ಕಸ ವಿಲೇವಾರಿ ಮಾಡಲು ತಕ್ಷಣ ಟೆಂಡರ್ ಕರಿಯಿರಿ: ಸಂಸದ ಪ್ರತಾಪ ಸಿಂಹ

ಮೈಸೂರು,ಅಕ್ಟೋಬರ್.19: ವಿದ್ಯಾರಣ್ಯಪುರಂನಲ್ಲಿ ಒಟ್ಟು 3 ಲಕ್ಷ ಟನ್‍ನಷ್ಟು ಕಸವಿದ್ದು, ಇದರಿಂದಾಗಿ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ. ಅದ್ದರಿಂದ ಕಸವಿಲೇವಾರಿ ಮಾಡಲು ತಕ್ಷಣ ಟೆಂಡರ್ ಕರೆಯಲು ಸಂಸದ ಪ್ರತಾಪ್ ಸಿಂಹ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಜಯಂತ್ ಅವರಿಗೆ ಖಡಕ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಗೆ ವಿವಿಧ ಇಲಾಖೆಗಳಲ್ಲಿನ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಿಂಗ್ ರೋಡ್ ರಸ್ತೆ ಬಳಿ ಅತೀಯಾಗಿ ಕಸವನ್ನು ಹಾಕುತ್ತಿದ್ದಾರೆ. ಇಂತವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಜಿಲ್ಲಾಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ ಅವರಿಗೆ ಸೂಚನೆ ನೀಡಿದರು. ಹಾಗೂ ಕಸ ಹಾಕಲು ಬದಲಿ ಜಾಗವನ್ನು ವ್ಯವಸ್ಥೆ ಮಾಡಲು ಹೇಳಿದರು.

ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ ಮೈಸೂರು ಮಹಾನಗರ ಪಾಲಿಕೆಗೆ ಒಟ್ಟು 69 ಕೋಟಿ ರೂ. ಅನುದಾನ ಬಂದಿದೆ. ಇದನ್ನು ನಿಯಮಾವಳಿ ಪ್ರಕಾರ ಶೇ. 25 ರಷ್ಟು ಕಸ ವಿಲೇವಾರಿ ಮಾಡಲು ಹಾಗೂ ಶೇ. 25 ರಷ್ಟು ಕುಡಿಯುವ ನೀರಿನ ವಿನಿಯೋಗಕ್ಕೆ ಬಳಸಬೇಕು. ಅನುದಾನವನ್ನು ಪಾಲಿಕೆಯ ವಾರ್ಡ್‍ಗಳಿಗೆ ನೀಡದೆ ಅಮೃತಯೋಜನೆ, ಕೆಸರೆ, ವಿದ್ಯಾರಣ್ಯಪುರಂ ಹಾಗೂ ರಾಯನಕೆರೆ ಪ್ಲಾಂಟ್‍ಗಳ ಅಭಿವೃದ್ಧಿ ಕಾರ್ಯಗಳಿಗೆ ನೀಡಲು ಹೇಳಿದರು.

ಕೇಸರಿಯಲ್ಲಿ ಒಟ್ಟು 250 ಮನೆಗಳನ್ನು ಕಟ್ಟಲಾಗಿದೆ. ಇಲ್ಲಿ 8 ಟ್ರಾನ್ಸ್‍ಫರ್‍ಗಳನ್ನು ನಿರ್ಮಿಸಬೇಕು ಆದರೆ ಇಂದು 4 ಟ್ರಾನ್ಸ್‍ಫರ್‍ಗಳು ನಿರ್ಮಾಣವಾಗಿವೆ, ಉಳಿದ 4 ಟ್ರಾನ್ಸ್‍ಫರ್‍ಗಳನ್ನು ನಿರ್ಮಾಣ ಮಾಡಬೇಕು ಎಂದು ಚೆಸ್ಕಾಂ ಅಧಿಕಾರಿಗೆ ಹೇಳಿದರು. ಹಾಗೂ ರಿಂಗ್ ರೋಡ್ ರಸ್ತೆಯ ಡಾಂಬರೀಕರಣಕ್ಕೆ ಕೇಂದ್ರ ಸರ್ಕಾರದಿಂದ 160 ಕೋಟಿ ಹಣ ಬಿಡುಗಡೆಯಾಗುತ್ತಿದೆ ಈ ಹಣವನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಸಂಗ್ರಹಿಸುತ್ತಿದ್ದಾರೆ ಹಾಗೂ ಜಿಲ್ಲೆಯಲ್ಲಿ ನಕಲಿ ವೈದ್ಯರು ಹೆಚ್ಚಾಗುತ್ತಿದ್ದಾರೆ ಇಂತವರ ವಿರುದ್ಧ ಕ್ರಮಜರುಗಿಸಬೇಕು ಎಂದು ಜಿಲ್ಲಾ ಕುಟುಂಬ ಮತ್ತು ಆರೋಗ್ಯಾಧಿಕಾರಿ ಡಾ. ಅಮರನಾಥ್ ಅವರಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯು ಲಲಿತ ಮಹಲ್ ಬಳಿ ಇರುವ ರಾಷ್ಟ್ರೀಯ ರಸ್ತೆಗೆ ಇತ್ತೀಚಿಗೆ ಮರಣ ಹೊಂದಿದ ಕಾರ್ಪೋರೇಟ್ ಅವರ ಹೆಸರನ್ನು ಹಿಡಲು ಮುಂದಾಗಿದೆ ಇದು ಸರಿಯಾದ ಕ್ರಮ ಅಲ್ಲ, ಯಾವುದೇ ಸರ್ಕ್‍ಲ್‍ಗಳು, ವೃತ್ತಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಹೆಸರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹಿಡುವುದು ಸೂಕ್ತ, ಇದರ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮನವಿ ಮಾಡಿಕೊಂಡರು. ಹಾಗೂ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ ಲಾಕ್‍ಡೌನ್ ಸಮಯದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದೆ ಇದನ್ನು ಪರಿಶೀಲಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೆ.ಪದ್ಮ ಅವರು ಲಾಕ್‍ಡೌನ್ ವೇಳೆಯಲ್ಲಿ 150 ಬಾಲ್ಯವಿವಾಗಳು ನಡೆದಿದೆ ಇದರಲ್ಲಿ 20 ಕ್ಕೆ ಎಫ್.ಐ.ಆರ್ ಹಾಕಲಾಗಿದೆ ಎಂದರು.

ಇದೇವೇಳೆ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಬಿ.ಸಿ ಪರಿಮಳಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಭಾರತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Comments (0)

Leave a Comment