“ಸೈಕಲ್ ಮೇಲೆ ಭಾನುವಾರ” – ನೈಋತ್ಯ ರೈಲ್ವೆಯಿಂದ ಫಿಟ್ ಇಂಡಿಯಾ ಉಪಕ್ರಮದಡಿ ವಿಶೇಷ ಸೈಕ್ಲಾಥಾನ್

ಹುಬ್ಬಳ್ಳಿ: ನೈಋತ್ಯ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್ (SWRSA) ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಫಿಟ್ ಇಂಡಿಯಾ ಮೂವ್‌ಮೆಂಟ್‌ನ ಭಾಗವಾಗಿ 2025ರ ಜೂನ್ 8ರಂದು ಹುಬ್ಬಳ್ಳಿಯ ಗಾಲ್ಫ್ ಲಿಂಕ್ ಕಾಲೋನಿಯಲ್ಲಿ “ಸೈಕಲ್ ಮೇಲೆ ಭಾನುವಾರ” ಎಂಬ ವಿಶೇಷ ಸೈಕ್ಲಾಥಾನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ಆರೋಗ್ಯಕೇಂದ್ರಿತ ಕಾರ್ಯಕ್ರಮದಲ್ಲಿ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನೂ ಗಳಿಸಿರುವ ನೈಋತ್ಯ ರೈಲ್ವೆಯ ಕ್ರೀಡಾಪಟುಗಳು ಮತ್ತು ವಿವಿಧ ವಿಭಾಗಗಳ ಕ್ರೀಡಾಪಟುಗಳು ಭಾಗವಹಿಸಿದರು. ಜೊತೆಗೆ ನೈಋತ್ಯ ರೈಲ್ವೆಯ 50 ಕ್ಕೂ ಹೆಚ್ಚು ಅಧಿಕಾರಿಗಳು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಫಿಟ್‌ನೆಸ್ ಹಾಗೂ ಸಕ್ರಿಯ ಜೀವನಶೈಲಿಯನ್ನ ಪ್ರದರ್ಶಿಸಿದರು. ಈ ಕಾರ್ಯಕ್ರಮದ ಉದ್ದೇಶ ರೈಲ್ವೆ ಸಿಬ್ಬಂದಿಯ ಶಾರೀರಿಕ ಕ್ಷೇಮ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು.

ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನೈಋತ್ಯ ರೈಲ್ವೆಯ ಕ್ರೀಡಾಪಟುಗಳ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಶ್ಲಾಘಿಸಿದರು. ದೈಹಿಕ ಆರೋಗ್ಯ ಮತ್ತು ಶಕ್ತಿಯ ಮಹತ್ವವನ್ನು ವೃತ್ತಿಪರ ಹಾಗೂ ವೈಯಕ್ತಿಕ ಜೀವನದಲ್ಲಿ ಎತ್ತಿ ತೋರಿದರು.

ಕ್ರೀಡಾ ಕ್ಷೇತ್ರದಲ್ಲಿ ನೈಋತ್ಯ ರೈಲ್ವೆಯ ಕ್ರೀಡಾಪಟುಗಳು ನೀಡುತ್ತಿರುವ ಅಪೂರ್ವ ಕೊಡುಗೆಯನ್ನು ಅವರು ಗುರುತಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ಈ ಇವೆಂಟ್ “ಫಿಟ್ ಇಂಡಿಯಾ” ದೃಷ್ಟಿಕೋನದತ್ತ ನೈಋತ್ಯ ರೈಲ್ವೆಯ ಬದ್ಧತೆಯನ್ನ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಸಂಘಟಿತ ಶಕ್ತಿ, ಒಗ್ಗಟ್ಟು ಮತ್ತು ಆರೋಗ್ಯಪೂರ್ಣ ಜೀವನ ಶೈಲಿಯ ಪ್ರೋತ್ಸಾಹಕವಾಗಿಯೂ ಕಾರ್ಯನಿರ್ವಹಿಸಿತು.

Related Articles

Comments (0)

Leave a Comment