ಜೆಡಿಎಸ್ ಗೆ ಲಾಭವಾಗುವ ಬಜೆಟ್ ಗೆ ಕೈ ಹಿರಿಯರು ಗರಂ: ಪರಮೇಶ್ವರ್ ಗೆ ವರದಿ ಕೇಳಿದ ವೇಣುಗೋಪಾಲ್

ಫೋಟೋ ಕೃಪೆ: ಟ್ವಿಟ್ಟರ್

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದರೂ ಕೂಡ ಕೇವಲ ಜೆಡಿಎಸ್ ಗೆ ಪೂರಕ ವಾತಾವರಣ ಸೃಷ್ಠಿಯಾಗುವಂತೆ ಬಜೆಟ್ ಮಂಡಿಸಲು ಅವಕಾಶ ಕಲ್ಪಿಸಿದ ಕುರಿತು ವರದಿ ನೀಡುವಂತೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲಗ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬಜೆಟ್ ಗೆ ಕಾಂಗ್ರೆಸ್ ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಕಾಂಗ್ರೆಸ್ ಹಿರಿಯ ನಾಯಕರು ಹೈಕಮಾಂಡ್ ಬಾಗಿಲು ತಟ್ಟುವ ಮೂಲಕ ಪರಮೇಶ್ವರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಎಚ್ ಕೆ ಪಾಟೀಲ್ ನೇತೃತ್ವದ ತಂಡದಿಂದ ವೇಣುಗೋಪಾಲ್ ಗೆ ದೂರು ನೀಡಲಾಗಿದೆ. ಮೈತ್ರಿ ತತ್ವದ ವಿರುದ್ಧ ಸಿಎಂ ಎಚ್ ಡಿ ಕುಮಾರಸ್ವಾಮಿ ನಡೆದುಕೊಂಡಿದ್ದಾರೆ.ಬಜೆಟ್ ಮೇಲೆ ಜೆಡಿಎಸ್ ಹಿಡಿತ ಸಾಧಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈತರ ಸಾಲಮನ್ನ ಕ್ಕೆ ನಾವು ಸಪೋರ್ಟ್ ಮಾಡಿದ್ದೀವಿ ಸಾಲಮನ್ನ ಕ್ರೆಡಿಟ್ ಇಂದಲ್ಲ ನಾಳೆ ಜೆಡಿಎಸ್ ಹೋಗುತ್ತೆ. ಇದರಿಂದ ಕಾಂಗ್ರೆಸ್ ಗೆ ಆಗೋ ಲಾಭವಾದ್ರೂ ಏನು ? ತೈಲ ಬೆಲೆ ಏರಿಕೆ ಬಗ್ಗೆ ನಾವು ರಾಷ್ಟ್ರಮಟ್ಟದಲ್ಲಿ ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದೇವೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಸಿಲಿಂಡರ್ ತಲೆ ಮೇಲೆ ಇಟ್ಕೊಂಡು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದ್ರು ಈಗ ರಾಜ್ಯ ಬಜೆಟ್ ಲ್ಲಿ ಬೆಲೆ ಏರಿಕೆ ಮಾಡಿದ್ದಾರೆ ಇದರಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವ ನೈತಿಕತೆ ಕಳೆದುಕೊಂಡಿದ್ದೇವೆ ಅಂತ ಹಿರಿಯ ನಾಯಕರು ಪ್ರಶ್ನೆ ಮಾಡಿದ್ದಾರೆ.

ಇದರ ನೇರ ಲಾಭ ರಾಜ್ಯದಲ್ಲಿ ಬಿಜೆಪಿಗೆ ಆಗುತ್ತೆ.
ಇದೇನು ಬಿಜೆಪಿಗೆ ಲಾಭ ಮಾಡಲು ಮಂಡಿಸಿದ ಬಜೆಟಾ ಅಂತ ವೇಣುಗೋಪಾಲ್ ಬಳಿ ಪ್ರಶ್ನೆ ಮಾಡಿದ್ದಾರೆ.ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ನೆಲೆ ಇದೆ. ಆದ್ರೆ ಜೆಡಿಎಸ್ ಗೆ ಇಲ್ಲ. ಬಿಜೆಪಿಯನ್ನು ನೇರವಾಗಿ ಫೇಸ್ ಮಾಡಬೇಕಿರೋದು ನಾವೇ. ಆದ್ರೆ ಬಜೆಟ್ ನಲ್ಲಿ ಆಗಿದ್ದೇನು ? ಜೆಡಿಎಸ್ ಪ್ರಾಬಲ್ಯ ಇರೋ ಜಿಲ್ಲೆಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ.ಇದರಿಂದ ಜೆಡಿಎಸ್ ಗೆ ಲೋಕಸಭಾ ಚುನಾವಣೆಯಲ್ಲಿ ಲಾಭವಾಗುತ್ತೆ. ಕಾಂಗ್ರೆಸ್ಗೇನು ಲಾಭ ? ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಎದುರಿಸುವುದು ಹೇಗೆ ಅಂತ ಅಪಸ್ವರ ಎತ್ತಿದ್ದಾರೆ.

ಬಜೆಟ್ ತಯಾರಿಸುವ ಸಂದರ್ಭದಲ್ಲಿ ಮೈತ್ರಿ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.ಸಾಲಮನ್ನಾದ ಬಗ್ಗೆ ಮಾತ್ರ ಹೇಳಿದ್ರು. ಆದ್ರೆ ತೆರಿಗೆ ಏರಿಕೆ ಮಾಡುವ ಗುಟ್ಟು ಬಿಟ್ಟು ಕೊಡದೇ ಮೈತ್ರಿ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.ಪರಮೇಶ್ವರ್ ಸಾಫ್ಟ್ ಕರ್ನರ್ ಇದಕ್ಕೆಲ್ಲಾ ಕಾರಣ.ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್‌ ಮಾಡದಿದ್ರೆ ರಾಜ್ಯದಲ್ಲಿ ಪಕ್ಷ ಉಳಿಯುತ್ತೆ. ಇಲ್ಲವಾದಲ್ಲಿ ಕಷ್ಟ ಅಂತ ಹಿರಿಯ ನಾಯಕರು ಮನವರಿಕೆ ಮಾಡಿದ್ದಾರೆ.ಹಿರಿಯ ನಾಯಕರ ದೂರಿನ ಹಿನ್ನಲೆಯಲ್ಲಿ ವರದಿ ನೀಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಪರಮೇಶ್ವರ್ ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Related Articles

Comments (0)

Leave a Comment