ಕೊರೋನಾದಿಂದ ಕೈಗಾರಿಕಾ ಕ್ಷೇತ್ರದಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಾನಿಯಾಗಿದೆ: ಶೆಟ್ಟರ್
- by Suddi Team
- July 17, 2020
- 12 Views

ಬಾಗಲಕೋಟೆ: ಕರೊನಾದಿಂದ ರಾಜ್ಯದ ಕೈಗಾರಿಕಾ ವಲಯದಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಾನಿ ಆಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತಾನಾಡಿದ ಅವ್ರು ಕರೊನಾದಿಂದ ಸಾಕಷ್ಟು ಜನರು ನಿರುದ್ಯೋಗಿಗಳು ಆಗಿದ್ದಾರೆ. ಸ್ಕಿಲ್ ಲೇಬರ್ ಸಮಸ್ಯೆ ಜಾಸ್ತಿಯಾಗಿದೆ.
ಕನ್ಸ್ಟ್ರಕ್ಷನ್ ವರ್ಕ್ ಗೆ ಬಹಳಷ್ಟು ಸಮಸ್ಯೆ ಆಗಿದೆ. ಲಕ್ಷಾಂತರ ಕೋಟಿ ರೂ.ಹಾನಿಯಾಗಿದೆ. ಆದರೆ, ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಸಹಕಾರಿ ಆಗಿದೆ. ಪ್ಯಾಕೇಜ್ ನಲ್ಲಿ 3 ಲಕ್ಷ ಕೋಟಿ ರೂ. ಕೈಗಾರಿಕೆಗಳಿಗೆ ಕೊಟ್ಟಿದ್ದಾರೆ. ಸದ್ಯ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ಸಿಗುತ್ತಿದೆ. ವರ್ಕಿಂಗ್ ಕ್ಯಾಪಿಟಲ್ ಗೆ ಹಣ ಸಿಗುತ್ತಿದೆ. ರಾಜ್ಯ ಸರ್ಕಾರವೂ ವಿದ್ಯುತ್ ನ ಮಿನಿಮಮ್ ಬಿಲ್ ವಿನಾಯಿತಿ ಕೊಟ್ಟಿದ್ದೇವೆ. ಈಗ ಕೈಗಾರಿಕೆಗಳು ಮತ್ತೆ ಸಹಜ ಸ್ಥಿತಿಗೆ ಬರುವ ಹಂತದಲ್ಲಿವೆ ಎಂದು ಹೇಳಿದರು.
ಇನ್ನೂ ಕರೊನಾ ವಿಚಾರವಾಗಿ ಸಚಿವ ಶ್ರೀರಾಮುಲು ಹೇಳಿಕೆ ಮುಗಿದ ಅಧ್ಯಾಯ. ಅದಕ್ಕೆ ಅವರೇ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಅದು ಸಹಜವಾದ ಹೇಳಿಕೆ ಅಷ್ಟೆ. ಅಸಹಾಯಕತೆ ಅಲ್ಲ. ಕೊರೊನಾ ನಿಯಂತ್ರಣಕ್ಕೆ ಜನರು ಸಹಕಾರ ಕೊಡಬೇಕು. ಕೊರೋನಾ ಬಗ್ಗೆ ಹೈಪ್ ಕ್ರಿಯೇಟ್ ಆಗಿದೆ. ಕೊರೋನಾದಿಂದ ಸತ್ತವರ ಪೈಕಿ ಶೇ.75 ಜನರಿಗೆ ಬೇರೆ ಬೇರೆ ಕಾಯಿಲೆ ಇದೆ. 25 ರಷ್ಟು ಜನರು ಮಾತ್ರ ಕರೊನಾದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೋನಾದಿಂದ ಗುಣಮುಖರಾದವರು ಸರಾಸರಿ 63 ಪರ್ಸಂಟ್ ಇದೆ. ಹೀಗಾಗಿ ಹೆದರುವ ಪ್ರಶ್ನೆ ಇಲ್ಲ.
ಆದ್ರೆ, ಎಚ್ಚರದಿಂದ ಇರಬೇಕು, ಭಯ-ಭೀತಿ ಪಡಬಾರದು ಎಂದು ಜನರಿಗೆ ಮನವಿ ಮಾಡಿಕೊಂಡ್ರು.
Related Articles
Thank you for your comment. It is awaiting moderation.
Comments (0)