ಯೂನಿಟ್ ದರ 10 ಪೈಸೆಯಿಂದ 20 ಪೈಸೆ ಹೆಚ್ಚಳ.

* ಹಂತ ಹಂತವಾಗಿ 53,000 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಜಲಧಾರೆ ಯೋಜನೆ.

* ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರನ್ನು ಜೀವನದಿ ಅಥವಾ ಜಲಾಶಯಗಳಿಂದ ಪಡೆದು ಶುದ್ದೀಕರಿಸಲು ತೀರ್ಮಾನ.

* ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ.

* ಬೇಲೂರು, ಹಂಪಿ ಹಾಗೂ ವಿಜಯಪುರದಲ್ಲಿ ವಿವಿಧ ಭಾಷೆಗಳ ಪ್ರವಾಸಿ ಮಾರ್ಗದರ್ಶಿಗಳ ನೇಮಕಕ್ಕೆ ಒತ್ತು.

* ಮಾರ್ಗದರ್ಶಿಗಳಾಗಿ ಕೆಲಸ ಮಾಡುವ ಯುವಕ- ಯುವತಿಯರಿಗೆ ಕೌಶಲ್ಯ ಅಭಿವೃದ್ದಿಗೆ ಯೋಜನೆಯಡಿ ತರಬೇತಿ.

* ಪ್ರವಾಸಿ ಸ್ಥಳಗಳಲ್ಲಿ ಪರಿಸರ ಹಾಗೂ ಆಹಾರ ಶುದ್ಧತೆ ಕಾಪಾಡಲು ಸ್ಥಳೀಯ ಸಂಸ್ಥೆಗಳಿಗೆ ನೆರವಾಗಲು 20 ಕೋಟಿ ರೂಪಾಯಿ.

* 500 ಕೊಠಡಿ ಸೌಲಭ್ಯವಿರುವ ೩ ಸ್ಟಾರ್ ಹೊಟೇಲ್ ತೆರೆಯಲು ಖಾಸಗಿ ಕಂಪೆನಿಗಳಿಗೆ ೩ ಕೋಟಿ ರೂಪಾಯಿ ಬಂಡವಾಳ.

* ಅಮ್ಯೂಸ್ ಮೆಂಟ್ ಪಾರ್ಕ್ , ಜಲಕ್ರೀಡೆ ಅಭಿವೃದ್ದಿಪಡಿಸುವ ಖಾಸಗಿ‌ ಕಂಪೆನಿಗಳಿಗೆ ಶೇ.30ರಷ್ಟು ಬಂಡವಾಳ.

* ಪ್ರವಾಸಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಈ ವರ್ಷ 80 ಕೋಟಿ ರೂಪಾಯಿ ಅನುದಾನ.

* ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತಗಳ ಪ್ರವಾಸಿ ತಾಣಗಳ ಅಭಿವೃದ್ದಿಗೆ 5 ಕೋಟಿ ರೂಪಾಯಿ ಅನುದಾನ.

* ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡಗಳ ದುರಸ್ತಿಗಾಗಿ ವಿಶೇಷ ಅನುದಾನ 150 ಕೋಟಿ ಮೀಸಲು.

* ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ತರಬೇತಿ ಕೇಂದ್ರಕ್ಕೆ 5 ಕೋಟಿ ರೂಪಾಯಿ ಅನುದಾನ.

* ರಾಜ್ಯದ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ವಿಶೇಷ ಪ್ಯಾಕೇಜ್ 250 ಕೋಟಿ ಮೀಸಲು.

* ಹಂಪಿಯಲ್ಲಿ ಪ್ರವಾಸೋದ್ಯಮ ವಿವಿ ಆರಂಭಿಸಲು 3 ಕೋಟಿ ರೂಪಾಯಿ ಅನುದಾನ.

* ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿಗೆ ಬಡ ರೋಗಿಗಳಿಗೆ 30 ಕೋಟಿ ಅನುದಾನದ ಪ್ರತ್ಯೇಕ ಯೋಜನೆ.

* ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.

* ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಸ್ಥಾಪನೆಗೆ 12 ಕೋಟಿ ಅನುದಾನ….

* ರಾಮನಗದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ 40 ಕೋಟಿ ಅನುದಾನ.

* ಬೆಳಗಾವಿ, ಕಲಬುರ್ಗಿ, ಮೈಸೂರು ನಗರದಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಇತರೆ ರೋಗಗಳಿಗೆ ತೃತೀಯ ಹಂತದ ಆರೋಗ್ಯ ಸೇವೆ ನೀಡಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ.

* ಗದಗ, ಕೊಪ್ಪಳ, ಚಾಮರಾಜನಗರ, ಹಾಸನ ನಗರದ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ಸ್ಥಾಪನೆಗೆ 200 ಕೋಟಿ ಅನುದಾನ.

* 104 ಮತ್ತು 108 ಕರೆಯಡಿ ತುರ್ತು ಸೇವೆಗಳ ವ್ಯಾಪ್ತಿ ವಿಸ್ತರಣೆ.

* ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ 40 ಕೋಟಿ ರೂಪಾಯಿ ಹೊಸ ಯೋಜನೆ ಜಾರಿ, ಈ ವರ್ಷ 10 ಕೋಟಿ ಅನುದಾನ

* ಬೆಂಗಳೂರಿನ ಲಕ್ಷ ಮನೆ ನಿರ್ಮಾಣ ಯೋಜ‌ನೆ ಎಲ್ಲಾ ನಗರಕ್ಕೆ ವಿಸ್ತರಣೆ.

* ಬೆಂಗಳೂರಿನಲ್ಲಿ ಬಡವರಿಗೆ ಆಯ್ದ ಸ್ಥಳದಲ್ಲಿ ಬಹುಮಹಡಿ ಮನೆಗಳ ನಿರ್ಮಾಣ.

* ವಿಕಲಚೇತನ ಫಲಾನುಭವಿಗಳ ಬೇಡಿಕೆಯ ಮೇರೆಗೆ ಆನ್ ಲೈನ್ ನಲ್ಲಿ ಅರ್ಜಿ ಪಡೆದು ಮನೆ ಹಂಚಿಕೆ ವ್ಯವಸ್ಥೆ.

* ಹಿಂದಿನ ಸರ್ಕಾರದ ವಸತಿ ಯೋಜನೆಗಳ ಮುಂದುವರಿಕೆ. ಬೇಡಿಕೆಗೆ ತಕ್ಕಂತೆ ಮನೆಗಳ ನಿರ್ಮಾಣ.

* ಖಾಸಗಿ ಭದ್ರತಾ ಸಿಬ್ಬಂದಿಗೆ ಅಗತ್ಯ ತರಬೇತಿಗೆ ವಿಶ್ವವಿದ್ಯಾಲಯ ಸ್ಥಾಪನೆ.

* ತಾಯಿನಾಡು ಭದ್ರತಾ ವಿವಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ. ಶಿವಮೊಗ್ಗದಲ್ಲಿ ವಿವಿ ಸ್ಥಾಪನೆಗೆ ಅಗತ್ಯ ನೆರವು.

* ಪೊಲೀಸ್ ಇಲಾಖೆಗೆ ನಿರಾಶಾದಾಯಕ ಬಜೆಟ್. ಪೊಲೀಸರಿಗೆ ಯಾವುದೇ ಯೋಜನೆ ಘೋಷಣೆ ಮಾಡದ ಸಿ.ಎಂ.

* ಪೊಲೀಸರಲ್ಲಿ ನಿರಾಶೆ ಮೂಡಿಸಿದ ಬಜೆಟ್ .

Related Articles

Comments (0)

Leave a Comment