ಕಾವೇರಿ ನಿರ್ವಹಣಾ ಮಂಡಳಿಗೆ ಷರತ್ತಿನ ಮೇಲೆ ಪ್ರತಿನಿಧಿ ನೇಮಕ: ಹೆಚ್ಡಿಡಿ
- by Suddi Team
- June 24, 2018
- 252 Views
ಹಾಸನ:ಕಾವೇರಿ ನಿರ್ವಹಣಾ ಮಂಡಳಿಗೆ ನಾವೂ ಷರತ್ತಿನ ಮೇಲೆಯೇ ಶೀಘ್ರ ಇಬ್ಬರು ಪ್ರತಿನಿಧಿಗಳನ್ನು ಕಳಿಸುತ್ತೇವೆ.ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು,ಪ್ರತಿ 10 ದಿನಕ್ಕೊಮ್ಮೆ ನೀರು ಅಳತೆ ಮಾಡುತ್ತಾರೆ,ಬೆಳೆ ಸೇರಿದಂತೆ ಎಷ್ಟು ನೀರು ಬಳಕೆ ಮಾಡಬೇಕೆಂದು ಅವರೇ ಹೇಳುತ್ತಾರೆ ಅಂಥ ಷರತ್ತುಗಳನ್ನು ನೋಡಿಲ್ಲ, ಆ ಕಾರಣಕ್ಕೆ ನಾನು ನಿರ್ವಹಣಾ ಮಂಡಳಿಗೆ ವಿರೋಧ ವ್ಯಕ್ತಪಡಿಸಿದ್ದೇನೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ರಾಜ್ಯದ ಪ್ರತಿನಿಧಿಗಳ ಹೆಸರು ಕೊಡದಿದ್ದರೂ ನಮ್ಮನ್ನು ಬಿಟ್ಟೇ ಇತರ ರಾಜ್ಯಗಳ ಸದಸ್ಯರನ್ನ ನೇಮಕ ಮಾಡಿದೆ.ಈ ವಿಚಾರದಲ್ಲಿ ಮುಂದೆ ಏನು ಮಾಡಬೇಕು ಎಂಬುದನ್ನು ಸರ್ಕಾರಕ್ಕೆ ಹೇಳಿದ್ದೇನೆ ನಾವೂ ಷರತ್ತಿನ ಮೇಲೆಯೇ ಶೀಘ್ರ ಇಬ್ಬರು ಪ್ರತಿನಿಧಿಗಳನ್ನು ಕಳಿಸುತ್ತೇವೆ ಹೆಚ್ಚುವರಿ ನೀರನ್ಮು ನಾವು ಹಿಡಿದಿಟ್ಟುಕೊಳ್ಳಲು ಆಗಲ್ಲ ಈ ಎಲ್ಲಾ ಆಕ್ಷೇಪಣೆಗಳನ್ನು ಈಗಾಗಲೇ ಕೇಂದ್ರದ ಮುಂದೆ ಸಿಎಂ ಮನವರಿಕೆ ಮಾಡಿದ್ದಾರೆ.ಶೀಘ್ರ ಷರತ್ತುಬದ್ಧ ಪತ್ರ ಸಿದ್ಧ ಪಡಿಸಲಾಗುವುದು ,ಷರತ್ತು ಸಹಿತ ನಮ್ಮ ಪ್ರತಿನಿಧಿಗಳನ್ನು ಕಳಿಸುತ್ತೇವೆ ಈ ವಿಚಾರದಲ್ಲಿ ಮುಂದಿನ ಹೋರಾಟ ಇದ್ದೇ ಇರಲಿದೆ ಎಂದರು.
ರೈತರ ಸಾಲ ಮನ್ನಾ, ಮಂಡ್ಯದಿಂದ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಲು ದೇವೇಗೌಡರು ನಿರಾಕರಿಸಿದರು.
Related Articles
Thank you for your comment. It is awaiting moderation.
Comments (0)