
ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಇದರಿಂದ ತಾಲ್ಲೂಕಿನ ಕುಸುಗಲ್ ಗ್ರಾಮದ ರೈತರು ಬೇಸತ್ತು ಹೋಗಿದ್ದಾರೆ. ಹುಬ್ಬಳ್ಳಿಯಿಂದ ಹಳ್ಳಿಗೆ ಹಂದಿ ಮಾಲೀಕರು ಹಂದಿಗಳನ್ನು ತಂದು ಬಿಡುತ್ತಿದ್ದು, ರೈತರು ಹಾಗೂ ಗ್ರಾಮಸ್ಥರು ದಿನವಿಡೀ ಹಂದಿಗಳನ್ನು ಕಾಯುವದರಲ್ಲೇ ಕಾಲ ಕಳೆಯುವ ಸ್ಥಿತಿ ಬಂದಿದೆ.
ಈ ಹಿಂದೆಯೂ ಹಂದಿಗಳು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿದ್ದವು, ಈ ಕುರಿತು ರೈತರು ಹಾಗೂ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರು ಸಹ ಪ್ರಯೋಜನವಾಗಿಲ್ಲ, ಈಗ ಮುಂಗಾರು ಬಿತ್ತನೆಗೆ ಸಿದ್ದತೆ’ ನಡೆಸಿದ ರೈತರಿಗೆ ಮತ್ತೇ ಗುಂಪು ಗುಂಪಾಗಿ ಹಂದಿಗಳು ಆಗಮಸಿ ಹೊಲದಲ್ಲಿ ಬಿತ್ತಿರುವ ಹತ್ತಿ ಹಾಗೂ ಹೆಸರನ್ನು ತಿಂದು ಹಾಳು ಮಾಡುತ್ತಿವೆ.
ಅಲ್ಲದೇ ಗ್ರಾಮದಲ್ಲಿ ಹಂದಿಗಳು ದಾಂಗುಡಿಯಿಟ್ಟು ಗಲೀಜು ಮಾಡುತ್ತಿದ್ದು ಕೋರೊನಾ ನಡುವೆಯೂ ಇನ್ನಿತರ ರೋಗ ಹರಡುವ ಭೀತಿ ಎದುರಾಗಿದೆ. ಕೂಡಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಹಂದಿಗಳ ಕಾಟಕ್ಕೆ ನಿಯಂತ್ರಣ ಹಾಕಬೇಕು ಎಂದು ರೈತರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Related Articles
Thank you for your comment. It is awaiting moderation.
Comments (0)