ನಾನು ಹೇಳಿದ ಸೇವೆ ಆ ಸೇವೆಯಲ್ಲ ಅಂದ್ರು ಹೆಬ್ಬಾಳ್ಕರ್

ಬೆಂಗಳೂರು: ನಾನು ಹೇಳಿದ ಸೇವೆಯನ್ನು ಅವರು ಯಾವ ರೀತಿಯ ಸೇವೆ ಎಂದುಕೊಂಡರೋ ಗೊತ್ತಿಲ್ಲ,ತಪ್ಪಾಗಿ ತಿಳಿದುಕೊಂಡರೆ ಅದಕ್ಕೆ ನಾನು ಹೊಣೆಯಲ್ಲ ಎಂದು ಸಚಿವೆ ಜಮಲಾಪ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು,ನಾನು ವಾಸ್ತವದಲ್ಲಿ ಜೀವಿಸುವವಳು.ಸಚಿವ ಸ್ಥಾನ ಸಿಕ್ಕಿಲ್ಲ.ಎರಡನೆ ಹಂತದಲ್ಲಿ ಸಚಿವ ಸ್ಥಾನ ಕೊಡುವುದು ಬಿಡುವುದು ಹೈ ಕಮಾಂಡ್ ಗೆ ಬಿಟ್ಟ ವಿಷಯ‌.ಅದಕ್ಕಾಗಿ ನಾನು ಯಾವುದೇ ಲಾಭಿ ಮಾಡಿಲ್ಲ.ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದು ಸಚಿವೆ ಜಯಮಾಲ ಹೇಳಿಕೆ ನೀಡಿದ್ದರು. ಈ ವಿಷಯ ಇಡೀ ಜಗತ್ತಿಗೆ ಗೊತ್ತಿದೆ.ನಮ್ಮ ಕಡೆ ಸೇವೆ ಎಂಬ ಪದವನ್ನು ವಿಶಾಲಾರ್ಥದಲ್ಲಿ ಬಳಕೆ ಮಾಡುತ್ತಾರೆ.ದೇವರ ಸೇವೆ ಮಾಡುವುದು,ಅಭಿಷೇಕ ಸೇವೆ ಮಾಡುವುದು ಎನ್ನುವ ರೀತಿಯಲ್ಲೇ ಪಕ್ಷಕ್ಕೆ ಅವರು ಮಾಡಿರುವ ಸೇವೆ ನಾಯಕರಿಗೆ ಇಷ್ಟವಾಗಿರಬಹುದು ಎಂಬರ್ಥದಲ್ಲಿ ಹೇಳಿದ್ದೇನೆ.ನಾನು ಹೊಟ್ಟೆಕಿಚ್ಚಿನಿಂದ ಯಾವ ಮಾತೂ ಹೇಳಿಲ್ಲ.ಅವರು ತಪ್ಪು ತಿಳಿದುಕೊಂಡ್ರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸಮರ್ಥನೆ ನೀಡಿದರು.

Related Articles

Comments (0)

Leave a Comment