ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಸಮಗ್ರ ನಿರ್ವಹಣೆಗೆ ಸೋಮಣ್ಣ ಮೆಚ್ಚುಗೆ

ಹುಬ್ಬಳ್ಳಿ:ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ರೈಲು ನಿಲ್ದಾಣ ಸಮಗ್ರ ನಿರ್ವಹಣೆಗೆ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ  ಸಚಿವ ವಿ. ಸೊಮ್ಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ  ಸಚಿವ ವಿ. ಸೊಮ್ಮಣ್ಣ ಅವರು ಇಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದರು. ನಿಲ್ದಾಣದಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಆವರಣದ ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ನಂತರ ಸಚಿವರು ಇತ್ತೀಚಿಗೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅಳವಡಿಸಲಾದ  “ಮಾರ್ಗದರ್ಶಕ ” ಪ್ರಯಾಣಿಕರ ಸ್ವಯಂ ಡಿಜಿಟಲ್ ದಿಕ್ಸೂಚಿ ಆಪರೇಟಿಂಗ್ ಫಲಕವನ್ನು ವೀಕ್ಷಿಸಿ , ಅದರ ಕಾರ್ಯನಿವರ್ಹಣೆ ಬಗ್ಗೆ ತಿಳಿದು ಮತ್ತು ಇದರಿಂದ ಪ್ರಯಾಣಿಕರಿಗೆ ಆಗುವ ಸದುಪಯೋಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಿಲ್ದಾಣದಲ್ಲಿನ ಒಂದು ನಿಲ್ದಾಣ ಒಂದು ಉತ್ಪನ್ನ  (OSOP) ಮಳಿಗೆಗೆ ಭೇಟಿ ನೀಡಿ ಮಾರಾಟದ ಉತ್ಪನಗಳ ಕುರಿತು ಮಾಹಿತಿ ಪಡೆದು, ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ನಿಲ್ದಾಣ ಪೂರಕ ವೇದಿಕೆ ಕಲ್ಪಿಸಿ, ಸಣ್ಣ ಉದ್ಯಮಗಳ ಬೆಳವಣಿಗೆಗೆ ಸಹಕಾರಿ ಆಗಿದೆ ಎಂದು ಶ್ಲಾಘಿಸಿದರು.

ಸಚಿವರು ಲಗೇಜ್ ರೂಮ್ , ನಿಲ್ದಾಣ ನಿರೀಕ್ಷಕರ ಕಚೇರಿ , ನಿಲ್ದಾಣದ ವಾಣಿಜ್ಯ ವ್ಯವಸ್ಥಾಪಕರ ಕಚೇರಿ, ಟಿಕೆಟ್ ಕೌಂಟರ್, ರೈಲ್ವೆ ಪ್ಲಾಟ್ಫಾರ್ಮು ಗಳಲ್ಲಿ ಪರಿವೀಕ್ಷಣೆ (Inspection) ನಡೆಸಿ ನಿಲ್ದಾಣದಲ್ಲಿನ ನೈರ್ಮಲ್ಯ ಹಾಗೂ ಸ್ವಚ್ಛತೆಯ ಕಾಮಗಾರಿ ಕುರಿತು ಮೆಚ್ಚುಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು, ನಿಲ್ದಾಣದಲ್ಲಿ ಸಿಗುವ ಪ್ರಯಾಣಿಕರ ಮೂಲಭೂತ ಸೌಕರ್ಯಗಳ ಕುರಿತು ಸಮಗ್ರ ಮಾಹಿತಿ ಪಡೆದು, ಹುಬ್ಬಳ್ಳಿ ರೈಲ್ವೆ ನಿಲ್ದಾಣ ಪ್ರಯಾಣಿಕರಿಗೆ ಅನೇಕ ಸೌಕರ್ಯ ಗಳನ್ನು ಸುಲಭವಾಗಿ ದೊರೆಕಿಸಿ ಒಂದು ಮಾದರಿ ನಿಲ್ದಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು .

ಸಚಿವರು ಹುಬ್ಬಳ್ಳಿ ಯಿಂದ ಬೆಂಗಳೂರಿಗೆ  ಹೊರಟ ವಂದೇ ಭಾರತ (ರೈಲು ಸಂ.20662) ರೈಲಿನಲ್ಲಿ ಪ್ರಯಾಣಿಸಿದರು , ಈ ಸಂದರ್ಭದಲ್ಲಿ ಅವರು ರೈಲಿನಲ್ಲಿನ ಬೋಗಿಗಳ ಪರಿವೀಕ್ಷಣೆ (Inspection) ಮಾಡಿದರು.  ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಜೊತೆ ಸಂವಾದ ನಡೆಸಿ , ರೈಲಿನಲ್ಲಿ  ದೊರೆಯುವ ರುಚಿಕರವಾದ ಆಹಾರ, ಉಪಚಾರ ಹಾಗೂ ಸ್ವಚ್ಛತೆ ನಿವರ್ಹಣೆ ಕುರಿತು  ಪ್ರಯಾಣಿಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಗೆ ಹರ್ಷ  ವ್ಯಕ್ತಪಡಿಸಿದರು.

ಹುಬ್ಬಳ್ಳಿ ರೈಲು ನಿಲ್ದಾಣದ ಪರಿವೀಕ್ಷಣೆ ಸಂದರ್ಭದಲ್ಲಿ ಪ್ರಧಾನ ವಾಣಿಜ್ಯ ವ್ಯವಸ್ಥಾಪಕರಾದ (PCCM) ಎಸ್ .ಪಿ .ಶಾಸ್ತ್ರೀ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ , ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾದ (CCM/PS) ಡಾ . ಅನೂಪ ದಯಾನಂದ ಸಾಧು ಹಾಗೂ ಹಿರಿಯ ವಿಭಾಗೀಯ ರೈಲ್ವೆ ವಾಣಿಜ್ಯ ವ್ಯಾಪಸ್ಥಾಪಕರಾದ ಸಂತೋಷ ಹೆಗಡೆ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಇದ್ದರು

Related Articles

Comments (0)

Leave a Comment