ಜಯನಗರದಲ್ಲಿ ಏ.19ಕ್ಕೆ ಪರಮ್‌ ‘ವಿಹಾರ’ ಸಾಂಸ್ಕೃತಿಕ ಹಬ್ಬ

ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಕಲಾವಿದರ ಮೂಲಕ ಪಸರಿಸುವ ನಿಟ್ಟಿನಲ್ಲಿ ‘ಪರಮ್ ಫೌಂಡೇಶನ್’ ಆಯೋಜಿಸಿರುವ ‘ವಿಹಾರ-11’ ಸಾಂಸ್ಕೃತಿಕ ಕಾರ್ಯಕ್ರಮವು ಏಪ್ರಿಲ್ 19ರಂದು ಜಯನಗರದಲ್ಲಿ ಜರುಗಲಿದೆ.

ನಗರದ ಜಯನಗರದಲ್ಲಿರುವ ಸನಾತನ ಕಲಾಕ್ಷೇತ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಉಚಿತ ಪ್ರವೇಶವಿರುತ್ತದೆ. ಈ ಬಾರಿಯ 11ನೇ ಆವೃತ್ತಿಯಲ್ಲಿ ಸಂಗೀತ ಮತ್ತು ನೃತ್ಯ ಲೋಕದ ಉದಯೋನ್ಮುಖ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತ: ಅವಳಿ ಸಹೋದರಿಯರಾದ ಕುಮಾರಿ ಚಿನ್ಮಯಿ ನಾಗೇಂದ್ರ ಮತ್ತು ಕುಮಾರಿ ಮಹತಿ ನಾಗೇಂದ್ರ ಅವರಿಂದ ಗಾಯನ ಸುಧೆ ಹರಿಯಲಿದೆ. ಇವರಿಗೆ ವಿದ್ವಾನ್ ವೆಂಕಟೇಶ್ ಜೋಸ್ಯರ್ (ಪಿಟೀಲು) ಹಾಗೂ ವಿದ್ವಾನ್ ಎ.ಎಸ್.ಎನ್. ಸ್ವಾಮಿ (ಮೃದಂಗ) ಸಾಥ್ ನೀಡಲಿದ್ದಾರೆ.

ಭರತನಾಟ್ಯ ವೈಭವ: ಗುರು ವಿದ್ವಾನ್ ಮಂಜುಶ್ರೀ ಸಂತೋಷ್ ಅವರ ಮಾರ್ಗದರ್ಶನದ ‘ನಾಟ್ಯ ಸಿಂಚನ ಸಂಗೀತ ಮತ್ತು ನೃತ್ಯ ಶಾಲೆ’ಯ ವಿದ್ಯಾರ್ಥಿಗಳಿಂದ ಆಕರ್ಷಕ ಭರತನಾಟ್ಯ ಪ್ರದರ್ಶನವೂ ಈ ವೇಳೆ ನಡೆಯಲಿದೆ. ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸುವ ಈ ಅಪರೂಪದ ಸಂಜೆಗಾಗಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.: 9035034725 ಸಂಖ್ಯೆಯನ್ನು ಸಂಪರ್ಕಿಸಬಹುದು..

 

Related Articles

Comments (0)

Leave a Comment