
ಮೈಸೂರು:ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರು ಅಶೋಕಪುರಂ ರೈಲ್ವೆ ಕಾರ್ಯಾಗಾರವನ್ನು ಪರಿಶೀಲನೆ ನಡೆಸಿದರು. ಈ ವೇಳೆ ಅವರು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಕಾರ್ಯಾಗಾರದ ಮುಖ್ಯ ವ್ಯವಸ್ಥಾಪಕ ವಿ.ಕೆ. ಚಾಡ, ಮುಖ್ಯ ಯಾಂತ್ರಿಕ ಇಂಜಿನಿಯರ್ ಉಮೇಶ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶೀಲನೆ ವೇಳೆ, ಮುಂಬರುವ ಕಾಮಗಾರಿಗಳ ಪ್ರಗತಿಯನ್ನು ಅವರು ಪರಿಶೀಲಿಸಿದರು ಮತ್ತು ಭವಿಷ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಅವರು ಕಾರ್ಯಾಗಾರದ ನೌಕರರೊಂದಿಗೆ ಸಂವಾದ ನಡೆಸಿ, ಕಾರ್ಯಕ್ಷಮತೆ, ಆದಾಯ ಮತ್ತು ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದರು.
ಹೊಸದಾಗಿ ಪರಿಚಯಿಸಲಾದ ಟ್ರೈನ್ ಬಸ್ಗೆ ಹಸಿರು ನಿಶಾನೆಯನ್ನು ಮಾಥುರ್ ಅವರು ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿ ವರ್ಗ ಹಾಗೂ ನೌಕರರು ಉಪಸ್ಥಿತರಿದ್ದರು .
ಮುಕುಲ್ ಸರನ್ ಮಾಥುರ್ ಅವರು ಸಿಬ್ಬಂದಿಯ ಬದ್ಧತೆ ಹಾಗೂ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು ಮತ್ತು ತಾಂತ್ರಿಕ ಅಭಿವೃದ್ಧಿ, ನೈಪುಣ್ಯವರ್ಧನೆ ಹಾಗೂ ತಂಡದ ಮನೋಭಾವದ ಮಹತ್ವವನ್ನು ಒತ್ತಿ ಹೇಳಿದರು./ಈ ಭೇಟಿಯಲ್ಲಿ ನೈಋತ್ಯ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿ, ನೌಕರರ ಸಂಪರ್ಕ ಹಾಗೂ ಕಾರ್ಯಕ್ಷಮತೆಯ ಬಗ್ಗೆ ತಿಳಿಸಿದರು.
Related Articles
Thank you for your comment. It is awaiting moderation.
Comments (0)