ಗಾಲ್ಫ್ ಕೋರ್ಸ್ ಸ್ಥಳಾಂತರಕ್ಕೆ ಕೈ ಹಾಕುತ್ತಾ ಮೈತ್ರಿ ಸರಕಾರ?
- by Suddi Team
- July 14, 2018
- 130 Views

ಬೆಂಗಳೂರು:ನಗರದ ಹೃದಯ ಭಾಗದಲ್ಲಿರುವ ಗಾಲ್ಫ್ ಕೋರ್ಸ್ ಅನ್ನು ಸ್ಥಳಾಂತರ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.ಹಿಂದೆ ರೇಸ್ ಕೋರ್ಸ್ ಸ್ಥಳಾಂತರದ ವಿಫಲ ಪ್ರಯತ್ನ ನಡೆದಿತ್ತು.ಇದೀಗ ಗಾಲ್ಫ್ ಕೋರ್ಸ್ ಸರದಿ.
ಕುಮಾರ ಪಾರ್ಕ್ ವ್ಯಾಪ್ತಿಯಲ್ಲಿರುವ ಗಾಲ್ಫ್ ಕೋರ್ಸ್ ಗೆ ಇದೀಗ ಸ್ಥಳಾಂತದ ಭೀತಿ ಎದುರಾಗಿದೆ.ಯಾವುದೋ ಅವ್ಯವಹಾರ ಅಥವಾ ಸ್ಥಳೀಯರಿಗೆ ತೊಂದರೆ ಆರೋಪಕ್ಕೆ ಈ ಭೀತಿ ಎದುರಿಸ್ತಾ ಇಲ್ಲ,ಗಾಲ್ಫ್ ಚಂಡು ಸಿಎಂ ಕಚೇರಿ ಆವರಣಕ್ಕೆ ಬಂದು ಬಿತ್ತು ಎನ್ನುವ ಕಾರಣಕ್ಕೆ ನಗರದ ಹೊವಲಯಕ್ಕೆ ಸ್ಥಳಾಂತರಗೊಳ್ಳುವ ಆತಂಕ ಎದುರಿಸ್ತಾ ಇದೆ.
ಗಾಲ್ಫ್ ಚೆಂಡು ಕೃಷ್ಣಾ ಅಂಗಳಕ್ಕೆ ಬಿದ್ದ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಡಾ. ಜಿ ಪರಮೇಶ್ವರ್, ಗಾಲ್ಫ್ ಕಲ್ಬ್ ಮುಖ್ಯಸ್ಥರ ಜೊತೆ ಚರ್ಚೆ ಮಾಡ್ತೇವೆ ಗಾಲ್ಫ್ ಮೈದಾನದ ಸುತ್ತ ಇರುವ ರಕ್ಷಣಾ ಬಲೆ ಎತ್ತಿರಿಸಬಹುದಾ ಎಂದು ಮಾತುಕತೆ ನಡೆಸುತ್ತೇವೆ. ಸಾಧ್ಯವಾದರೆ ಗಾಲ್ಫ್ ಮೈದಾನ ಸ್ಥಳಾಂತರ ಮಾಡಬಹುದಾ ಎನ್ನುವುದರ ಕುರಿತೂ ಚರ್ಚೆ ಮಾಡ್ತೇವೆ ಎಂದ್ರು.
ವಿಧಾನಸೌಧದ ಸುತ್ತ ಹೈ ಸೆಕ್ಯುರಿಟಿ ಜೋನ್ ಎಂದು ಘೋಷಿಸಲು ಮುಂದಾಗಿದ್ದೇವೆ, ವಿಧಾನಸೌಧ,ವಿಕಾಸಸೌಧ ಲೋಕಾಯುಕ್ತ, ಸಿಎಂ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸಗಳಿಗೆ ನೂರು ಜನ ಸಿಬ್ಬಂದಿ ಇರುವ ಪ್ರತ್ಯೇಕ ರಕ್ಷಣಾ ದಳ ಸ್ಥಾಪಿಸುವುದಾಗಿ ಹೇಳಿದ್ರು.
ಆಗಿದ್ದೇನು?
ಗೃಹ ಕಚೇರಿ ಕೃಷ್ಣಾದ ಒಳಗೆ ಹಾರಿ ಬಂದು ಗಾಲ್ಫ್ ಚೆಂಡು ಬಿತ್ತು.ಪಕ್ಕದ ಗಾಲ್ಫ್ ಮೈದಾನದಿಂದ ಹಾರಿ ಬಂದ ಚೆಂಡು ಪೊಲೀಸ್ ವಾಹನದ ಗಾಜು ಜಖಂಗೊಳಿಸಿತು. ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಾಹನದ ಗಾಜು ಜಖಂ ಆಯಿತು. ಅಚಾನಕ್ಕಾಗಿ ಹಾರಿ ಬಂದ ಗಾಲ್ಫ್ ಚೆಂಡಿಗೆ ಪೊಲೀಸ್ ಸಿಬ್ಬಂದಿ ಬೆಚ್ಚಿಬಿದ್ರು. ಕಾಕತಾಳೀಯ ಅಂದ್ರೆ ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಗಾಲ್ಫ್ ಚೆಂಡುಗಳು ಗೃಹ ಕಚೇರಿ ಒಳಗೆ ಬಂದು ಬೀಳ್ತಿದ್ವು ಈಗಲೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ.ಗಾಲ್ಫ್ ಚೆಂಡು ಬಂದು ಬಿದ್ದಿದೆ.
ಈ ಹಿಂದೆ ಎಚ್ಡಿಕೆ ಸಿಎಂ ಆಗಿದ್ದಾಗ ಗಾಲ್ಫ್ ಮೈದಾನದ ಸುತ್ತ ಎತ್ತರದ ರಕ್ಷಣಾ ಬಲೆ ಹಾಕಿಸುವಂತೆ ಮಾಡಿದ್ದರು.ಹಾಗಾಗಿ
ಸುಮಾರು 100 ಅಡಿ ಎತ್ತರದ ರಕ್ಷಣಾ ಬಲೆ ಹಾಕಲಾಗಿತ್ತು.ಆದರೂ ಈಗ ಗಾಲ್ಫ್ ಚೆಂಡು ಅಷ್ಟು ಎತ್ತರದ ಬಲೆ ದಾಟಿ ಮತ್ತೆ ಕೃಷ್ಣಾದೊಳಗೆ ಬಂದು ಬಿದ್ದಿದೆ.ಈಗ ಬಲೆ ಮತ್ತಷ್ಟು ಎತ್ತರಕ್ಕೆ ಹೋಗುತ್ತಾ ಇಲ್ಲ ಗಾಲ್ಫ್ ಕೋರ್ಸ್ ಸ್ಥಳಾಂತರ ಆಗುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನಯಾಗಿದೆ.
Related Articles
Thank you for your comment. It is awaiting moderation.
Comments (0)