ಲಾಕ್ ಡೌನ್ ನಡುವೆಯೂ ರೈತರ ಸಾಲ ಮರುಪಾವತಿಗೆ ಬ್ಯಾಂಕ್ ನೋಟೀಸ್!
- by Suddi Team
- June 6, 2020
- 20 Views

ಚಿತ್ರದುರ್ಗ: ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ದೇಶವೇ ತತ್ತರಿಸಿದೆ, ಆರ್ಥಿಕ ವಹಿವಾಟು ಇಲ್ಲದೇ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ, ರೈತರು ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ಕಂಗಾಲಾಗಿದ್ದಾರೆ, ಇಂತಹ ಸಂದರ್ಭದಲ್ಲಿ ಅನ್ನದಾತರಿಗೆ ಬ್ಯಾಂಕ್ ಶಾಕ್ ಕೊಟ್ಟಿದೆ.. ಕೇಂದ್ರ ಸರ್ಕಾರದ ಆದೇಶವನ್ನೂ ಕಡೆಗಣಿಸಿರುವ ಬ್ಯಾಂಕ್ ರೈತರಿಗೆ ನೋಟೀಸ್ ಜಾರಿ ಮಾಡಿದ್ದು ರೈತರು ಕಂಗಾಲಾಗಿದ್ದಾರೆ..
ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಮ್ಯಾನೇಜರ್ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ವಕೀಲರ ಮೂಲಕ ನೋಟೀಸ್ ಜಾರಿ ಮಾಡಿದ್ದು, ಒಂದು ವಾರದ ಒಳಗೆ ಸಾಲ ಮರುಪಾವತಿ ಮಾಡದಿದ್ದರೆ ನ್ಯಾಯಾಲಯದಲ್ಲಿ ದಾವೆ ಹಾಕುವ ಬೆದರಿಕೆಯೊಡ್ಡಿದ್ದಾರೆ, ಲಾಕ್ ಡೌನ್ ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಪರಿಣಾಮ ಆರ್.ಬಿ.ಐ ಎಲ್ಲಾ ರೀತಿಯ ಸಾಲ ಮರುಪಾತಿಗಳನ್ನು ಮೂರು ತಿಂಗಳು ಮುಂದೂಡಿದೆ, ಆದರೆ ಬ್ಯಾಂಕ್ ನವರು ಅತಿಯಾದ ಬುದ್ದಿ ಉಪಯೋಗಿಸಿ ಲಾಕ್ ಡೌನ್ ಗೂ ಹಿಂದಿನ ದಿನಾಂಕ ನಮೂದಿಸಿ ಮೂರು ದಿನಗಳ ಹಿಂದೆ ರೈತರಿಗೆ ನೋಟೀಸ್ ಕಳುಹಿಸಿದೆ, ಬ್ಯಾಂಕ್ ನೋಟೀಸ್ ಕಂಡು ಕಂಗಾಲಾಗಿರುವ ರೈತರು ನಾವು ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿ ಏನಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ..
ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆ ಬೆಳೆ ಇಲ್ಲದೆ ರೈತರು ಸಾಲದ ಸುಳಿಗೆ ಸಿಲುಕಿದ್ರು, ಕಳೆದ ಸೆಪ್ಟೆಂಬರ್ ನಲ್ಲಿ ಒಳ್ಳೆಯ ಮಳೆ ಆಗಿದ್ರಿಂದ ರೈತರು ಒಳ್ಳೆ ಫಸಲು ಬೆಳೆದಿದ್ರು, ಆದರೆ ಕೊರೊನಾ ಮಹಾಮಾರಿ ಭೀತಿಯಿಂದ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ, ಬೆಳೆದ ಬೆಳೆಗೂ ನಿರೀಕ್ಷಿಸಿದಷ್ಟು ಬೆಲೆ ಸಿಗದ ಕಾರಣ ರೈತರು ಮತ್ತಷ್ಟು ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ ಸಾಲ ಮರುಪಾವತಿಸಲು ಸರ್ಕಾರ ನಮಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ..
Related Articles
Thank you for your comment. It is awaiting moderation.
Comments (0)