ಕೊರೋನಾಗೆ ಲಾಕ್ಡೌನ್ ಪರಿಹಾರ ಅಲ್ಲ, ನಾಳೆಯಿಂದ ಲಾಕ್ ಡೌನ್ ಇರಲ್ಲ; ಸಿಎಂ
- by Suddi Team
- July 21, 2020
- 17 Views

ಬೆಂಗಳೂರು: ಕೊರೋನಾಗೆ ಲಾಕ್ಡೌನ್ ಪರಿಹಾರ ಅಲ್ಲ ಬೆಂಗಳೂರಿನಲ್ಲಿ ಇನ್ಮುಂದೆ ಲಾಕ್ಡೌನ್ ಇರಲ್ಲ ರಾಜ್ಯದ ಎಲ್ಲೂ ಲಾಕ್ಡೌನ್ ಇರಲ್ಲ ಆದ್ರೆ ಕಂಟೈನ್ಮೆಂಟ್ ವಲಯದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ಸಿಎಂ ಯಡಿಯೂರಪ್ಪ ಪ್ರಕಟಿಸಿದ್ರು.
ಯೂಟ್ಯೂಬ್ ಲೈವ್ ಭಾಷಣ ಮಾಡಿದ ಯಡಿಯೂರಪ್ಪ
ರಾಜ್ಯದಲ್ಲಿ ಕೊರೋನಾ ಆರಂಭದಲ್ಲಿ ಕಡಿವಾಣ ಹಾಕಲು ಯಶಸ್ವಿಯಾಗಿದ್ವಿ ಆದ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಸೋಂಕು ಹೆಚ್ಚಳ ಆಗಿದೆ. ದೇಶಾದ್ಯಂತ ಕೊರೊನಾ ಬಗ್ಗೆ ವ್ಯಾಪಕ ಚರ್ಚೆ ನಡಿತಾ ಇದೆ. ಕೊರೋನಾ ವಾರಿಯರ್ಸ್ ಬದುಕು ಮುಡಿಪುಟ್ಟು ಕೆಲಸ ಮಾಡ್ತಿದಾರೆ ನಾವು ಬದುಕಲು ಕೊರೋನಾ ನಿಯಮಗಳ ಪಾಲನೆ ಮಾಡಬೇಕು ಜನ ಮಾಸ್ಕ್, ಸಾಮಾಜಿಕ ಅಂತರ ನಿಯಮ ಪಾಲಿಸಬೇಕು ಎಂದು ಸೂಚನೆ ನೀಡಿದ್ರು.
ಕೊರೋನಾ ತಡೆಗೆ ತಜ್ಞರ ಸಲಹೆ 5 ಟಿ ಬಹಳ ಮುಖ್ಯ
ಟ್ರೇಸ್, ಟ್ರ್ಯಾಕ್, ಟೆಸ್ಟ್ , ಟ್ರೀಟ್ ಮೆಂಟ್, ಟೆಕ್ನಾಲಜಿಗಳೇ 5 ಟಿ
ಇವುಗಳನ್ನು ಪರಿಣಾಮಕಾರಿ ಆಗಿ ರಾಜ್ಯ ಅಳವಡಿಸಿಕೊಂಡಿದೆ
ಶೇ.5 ರಷ್ಟು ಸೋಂಕಿತರಿಗೆ ವೆಂಟಿಲೇಟರ್ ಅಗತ್ಯವಿದೆ, ರೋಗಲಕ್ಷಣ ಇಲ್ಲದವರಿಗೆ ಆಸ್ಪತ್ರೆ ಅಗತ್ಯ ಇಲ್ಲ ಅಂಥವರು ಹೋಂ ಐಸೋಲೇಷನ್ ಅಥವಾ ಸಿಸಿಸಿಗಳಲ್ಲಿ ದಾಖಲಾಗಬೇಕು, ಒಟ್ಟು 11530 ಬೆಡ್ ಗಳು ಬೆಂಗಳೂರಿನಲ್ಲಿವೆ, ಬೆಡ್ ಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡ್ತಾ ಇದ್ದೇವೆ ಜನ ಆತಂಕ ಪಡಬಾರದು ಎಂದು ಕರೆ ನೀಡಿದ್ರು.
ಕೊರೋನಾ ಸೋಂಕಿತರು ಧೈರ್ಯಗೆಡಬೇಡಿ ಕೆಲವರು ಆತ್ಮಹತ್ಯೆ ಪ್ರಯತ್ನ ಮಾಡ್ಕೋತಿದಾರೆ ಯಾರೂ ಆತ್ಮಹತ್ಯೆ ಯತ್ನಕ್ಕೆ ಮುಂದಾಗಬೇಡಿ ಶೇ 90 ಜನ ಕೊರೋನಾ ಬಂದವರು ಗುಣಮುಖ ಆಗ್ತಿದಾರೆ ಎಂದ್ರು.
ಸ್ಯಾಂಪಲ್ ನೀಡಿದ 24 ಗಂಟೆಗಳಲ್ಲಿ ವರದಿ ಬರಲು ಕ್ರಮ ಕೈಗೊಳ್ಳಲಾಗಿದೆ ಖಾಸಗಿ ಆಸ್ಪತ್ರೆಗಳ ಗೊಂದಲ, ಸಮಸ್ಯೆ ಬಗೆಹರಿದಿದೆ ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಸಚಿವ, ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದ್ರು.
ಪ್ರತಿಪಕ್ಷಗಳು ಟೀಕೆ ಟಿಪ್ಪಣಿ ಬದಲು ಸಲಹೆ ಕೊಡಲಿ ವಸ್ತುಪ್ರದರ್ಶನ ಕೇಂದ್ರದ ಕೋವಿಡ್ ಸೆಂಟರ್ ನಲ್ಲಿ 7.15 ಕೋಟಿ ರೂ.ಗೆ ಉಪಕರಣಗಳ ಖರೀದಿ ಮಾಡಲಾಗಿದೆ.ಇದರಲ್ಲಿ ಭ್ರಷ್ಟಾಚಾರದ ಆರೋಪ ಸತ್ಯವಲ್ಲ. ಸಿದ್ದರಾಮಯ್ಯ ಇವತ್ತು ಬಿಐಇಸಿಗೆ ಭೇಟಿ ಕೊಟ್ಟಿದ್ರು ಪ್ರತಿಪಕ್ಷಗಳಿಗೆ ಗೊಂದಲ ಬೇಡ ಅಗತ್ಯ ದಾಖಲೆ ಒದಗಿಸುತ್ತೇವೆ, ಪರಿಶೀಲಿಸಬಹುದು.ಬಿಐಇಸಿಯಲ್ಲಿ ಸೋಂಕಿತರು ಬಳಸಿದ ಹಾಸಿಗೆಗಳನ್ನು ಬೆಂಕಿಯಲ್ಲಿ ಸುಡಲಿದ್ದೇವೆ ಮಂಚಗಳನ್ನಷ್ಟೇ ಬಳಕೆ ಮಾಡಲಿದ್ದೇವೆ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಒಂದು ರೂ. ಸಹ ಅವ್ಯವಹಾರ ಆಗಿಲ್ಲ ಎಂದು ದಾಖಲೆ ಪರಿಶೀಲನೆಗೆ ಸಿದ್ದರಾಮಯ್ಯಗೆ ಸಿಎಂ ಆಹ್ವಾನ ನೀಡಿದ್ರು. ಬೇರೆ ಬೇರೆ ಜಿಲ್ಲೆಗಳಲ್ಲಿ ಜನ ನರಳ್ತಿದ್ದಾರೆ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸಬಾರದು ಅಂತಾ ಮನವಿ ಮಾಡಿದ್ರು.
ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸ್ತೇನೆ ಕಳೆದ ನಾಲ್ಕೈದು ತಿಂಗಳಿಂದ ಮಾಧ್ಯಮಗಳಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ
ಮಾಧ್ಯಮಗಳ ಪಾತ್ರ ಮುಂದೆ ದೊಡ್ಡದಾಗಿ ಅಗತ್ಯವಿದೆ
ಮಾಧ್ಯಮಗಳ ಸಹಕಾರ ಭವಿಷ್ಯದಲ್ಲಿ ನಮಗೆ ಅಗತ್ಯ
ಮಾಧ್ಯಮ ಸ್ನೇಹಿತರು ಇನ್ನೂ ಹೆಚ್ಚಿನ ನೆರವು ಕೊಡಬೇಕು
ಜನರಲ್ಲಿ ಮಾಧ್ಯಮಗಳು ಧೈರ್ಯ ತುಂಬಬೇಕು ಎಂದ್ರು.
ಅಗತ್ಯ ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ ಬೂತ್ ಗಳಲ್ಲಿ ಆಂಬುಲೆನ್ಸಗಳ ವ್ಯವಸ್ಥೆ ಮಾಡ್ತೇವೆ ಸರ್ಕಾರಕ್ಕೆ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು ಜನ ಸಹಕಾರ ಕೊಡಬೇಕು ಎಂದು ಸಿಎಂ ಮನವಿ ಮಾಡಿದ್ರು.
Related Articles
Thank you for your comment. It is awaiting moderation.
Comments (0)