ವಿಶೇಷ ಸಾರಿಗೆ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವ ಕಾರಣ ಪ್ರಯಾಣ ದರಗಳನ್ನು ಹೆಚ್ಚಿಸಲಾಗುತ್ತದೆ: ದಸರಾ ವಿಶೇಷ ಬಸ್ ದರ ಹೆಚ್ಚಳಕ್ಕೆ ಕೆಎಸ್ಆರ್ಟಿಸಿ ವಿವರಣೆ
- by Suddi Team
- September 29, 2025
- 34 Views

ಬೆಂಗಳೂರು:ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ವಿಶೇಷ ದಿನ/ಜಾತ್ರಾ/ಹಬ್ಬ ಹರಿದಿನಗಳ ರಜೆ ದಿನಗಳಂದು ಆಚರಣೆ ಮಾಡುವ ಕರಾರಸಾ ನಿಗಮದ ವಿಶೇಷ ಸಾರಿಗೆಗಳಿಗೆ ಪ್ರಯಾಣದರಗಳನ್ನು ಹೆಚ್ಚಿಸಲು ಅವಕಾಶವಿದ್ದು ಅದರಂತೆಯೇ ಬೆಂಗಳೂರಿನಿಂದ ಮೈಸೂರಿಗೆ ತೆರಲಕುವ ದಸರಾ ವಿಶೇಷ ಬಸ್ ಪ್ರಯಾಣದರವನ್ನು ಹೆಚ್ಚಿಸಲಾಗಿದೆ ಇದನ್ನು ಪ್ರತಿ ವರ್ಷವೂ ಮಾಡಲಾಗುತ್ತಿದೆ ಎಂದು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಕೆಎಸ್ಆರ್ಟಿಸಿ ಸಮಜಾಯಿಷಿ ನೀಡಿದೆ.
ಬಸ್ ದರ ಹೆಚ್ಚಿಗೆ ಪಡೆಯಲಾಗುತ್ತಿದೆ ಎನ್ನುವ ಆರೋಪದ ಕುರಿತು ವಿವರಣೆ ನೀಡಿರುವ ಕೆ ಎಸ್ ಆರ್ ಟಿ ಸಿ, ದಸರಾ ವಿಶೇಷ ಸಂದರ್ಭದಲ್ಲಿ ವಿಶೇಷ ಪ್ರಯಾಣ ದರ ಆಕರಣೆ ಕಳೆದ 20 ವರುಷಗಳಿಂದ ನಿರ್ದಿಷ್ಟ ದಿವಸಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ವಿಶೇಷ ದಿನ/ಜಾತ್ರಾ/ಹಬ್ಬ ಹರಿದಿನಗಳ ರಜೆ ದಿನಗಳಂದು ಆಚರಣೆ ಮಾಡುವ ಕರಾರಸಾ ನಿಗಮದ ವಿಶೇಷ ಸಾರಿಗೆಗಳಿಗೆ ಪ್ರಯಾಣದರಗಳನ್ನು ಹೆಚ್ಚಿಸಲು ಅವಕಾಶವಿದ್ದು ಅದರಂತೆ ದರ ಹೆಚ್ಚಿಗೆ ಪಡೆಯಲಾಗುತ್ತಿದೆ ಎಂದು ತಿಳಿಸಿದೆ.
ದರ ಹೆಚ್ಚಳಕ್ಕೆ ಕಾರಣ:
ದಸರಾ ಸೇರಿ ರಜೆ,ಜಾತ್ರೆ,ಹಬ್ಬದ ದಿನಗಳಂದು ವಿಶೇಷ ಸಾರಿಗೆಗಳನ್ನು ಏಕಮುಖ ಸಾರಿಗೆಗಳಾಗಿ(One way) ಆಚರಣೆ ಮಾಡಿ ವಾಪಾಸ್ಸು (Return) ಬರುವಾಗ ಖಾಲಿ/ಕಡಿಮೆ ಪ್ರಯಾಣಿಕರಿಂದ ಕಾರ್ಯಾಚರಣೆ ಮಾಡಬೇಕಾಗಿರುವುದರಿಂದ ನಷ್ಟ ಸರಿದೂಗಿಸಬೇಕಿದೆ, ಹಾಗೂ ವಿಶೇಷ ವಾಹನಗಳನ್ನು ಇತರೇ ವಿಭಾಗಗಳಿಂದ ಪಡೆದು ಈ ಮಾರ್ಗಗಳಲ್ಲಿ ಆಚರಣೆ ಮಾಡುವುದರಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವ ಕಾರಣ ಪ್ರಯಾಣ ದರಗಳನ್ನು ಹೆಚ್ಚಿಸಲಾಗುತ್ತಿದೆ.ಅದರಂತೆ ಪ್ರತಿ ವರ್ಷ ನಡೆಯುವ ದಸರಾ ಹಬ್ಬದ ಅವಧಿಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ರೂ.20/- ಹಾಗೂ ರೂ.30/- ನ್ನು ಹೆಚ್ಚಿಸಿ ವಿಶೇಷ ಪ್ರಯಾಣ ದರಗಳನ್ನು ಆಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಈ ವರ್ಷವು 2025ರ ದಸರಾ ಅವಧಿಯಲ್ಲಿ ದಿನಾಂಕ: 26/09/2025 ರಿಂದ 08/10/2025 ರವರೆಗೆ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ರೂ.20/- ಹಾಗೂ ರೂ.30/- ನ್ನು ಹೆಚ್ಚಿಸಿ ವಿಶೇಷ ಪ್ರಯಾಣ ದರ ಆಕರಣೆಗಳನ್ನು ಜಾರಿ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕೆಎಸ್ಆರ್ಟಿಸಿ ಸ್ಪಷ್ಟೀಕರಣ ನೀಡಿದೆ.
Related Articles
Thank you for your comment. It is awaiting moderation.
Comments (0)