ಸರ್ಜಾಪುರ ಕೆರೆ ಉಳಿಸುವಂತೆ ಸ್ಥಳೀಯರಿಂದ ಮಾನವ ಸರಪಳಿ ನಿರ್ಮಾಣ!

ಬೆಂಗಳೂರು: ಆನೇಕಲ್ ತಾಲೂಕಿನ ಸರ್ಜಾಪುರ ಡೊಡ್ಡಕೆರೆಯಲ್ಲಿ ಹೆಗ್ಗಿಲ್ಲದೆ ನಡೆಯುತ್ತಿರುವ ಫಿಲ್ಟರ್ ಮರಳು ಧಂದೆಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು. ವಾಯ್ಸ್ ಆಫ್ ಸಂಘಟನೆ ವತಿಯಿಂದ ವಿವಿಧ ಪ್ರಗತಿಪರ ಒಕ್ಕೂಟಗಳು ಸೇರಿ ಸರ್ಜಾಪುರದಿಂದ ದೊಡ್ಡಕೆರೆವರಗೂ ಪ್ರತಿಭಟನೆ ಮೆರವಣಿಗೆ ಮೂಲಕ ಸಾಗಿ ಅಕ್ರಮ ಮರಳು ಸಾಗಾಣೆ ತಡೆಯುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಸುಮಾರು ೧೦ ವರ್ಷಗಳಿಂದ ಮರಳು ದಂದೆಕೋರರು ಮಣ್ಣಿನಲ್ಲಿ ಪಿಲ್ಟರ್ ಮರಳನ್ನು ತಯಾರಿಸಿ ಹೊರ ರಾಜ್ಯಗಳಿಗೆ ಮಾರಟ ಮಾಡುತಿದ್ದಾರೆ. ಅದು ಮಾತ್ರವಲ್ಲದೇ ಅಕ್ಕಪಕ್ಕದ ಇಟ್ಟಿಗೆ ಕಾರ್ಖಾನೆ ಗಳಿಗೆ ಮಣ್ಣಿನ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಹಣ ಪಡೆದು ಮಣ್ಣನ್ನು ಮಾರಾಟ ಮಾಡಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಲಾಭ ಮಾಡಿದ್ದಾರೆ, ಹೀಗಾಗಿ ಸರ್ಜಾಪುರದ ಡೊಡ್ಡಕರೆಯನ್ನ ಉಳಿಸಿಂತೆ ವಾಯ್ಸ್ ಆಪ್ ಸರ್ಜಾಪುರ ಅಭಿಯಾನದಡಿ ಇಂದು‌ ಡೊಡ್ಡಕೆರೆ ಉಳಿಸುವಂತೆ ಬೀದಿಗಿಳಿದು ಹೋರಾಟ ನಡೆಸಿಲಾಯಿತು.

ಸರ್ಜಾಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಸಿ ಡೊಡ್ಡ ಕೆರೆವರಗೂ ಜಾಥ್ ಕೈಗೊಂಡಿದ್ದರು. ಡೊಡ್ಡಕರೆಯಲ್ಲಿ ಸುಮಾರು 50 ಎಕರೆ ಜಾಗದಲ್ಲಿ 40 ರಿಂದ 50 ಅಡಿಗಳಷ್ಟು ಆಳ ತೆಗೆದು ದಂದೆಕೋರರು ಕೆರೆಯನ್ನ ಸಂಪೂರ್ಣ ಹಾಳು ಮಾಡಿದ್ದಾರೆ. ಇದರ ಜೊತೆಗೆ ಕರೆಯ ಮಣ್ಣಿನಲ್ಲಿರುವ ಬಾಕ್ಸಯಿಟ್ (ಅದಿರು) ನ್ನು ಬೇರ್ಪಡಿಸಿ ಮಾರಾಟ ಮಾಡುತಿದ್ದರು ಅದರ ಜತಗೆ ಸುಣ್ಣದ ಕಲ್ಲನ್ನು ಬೇರ್ಪಡಿಸಿ ಹೊರ ರಾಜ್ಯಗಳಿಗೆ ರಪ್ತು ಮಾಡುತಿದ್ದರು. ಸರ್ಜಾಪುರದ ಪ್ರಭಾವಿಗಳು ಈ ಧಂಧೆಯಲ್ಲಿ ಶಾಮಲಾಗಿಗಿದ್ದಾರೆ. ಇಡೀ ಕೆರೆಯ ಚಿತ್ರಣವನ್ನ ಬದಲಾವಣೆ ಮಾಡಿದ್ದಾರೆ. ಈ ಎಲ್ಲಾ ಅಕ್ರಮ ಗಳು ಗೊತ್ತಿದ್ದರು ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಪಿಲ್ಟರ್ ಮರಳು ದಂಧೆಗೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ. ಹೀಗಾಗಿ ಕರೆಯನ್ನ ಉಳಿಸಬೇಂಕೆದು ಬೀದಿಗಿಳಿದು ನಾವು ಹೋರಾಟ ವನ್ನ ಕೈಗೊಳ್ಳಬೇಕಾಯಿತು ಎಂದು ಸ್ಥಳಿಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಹಣದ ಆಸೆಗೆ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನ ಬಗೆಯುತ್ತಿರುವ ದಂಧೆಕೋರರು ಲೂಟಿ ಮಾಡುವ ಮೂಲಕ ಹಲವು ಕೆರೆಗಳ ವಿನಾಶಕ್ಕೆ ಕಾರಣವಾಗಿದ್ದಾರೆ. ಇನ್ನಾದರೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಮಣ್ಣು ಲೂಟಿಕೋರರಿಗೆ ತಕ್ಕ ಪಾಠ ಕಲಿಸುವ ಜೊತೆಗೆ ಹಾಳದ ಕೆರೆಗಳನ್ನ ಉಳಿಸ ಬೇಕಿದೆ.

Related Articles

Comments (0)

Leave a Comment