ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಸ್ಥಳಾಂತರಕ್ಕೆ ಮುಂದಾಯ್ತಾ ಸರ್ಕಾರ?

ಬೆಂಗಳೂರು:ಆರ್.ಸಿ.ಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಒ್ರಕರಣದ ಹಿನ್ನಲೆಯಲ್ಲಿ ತೀವ್ರ ಮುಜಿಗರಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಕ್ರೀಡಾಂಗಣವನ್ನೇ ಸ್ಥಳಾಂತರ ಮಾಡುವ ಚಿಂತನೆಗೆ ಮುಂದಾಗಿದೆ,ಇದಕ್ಕೆ ಮುಖ್ಯಮಂತ್ರಿ ಸಿದ್ಸರಾಮಯ್ಯ ಅವರ ಇಂದಿನ ಹೇಳಿಕೆಯೇ ನಿದರ್ಶನವಾಗಿದೆ. ಹಿಂದೆ ರೇಸ್ ಕೋರ್ಸ್ ಸ್ಥಳಾಂತರಕ್ಕೆ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿತ್ತು ಈಗ ಕ್ರಿಕೆಟ್ ಸ್ಟೇಡಿಯಂ ಕಡೆ ಕೈ ಸರ್ಕಾರದ ದೃಷ್ಟಿ ನೆಟ್ಟಿದೆ.

ಕಡಿಮೆ ಸಾರ್ಮಥ್ಯವಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ಇರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಕಡಿಮೆ ಸಾರ್ಮಥ್ಯವಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಗಮನಹರಿಸಿದೆಯೇ ಎಂಬ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ , ಈ ವಿಷಯವನ್ನು ಸರ್ಕಾರ ಪರಿಶೀಲಿಸಲಿದೆ. ಯಾವ ಸರ್ಕಾರದ ಅವಧಿಯಲ್ಲಿಯೂ ಇಂತಹ ಅಹಿತಕರ ಘಟನೆ ನಡೆಯಬಾರದು. ವೈಯಕ್ತಿಕವಾಗಿ ಈ ಘಟನೆ ಸರ್ಕಾರಕ್ಕೆ ನೋವು ತಂದಿದೆ ಹಾಗಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

1999 ರಲ್ಲಿ ಎಸ್.ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೇಳೆ ನಗರದ ಹೃದಯಭಾಗದಲ್ಲಿರುವ ರೇಸ್ ಕೋರ್ಸ್ ಸ್ಥಳಾಂತರದ ಯತ್ನ ನಡೆಸಲಾಗಿತ್ತು ಆದರೆ ಆಗಲಿಲ್ಲ,‌2009,2018,2022 ರಲ್ಲಿಯೂ ಇದೇ ರೀತಿಯ ಸ್ಥಳಾಂತರದ ಹೇಳಿಕೆಗಳು ಕೇಳಿ ಬಂದವಾದರೂ ರೇಸ್ ಕೋರ್ಸ್ ಸ್ಥಳಾಂತರ ಮಾಡುವ ಪ್ರಯತ್ನಕ್ಕೆ ಚಾಲನೆ ಸಿಕ್ಕೇ ಇಲ್ಲ, ಇದೀಗ ಮತ್ತೊಂದು ಪ್ರಮುಖವಾದ ಸ್ಥಳವಾಗಿರುವ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ‌ ಸ್ಥಳಾಂತರದ‌ ಚಿಂತನೆಗೆ ಸರ್ಕಾರ ಮುಂದಾಗಿದೆ, ಕೇವಲ ಕಾಲ್ತುಳಿತ ಪ್ರಕರಣವನ್ನಿಟ್ಟುಕೊಂಡು ಯಾವ ರೀತಿ ಸರ್ಕಾರ ಸ್ಟೇಡಿಯಂ‌ ಸ್ಥಳಾಂತರಕ್ಕೆ ಮುಂದಾಗುತ್ತದೆ ಎಂದು ನೋಡಬೇಕಿದೆ.

Related Articles

Comments (0)

Leave a Comment