ಮಾಜಿ ಸಿಎಂ ಆದವರಿಗೆ ಕನಿಷ್ಠ ಜ್ಞಾನ ಬೇಡ್ವಾ? ಐ ಡೋಂಟ್ ಕೇರ್ ಫಾರ್ ದಿಸ್ ವರ್ಡ್; ಎಚ್ಡಿಕೆ ವಿರುದ್ಧ ಸುಮಲತಾ ಕಿಡಿ
- by Suddi Team
- July 5, 2021
- 17 Views

ಬೆಂಗಳೂರು: ಒಬ್ಬ ಮಾಜಿ ಮುಖ್ಯಮಂತ್ರಿ ಆದವ್ರಿಗೆ ಸಂಸದೆ ಬಗ್ಗೆ ಹೇಗೆ ಮಾತನಾಡ್ಬೇಕು ಅನ್ನೊ ಜ್ಞಾನವಿಲ್ಲ,ಐ ಡೋಂಟ್ ಕೇರ್ ಫಾರ್ ದಿಸ್ ವರ್ಡ್ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸುಮಲತಾ ಜನ ಯಾರು ಸಂಸದರು ಆಗಬೇಕು ಅಂತ ಆರಿಸಿಕಳಿಸಿದ್ದಾರೆ ಇನ್ನೂ ಇದರ ಬಗ್ಗೆ ಅವರಿಗೆ ಅರ್ಥವಾದಂತಿಲ್ಲ ಜನ ಯಾರನ್ನ ಆರಿಸಿ ಕಳಿಸಿದ್ರು ಅನ್ನೋದು ಅರ್ಥವಾಗಿಲ್ಲ ಒಬ್ಬ ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯೇ? ಮಿಡಿಯಾ ಮುಂದೆ ಹೇಗೆ ಮಾತನಾಡಬೇಕು ಎಂದು ಮಾಜಿ ಸಿಎಂ ಆದವರಿಗೆ ಕನಿಷ್ಠ ಜ್ಞಾನ ಬೇಡ್ವಾ? ಐ ಡೋಂಟ್ ಕೇರ್ ಫಾರ್ ದಿಸ್ ವರ್ಡ್.ನಾನು ಯಾವತ್ತೂ ಇಂತ ಮಾತುಗಳಿಗೆ ತಲೆಕೆಡಿಸಿಕೊಳ್ಳಲ್ಲ ತಲೆ ಕೆಡಿಸಿಕೊಳ್ಳುವುದೂ ಇಲ್ಲ ಎಂದ್ರು.
ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ನಾನು ಒತ್ತಾಯಿಸಿದ್ದೆ
ರೈತರ ಕಾಳಜಿಬಗ್ಗೆ ನಾನು ಒತ್ತಾಯಿಸಿದ್ದೆ ಈಗ ಆರೋಪವನ್ನ ಅವರು ಮಾಡ್ತಿದ್ದಾರೆ ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾತನಾಡಲಿಲ್ಲ? ೪೦೦ ಕೋಟಿಯಷ್ಟು ಭ್ರಷ್ಟಾಚಾರ ಅಲ್ಲಿ ಆಗಿದೆ ಇದರ ಬಗ್ಗೆ ಯಾಕೆ ಅವರು ಮಾತನಾಡಲ್ಲ. ಫ್ಯಾಕ್ಟರಿಯನ್ನ ನೀವು ಓಪನ್ ಮಾಡಿ ಎಂದಿದ್ದೇನೆ. ಯಾವುದೇ ಮಾಡೆಲ್ ನಲ್ಲಿ ಬೇಕಾದರೂ ಓಪನ್ ಮಾಡಲಿ.ಆ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಪ್ರಾರಂಭಕ್ಕೆ ನಾನು ಒತ್ತಾಯ ಮಾಡುತ್ತಲೇ ಇದ್ದೇನೆ ನಾನು ಖಾಸಗಿಕರಣದಲ್ಲೇ ಆಗಬೇಕೆಂದು ಹೇಳಿಲ್ಲ ಮಾಜಿ ಸಿಎಂ ಹೆಚ್ಡಿಕೆಗೆ ಸುಮಲತಾ ಟಾಂಗ್ ನೀಡಿದ್ರು.
ಕೆಆರ್ ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ರೈತರು ನನ್ನ ಮುಂದೆ ಹೇಳಿದ್ದಾರೆ ನಾನು ಕೆಅರ್ ಎಸ್ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದೇನೆ ಅಲ್ಲಿನ ಇಲ್ಲೀಗಲ್ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದೇನೆ ಮುರುಗೇಶ್ ನಿರಾಣಿಯವರಿಗೆ ಅದನ್ನ ತೋರಿಸಿದ್ದೇನೆ ಅಕ್ರಮ ಗಣಿಗಾರಿಕೆ ಬಗ್ಗೆ ಎಕ್ಸ್ ಫೋಸ್ ಮಾಡಿದ್ದೇನೆ ಇದಕ್ಕೆ ಬ್ರೇಕ್ ಹಾಕಿದರೆ ಸಾವಿರಾರು ಕೋಟಿ ಸರ್ಕಾರಕ್ಕೆ ಆದಾಯ ಬರುತ್ತೆ ಈ ಆದಾಯ ಸರ್ಕಾರಕ್ಕೆ ತಾನೇ ಬರೋದು? ಈಗ ಯಾಕೆ ಮುತುವರ್ಜಿ ವಹಿಸಿ ಬರ್ತಾರೋ ಗೊತ್ತಿಲ್ಲ. ಇವತ್ತು ದಿಶಾ ಸಭೆ ಕರೆದಿದ್ದರು ಆದರೆ ಕೆಲವು ಕಾರಣದಿಂದ ಅದನ್ನ ಸಿಎಂರವರು ಮಾಡಲಿಲ್ಲ ಎಂದು
ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಸುಮಲಾತಾ ಆಕ್ರೋಶ ವ್ಯಕ್ತಪಡಿಸಿದ್ರು.
ಕುಮಾರಸ್ವಾಮಿ ಅವರ ಮಾತುಗಳಿಂದ ಅವರ ಸಂಸ್ಕಾರ ಗೊತ್ತಾಗ್ತಿದೆ.ಅವರ ವ್ಯಕ್ತಿತ್ವ ಎಂತದ್ದು ಅನ್ನುವುದನ್ನ ಬಿಚ್ಚಿಟ್ಟುಕೊಳ್ತಿದ್ದಾರೆ.ದೊಡ್ಡ ಹಗರಣ ನಡೆಯುತ್ತಿದೆ ಇದು ಗೊತ್ತಿದ್ದು ಯಾಕೆ ಸುಮ್ಮನಿದ್ರು ಗೊತ್ತಾಗ್ತಿದೆ ಎಲ್ಲಾ ಕಡೆ ಜನರಿಗೆ ಗೊತ್ತಾಗ್ತಿದೆ.ಎಲ್ಲಾ ಕಡೆ ಸ್ಕ್ಯಾಂ ಹೊರಬರ್ತಿವೆ ಕೆಆರ್ ಎಸ್ ಬಗ್ಗೆ ನಾನು ಕಾಳಜಿ ವಹಿಸ್ತಿದ್ದೇನೆ ಇವರಿಗೆ ಯಾಕೆ ಪ್ರಾಬ್ಲಂ ಆಗ್ತಿದೆ ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಲ್ಲ ಗೊತ್ತು ಕುಮಾರಸ್ವಾಮಿ ವಿರುದ್ಧ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ರು.
Related Articles
Thank you for your comment. It is awaiting moderation.
Comments (0)