ಬಿಎಡ್ ಮುಗಿಸದ ಉಪನ್ಯಾಸಕರ ವೇತನ ತಡೆಗೆ ಹೊರಟ್ಟಿ ಕಿಡಿ: ಸಂಬಳ ಬಿಡುಗಡೆಗೆ ಒತ್ತಾಯಿಸಿ ಪತ್ರ

ಬೆಂಗಳೂರು:ಅನಿವಾರ್ಯ ಕಾರಣದಿಂದ ಬಿಎಡ್ ಪದವಿ ಮುಗಿಸದ ಉಪನ್ಯಾಸಕರ ಸಂಬಳ ತಡೆ ಹಿಡಿಯಲಾಗಿದೆ.

ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎನ್ ಮಹೇಶ್ ಗೆ ಮಾಜಿ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಪತ್ರ ಬರೆದಿದ್ದಾರೆ.

ಅನುದಾನಿತ ಪಿಯು ಕಾಲೇಜ್ ಗಳಲ್ಲಿನ ಬಿಎಡ್ ಪದವಿ ಪಡೆಯದ ಉಪನ್ಯಾಸಕರ ಸಂಬಳ ತಡೆ ಹಿಡಿದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹೊರಟ್ಟಿ ಎನ್ ಸಿಇಆರ್ ಟಿ ನಿಯಮದಂತೆ ಪದವಿಪೂರ್ವ ಕಾಲೇಜ್ ಗಳ ಉಪನ್ಯಾಸಕರು ಬಿಎಡ್ ಪದವಿ ಹೊಂದಿರಬೇಕು. ರಾಜ್ಯ ಸರ್ಕಾರ ಬಿಎಡ್ ಪದವಿ ಪಡೆಯಲು 4 ವರ್ಷಗಳ ಕಾಲಾವಕಾಶವನ್ನು ಉಪನ್ಯಾಸಕರಿಗೆ ನೀಡಿದೆ.4 ವರ್ಷಗಳಲ್ಲಿ ಬಿಎಡ್ ಪದವಿ ಪಡೆಯಬೇಕೇಂಬ ಷರತ್ತಿನಲ್ಲಿ ಉಪನ್ಯಾಸಕರನ್ನಾಗಿ ಹಲವರ ನೇಮಕವಾಗಿದೆ..ಆದರೆ ಅನಿವಾರ್ಯ ಕಾರಣದಿಂದ ಬಿಎಡ್ ಪದವಿ ಮುಗಿಸದ ಉಪನ್ಯಾಸಕರ ಸಂಬಳ ತಡೆ ಹಿಡಿಯಲಾಗಿದೆ.ಕೂಡಲೇ ಸರ್ಕಾರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಬಸವರಾಜ್ ಹೊರಟ್ಟಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಪನ್ಯಾಸಕರ ಹೋರಾಟ ಆರಂಭವಾಗೋ ಅಪಾಯವಿದೆ.ಆದ್ದರಿಂದ ತಡೆಹಿಡಿಯಲಾಗಿರುವ ಸಂಬಳವನ್ನು ತಕ್ಷಣ ಬಿಡುಗಡೆ ಮಾಡುವಂತೆ ಶಿಕ್ಷಣ ಸಚಿವರಿಗೆ ಹೊರಟ್ಟಿ ಪತ್ರದ ಮೂಲಕ ಸಲಹೆ ನೀಡಿದ್ದಾರೆ.
.

Related Articles

Comments (0)

Leave a Comment