
ಚಾಮರಾಜನಗರ: ಜಿಲ್ಲೆಯಲ್ಲಿ ಕೋರೊನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಸೋಂಕನ್ನು ನಿಯಂತ್ರಿಸಲು ಮಲೈಮಹದೇಶ್ವರ ಬೆಟ್ಟದಲ್ಲಿನ ಮಾದಪ್ಪನ ದರ್ಶನವನ್ನು ಮೂರು ದಿನ ಬಂದ್ ಮಾಡಲಾಗಿದೆ.
ಶ್ರಾವಣ ಮಾಸದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಮೂರು ದಿನಗಳಕಾಲ ಮಲೆ ಮಹದೇಶ್ವರ ದರ್ಶನ ಬಂದ್ ಮಾಡಲಾಗಿದ್ದು ಜುಲೈ 19, 20 ಹಾಗೂ 21ರಂದು ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶವಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ಆದೇಶ ಹೊರಡಿಸಿದ್ದಾರೆ.
ಸೋಮವಾರ ಶ್ರಾವಣ ಮಾಸದ ಅಮಾವಾಸ್ಯೆ ಎಣ್ಣೆ ಮಜ್ಜನ ಸೇವೆ ಹಿನ್ನಲೆಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಯಿಂದ ಭಕ್ತಾದಿಗಳ ದಂಡೇ ಹರಿದು ಬರುವ ಸಾಧ್ಯತೆ ಇದ್ದು, ಕೋರೋನಾ ಸೋಂಕು ನಿಯಂತ್ರಣ ಮಾಡಲು ಮುನ್ನೆಚ್ಚರಿಕೆಯಾಗಿ ಮಲೆ ಮಹದೇಶ್ವರ ದರ್ಶನ ಬಂದ್ ಮಾಡಲು ಮಲೆ ಮಹದೇಶ್ವರ ದೇವಸ್ಥಾನಗಳ ಅಭಿವೃದ್ದಿ ಪ್ರಾಧಿಕಾರಿ ಜಿಲ್ಲಾಡಳಿತಕ್ಕೆ ಕೋರಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
ಸೋಮವಾರ ಭೀಮನ ಅಮವಾಸೆಯೂ ಇರುವುದರಿಂದ ಮಹದೇಶ್ವರ ದರ್ಶನ ಪಡೆಯುವ ಅಪಾರ ಸಂಖ್ಯೆಯ ಭಕ್ತಿರಿಗೆ ನಿರಾಸೆಯನ್ನುಂಟು ಮಾಡಿದಂತ್ತಾಗಿದೆ.
Related Articles
Thank you for your comment. It is awaiting moderation.
Comments (0)