ಶಿವಮೊಗ್ಗ ಕ್ಷೇತ್ರಕ್ಕೆ‌ ಬಿ.ವೈ ರಾಘವೇಂದ್ರ ಅಭ್ಯರ್ಥಿ: ಬಿಎಸ್ವೈ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪುತ್ರ ಬಿ.ವೈ ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಗೆ ನೀರಾವರಿ ಕಲ್ಪಿಸುವ ಯೋಜನೆಯ ಸರ್ವೇಕಾರ್ಯಕ್ಕೆ ಚಾಲನೆ ನೀಡಿದ ವೇಳೆ ಚುನಾವಣಾ ದಿನಾಂಕ ಪ್ರಕಟಗೊಂಡ ಮಾಹಿತಿ ತಿಳಿದು ಅಭ್ಯರ್ಥಿ ಹೆಸರು ಘೋಷಿಸಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ.ವೈ. ರಾಘವೇಂದ್ರರನ್ನು ಮತ್ತೊಮ್ಮೆ ಸಂಸದರಾಗಿ ಆಯ್ಕೆ ಮಾಡಲು ಜನತೆಗೆ ಮನವಿ ಮಾಡಿದ ಯಡಿಯೂರಪ್ಪ ಪುತ್ರನ ಪರ ಪ್ರಚಾರ ಆರಂಭಿಸಿದದ್ರು.

Related Articles

Comments (0)

Leave a Comment