ಡಿಜಿಟಲ್ ತಂತ್ರಜ್ಞಾನದ ಮೂಲಕ ಸರ್ಕಾರದ ಸಾಧನೆ ಪ್ರಚುರಪಡಿಸಲು ನೂತನ ಸಂಕಲ್ಪ: ಡಾ. ಪಿ.ಎಸ್.ಹರ್ಷ

ಮೈಸೂರು, ಜನವರಿ 8: ಡಿಜಿಟಲ್ ಕ್ಷೇತ್ರವನ್ನು ವಿನೂತನವಾಗಿ ಬಳಸಿಕೊಂಡು ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಲು ಜಿಲ್ಲಾ ವಾರ್ತಾ ಕಚೇರಿಗಳು ಸಜ್ಜಾಗಬೇಕು ಎಂದು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ. ಪಿ.ಎಸ್.ಹರ್ಷ ಹೇಳಿದರು.

ಶುಕ್ರವಾರ ಮೈಸೂರಿನಲ್ಲಿ ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ವಾರ್ತ ಇಲಾಖೆಯಿಂದ ನಿರಂತರವಾಗಿ ಕ್ಷಣ ಕ್ಷಣದ ಸುದ್ದಿಗಳು ಪ್ರಕಟವಾಗುವಂತೆ ಜಿಲ್ಲಾ ಕಚೇರಿಗಳು ಬಲವರ್ಧನೆ ಆಗಬೇಕು. ಅದಕ್ಕೆ ಬೇಕಾದ ನೆರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಕಡಿಮೆ ಸಂಖ್ಯೆಯ ನೌಕರರನ್ನು ಹೊಂದಿರುವ ಇಲಾಖೆಯಲ್ಲಿ ನೌಕರರ ನಡುವೆ ಮಾನವೀಯ ಸಂಬಂಧ ಸರಿಇರಬೇಕು. ಎಲ್ಲರಲ್ಲೂ ಒಂದು ತಂಡವಾಗಿ ಕೆಲಸ ಮಾಡುವ ಮನೋಭಾವ ಕಟ್ಟೋಣ ಎಂದು ಹೇಳಿದರು.

ಅಧಿಕಾರಿಗಳು ಮತ್ತು ನೌಕರರಲ್ಲಿ ವೃತ್ತಿಪರತೆ ಬೆಳಸಿಕೊಳ್ಳಬೇಕು. ಇದಕ್ಕಾಗಿ ತರಬೇತಿ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ಪೊಲೀಸ್ ಡ್ಯೂಟಿ ಮೀಟ್ ಮಾದರಿಯಲ್ಲಿ ವಾರ್ತಾ ಇಲಾಖೆಯಲ್ಲಿ ಕುಟುಂಬದ ಸದಸ್ಯರೂ ಸೇರಿದಂತೆ ವರ್ಷದಲ್ಲಿ ಒಮ್ಮೆ ಎಲ್ಲರೂ ಸೇರಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಆಯೋಜಿಸುವ ಬಗ್ಗೆ ಆಲೋಚಿಸಲಾಗಿದೆ ಎಂದರು.

ಸಭೆಯಲ್ಲಿ ಉಪ ನಿರ್ದೇಶಕರಾದ ವಿನೋದ್ ಚಂದ್ರ, ಸಿ.ಆರ್. ನವೀನ್, ಸಹಾಯಕ ನಿರ್ದೇಶಕರಾದ ಆರ್. ರಾಜು, ಜೆ. ಮಂಜೇಗೌಡ, ಟಿ.ಕೆ. ಹರೀಶ್, ರಮೇಶ್, ಚಿನ್ನಸ್ವಾಮಿ, ಮಂಜುನಾಥ್, ವಿಷ್ಣುವರ್ಧನ್ ಪ್ರತಿಷ್ಠಾನದ ಕಾರ್ಯದರ್ಶಿ ವಿಜಯಾನಂದ ಮತ್ತಿತರರು ಉಪಸ್ಥಿತರಿದ್ದರು.

Related Articles

Comments (0)

Leave a Comment