ಕರೊನಾ ಮಹಾಮಾರಿ ವಿರುದ್ದ ಹೋರಾಡಿ ಗೆದ್ದ ರಾಜ್ಯದ ಮೊದಲ ಶತಾಯುಷಿ ಅಜ್ಜಿ

ಬಳ್ಳಾರಿ: ಇಷ್ಟು ದಿನ 50-60 ವರ್ಷವಾದ ವೃದ್ದರಿಗೆ ಕೊರೋನಾ ಬಂದ್ರೆ ಬದುಕಲ್ಲ ಅನ್ನೂ ಮಾತಿತ್ತು. ಆದ್ರೆ, ಇದೀಗ ಶತಾಯುಷಿ ಅಜ್ಜಿಯೊಬ್ರು ಸುಳ್ಳು ಮಾಡಿ ತೋರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ 100 ವರ್ಷದ ಹಾಲಮ್ಮ ಕೊರೋನಾ ಬಂದ ನಂತರವೂ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಮನೆಯಲ್ಲಿ ಮಗನಿಗೆ ಕರೊನಾ ಬಂದಿದ್ದ ಹಿನ್ನಲೆ ಹಾಲಮ್ಮ ಅವರಿಗೂ ಟೆಸ್ಟ್ ಮಾಡಲಾಗಿದೆ. ಆಗ ಕೊರೋನಾ ಸೊಂಕಿರುವುದು ದೃಢ ಪಟ್ಟಿತ್ತು.
ಹೀಗೆ ಸೊಂಕು ದೃಢಪಟ್ಟ ನಂತರ ವೈದ್ಯರ ಸಲಹೆಯಂತೆ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲ ಅಜ್ಜಿ ಜೊತೆ ಮನೆಯಲ್ಲಿದ್ದ ನಾಲ್ವರು ಕೂಡ ಕರೊನಾದಿಂದ ಗುಣಮುಖರಾಗಿದ್ದಾರೆ.

ಶತಾಯುಷಿ ಅಜ್ಜಿ ಯಶಸ್ವಿಯಾಗಿ ಗುಣಮುಖರಾದ ಹಿನ್ನೆಲೆ ಬಳ್ಳಾರಿ ಆರೋಗ್ಯ ಇಲಾಖೆಗೆ ಪ್ರಶಂಸೆಯ ಗರಿ ಮೂಡಿದೆ.

Related Articles

Comments (0)

Leave a Comment