ಹಾಸನ ಅಭಿವೃದ್ದಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ

ಹಾಸನ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯಲ್ಲಿ ಹೊಸ ಅಭಿವೃದ್ಧಿ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

ಮಾಜಿ ಪ್ರಧಾನಿ ಹಾಲಿ ಲೋಕಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡ ,ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ ರೇವಣ್ಣ, ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್, ಜಿಲ್ಲೆಯ ಶಾಸಕರು ಹಾಗೂ ವಿವಿಧ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳು ಉಪಸ್ಥಿತಿಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಹೇಮಾವತಿ ಹಾಗೂ ಯಗಚಿ ಜಲಾಶಯಗಳ ಕೆಳಭಾಗ ಉದ್ಯಾನ ಅಭಿವೃದ್ಧಿಗೆ ಆಲಂಕಾರಿಕ ಕಾಮಗಾರಿಗಳ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕ ಏರ್ಪಡಿಸಲಾಗಿತ್ತು.ಈಗಿನ ಯೋಜಿತ ನೀಲ ನಕಾಶೆ ಪರಶೀಲಿಸಿ, ವಿವರ ಪಡೆದ ಮುಖ್ಯ ಮಂತ್ರಿಯವರು ಗೊರೂರು ಹಾಗೂ ಯಗಚಿಗಳಲ್ಲಿ ಜಲ ಸಾಹಸ ಮನರಜನೆಗಳು, ಕ್ರೀಡೆಗಳ ಜೊತೆಗೆ, ಜಿಲ್ಲೆಯ ಸಾಂಸ್ಕೃತಿಕ, ಐತಿಹಾಸಿಕ, ಪ್ರಕೃತಿಕ ಹಿನ್ನಲೆಯಲ್ಲಿ ದೇಶದಲ್ಲೇ ವಿನೂತನವಾದ ಉದ್ಯಾನವನಳನ್ನು ಸೃಷ್ಠಿ ಮಾಡಲು ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿ ಅವರು ಸೂಚಿಸಿದರು.

ಹಾಸನ ನಗರದ ಚನ್ನಪಟಣ್ಣ ಕೆರೆ ಶ್ರೀಘದಲ್ಲಿ ಕಾಮಗಾರಿ ಪ್ರಾರಂಭಕ್ಕೆ ಅಂಗಳದಲ್ಲಿ ವಿಹಾರಧಾಮದ ಅಭಿವೃದ್ದಿಗೆ ಈಗಾಗಲೇ ಬಜೆಟ್‍ಗನಲ್ಲಿ ಅನುದಾನ ಕಾಯ್ದಿಸಿದ್ದಾಗಿ ಅನುಮೋದನೆ ಒದಗಿಸುವುದು ಎಂದು ಮುಖ್ಯಮಂತ್ರಿ ಹೇಳಿದರು.

ಹೊಳೆನರಸೀಪುರ ನಗರದ ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಪಿ.ಎನ್.ಸಿ. ಸೇತುವೆ ಮುಖೇನ ಹೋಗುವ ರಸ್ತೆಯ ಅಭಿವೃದ್ದಿಗೆ ಸುಮಾರು 9 ವರ್ಷಗಳಿಂದ ರೈತರ ಜಮೀನುಗಳಿಗೆ ಭೂ ಪರಿಹಾರದ ಹಣದ ಆಕ್ಷೇಪಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಾಸನ ಜಿಲ್ಲೆಯಲ್ಲಿ ಬೇಲೂರು ಮತ್ತು ಹಳೇಬೀಡಿನಲ್ಲಿ ಖಾಲಿ ಇರುವ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕುರಿತು ಬೆಮಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಯಿತು.

ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಹಾಸನ ನಗರದ ಹೆಚ್.ಡಿ ದೇವೇಗೌಡ ನಗರ ಮತ್ತು ಎಸ್.ಎಂ ಕೃಷ್ಣ ನಗರದ ಮಧ್ಯ ಭಾಗದಲ್ಲಿ ಖಾಲಿಯಿರುವ 7 ಎಕರೆ 20 ಗುಂಟೆ ಜಮೀನಿನಲ್ಲಿ ಮತ್ತು ಎಸ್.ಎಂ ಕೃಷ್ಣ ನಗರದಲ್ಲಿ ಖಾಲಿಯಿರುವ ಜಾಗದಲ್ಲಿ ನಿವೇಶನಗಳನ್ನು ವಿತರಿಸುವ ಬಗ್ಗೆ ಮತ್ತು ಮನೆಗಳನ್ನು ನಿರ್ಮಿಸುವ ಬಗ್ಗೆ ಹಾಗೂ ಕಾರ್ಮಿಕರಿಗೆ ಹಾಸನ ನಗರದ ಮೋಚಿ ಕಾಲೋನಿ, ಮೆಹಬೂಬ್ ನಗರ, ಚಿಕ್ಕನಾಳು, ಟಿಪ್ಪುನಗರ, ಸಿದ್ಧಯ್ಯ ನಗರ, ಶ್ರೀನಗರ, ವಿಶ್ವನಾಥ ನಗರ, ದೇವಿನಗರ, ರಂಗೋಲಿ ಹಳ್ಳ, ರಾಜಕುಮಾರ್ ನಗರ ಹಾಗೂ ಚಿಪ್ಪಿನಕಟ್ಟೆ ಬಡಾವಣೆಗಳಲ್ಲಿ ಬಡವರು ಹಲವಾರು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅವರಿಗೆ ನಿವೇಶನ ಮಂಜೂರು ಮಾಡುವ ಬಗ್ಗೆ ಹಾಗೂ ಹಾಸನ ನಗರದಲ್ಲಿ ಬಡವರಿಗೆ ನಿವೇಶನ ರಚಿಸಲು ಅವಶ್ಯಕ ಜಮೀನುಗಳನ್ನು ಖರೀದಿಸಲು ಕುರಿತು ಯೋಜನೆಗಳನ್ನು ವಿವರಿಸಿದರು,

ವಸತಿಹೀನರಿಗೆ ಶೀಘ್ರ ನಿವೇಶನ ಒದಗಿಸಲು ಸಹಕಾರ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದರು. ಹಾಸನ ನಗರದ ಗಾಡೇನಹಳ್ಳಿ ಸಮೀಪ ಉದ್ದೇಶಿತ ಬಂಧಿಖಾನೆ ನಿರ್ಮಾಣದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

Related Articles

Comments (0)

Leave a Comment