ಪೀಣ್ಯಾದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಡಿಸಿಎಂ ಚಾಲನೆ…!
- by Suddi Team
- August 5, 2020
- 11 Views

ಬೆಂಗಳೂರು: ಪೀಣ್ಯಾದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟಿಸಿದರು
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಕೋವಿಡ್-19 ಲಕ್ಷಣಗಳಲ್ಲದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುವುದು ಕಷ್ಟಕರವಾಗುತ್ತಿದೆ. ಸರ್ಕಾರದ ಸಲಹೆಯಂತೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳನ್ನು ನಿರ್ವಹಿಸಲು ಕೋವಿಡ್ ಆರೈಕೆ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಆರೈಕೆ ಕೇಂದ್ರದ ಸ್ಥಾಪನೆಗಾಗಿ ಕೆಎಸ್ಆರ್ಟಿಸಿಯ ಬಸವೇಶ್ವರ ಬಸ್ ನಿಲ್ದಾಣ, ಪೀಣ್ಯ ಬೆಂಗಳೂರಿನಲ್ಲಿ ಸ್ಥಳಾವಕಾಶ ಒದಗಿಸಿದೆ.ಇಲ್ಲಿನ ಕೇಂದ್ರವು ಆಗಸ್ಟ್ 8 ರಿಂದ ಕಾರ್ಯಾರಂಭ ಮಾಡಲಿದೆ.
ರೊಟಲಿ ಅದ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್ ಸಹಯೋಗದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲು ಮುಂದಾಗುದ್ದು,.ಈ ಕೇಂದ್ರವನ್ನು ನಿರ್ವಹಿಸಲು ವೈದ್ಯಕೀಯ ಪಾಲುದಾರರಾಗಿ ಪ್ರಕ್ರಿಯಾ ಆಸ್ಪತ್ರೆ, ನಾಗಸಂದ್ರ, ಬೆಂಗಳೂರು ಮತ್ತು ಟೈಟಾನ್ ಸಂಸ್ಥೆಯ ಪ್ರಮುಖ ಹಣಕಾಸು ಪಾಲುದಾರರಾಗಿ ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಈ ಕೇಂದ್ರವನ್ನು ಡಿಸಿಎಂ ಲಕ್ಷ್ಮಣ ಸಂ ಸವದಿ ಇಂದು ಉದ್ಘಾಟಿಸಿದರು.ಕೋವಿಡ್ -19 ಗೆ ತುತ್ತಾಗಿ ಗುಣಮುಖರಾದ ಕೆ ಎಸ್ ಆರ್ ಟಿ ಸಿ ಚಾಲಕ/ ನಿರ್ವಾಹಕ ಸಿಬ್ಬಂದಿಗಳಿಗೆ ಉಪ ಮುಖ್ಯಮಂತ್ರಿಗಳು ಹೂ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ, ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸುಮಾರು ಒಂದು ಸಾವಿರ ಸಿಬ್ಬಂದಿ ಕೋವಿಡ್ -19 ಗೆ ತುತ್ತಾಗಿದ್ದು 700 ಸಿಬ್ಬಂದಿ ಗುಣಮುಖರಾಗಿದ್ದಾರೆ, ಅವರುಗಳ ಯೋಗಕ್ಷೇಮ ನಮ್ಮ ಪ್ರಥಮ ಆದ್ಯತೆಯಾಗಿದೆ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ನಿಗಮದ ಸಿಬ್ಬಂದಿ ಮತ್ತು ಕುಟುಂಬದವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಈ ಬಸ್ ನಿಲ್ದಾಣವು ಈ ಒಳ್ಳೆಯ ಉದ್ದೇಶಕ್ಕೆ ಉಪಯೋಗವಾಗುತ್ತಿರುವುದು ಒಳ್ಳೆಯದು. ಈ ಕೇಂದ್ರಕ್ಕೆ ದಾಖಲಾಗುವ ರೋಗಿಗಳು ಗುಣಮುಖರಾಗಿ ತೆರಳಲಿ ಎಂದು ಆಶಿಸಿದರು.
ಕೋವಿಡ್ ಕೇರ್ ಕೇಂದ್ರ :
ಪೀಣ್ಯ ಬಸ್ ನಿಲ್ದಾಣ ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿ, ಈ ಕೇಂದ್ರವು ಮೊದಲನೇ ಹಂತದಲ್ಲಿ 200 ಹಾಸಿಗೆ ಗಳನ್ನು ಹೊಂದಿರುತ್ತದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮತ್ತು ಬೇಡಿಕೆ ಹೆಚ್ಚಾದರೆ ಇನ್ನೂ 100 ಹಾಸಿಗೆ ಗಳನ್ನು ಸೇರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಪೂರ್ಣ ಸಮಯದ ದಾದಿಯರು, ವೈದ್ಯರು, ರೋಗಿಗಳ ಆರೈಕೆ ಮಾಡುವವರು, ಸ್ವಚ್ಛತಾ ಗಾರರು, ವ್ಯವಸ್ಥಾಪಕರು, ಬಿಲ್ಲಿಂಗ್ ತಂಡ, ಸ್ವಾಗತಕಾರರು, ನಿರ್ವಹಣೆ ಮತ್ತು ಭದ್ರತಾ ತಂಡಗಳು ಇರಲಿದೆ, ರೋಗಿಗೆ ಆಸ್ಪತ್ರೆ ಆರೈಕೆ ಅಗತ್ಯವಿದ್ದಲ್ಲಿ, ಪ್ರಕ್ರಿಯಾ ಆಸ್ಪತ್ರೆ ತನ್ನ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುತ್ತದೆ. ಈ ಕೇಂದ್ರದಲ್ಲಿ ಆಂಬುಲೆನ್ಸ್ ಜೊತೆ ಆಕ್ಸಿಜನ್ ಸೌಲಭ್ಯ ಲಭ್ಯವಿರುತ್ತದೆ. ಸ್ವಾಬ್ ಸಂಗ್ರಹ ಕೇಂದ್ರವನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಈ ಕೇಂದ್ರದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯವ್ಯ ಸಾರಿಗೆ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ 50% ಹಾಸಿಗೆಗಳನ್ನು ಒದಗಿಸಲಾಗಿದೆ. ಈ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೊಟರಿ ಮತ್ತು ಟೈಟಾನ್ನಿಂದ ಉಲ್ಲೇಖಿಸಲಾದ ರೋಗಿಗಳಿಗೆ 10% ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರ ಸೂಚಿಸಿದ ದರಗಳ ಪ್ರಕಾರ ರೋಗಿಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಬಡವರು ಮತ್ತು ನಿರ್ಗತಿಕರಿಗೆ ಈ ಕೇಂದ್ರದಿಂದ ಅನುಕೂಲವಾಗಿದೆ ಎಂದರು.
ರೋಗಿಗಳಿಗೆ ಆಹಾರ ಮತ್ತು ಇತರ ಸೇವೆಗಳೊಂದಿಗೆ ಮೂಲ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತದೆ. ಸದರಿ ಕೇಂದ್ರದಲ್ಲಿ ಶೌಚಾಲಯ, ಬಿಸಿ ನೀರಿನ ಸ್ನಾನದ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಎಲ್ಲಾ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುವುದು. ಈ ಕೇಂದ್ರದಲ್ಲಿ ಸಿಬ್ಬಂದಿ ಇರಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸಿಬ್ಬಂದಿ ಮತ್ತು ವೈದ್ಯರುಗಳಿಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಂಪೂರ್ಣ ಪಿಪಿಇ ಕಿಟ್ಗಳನ್ನು ಒದಗಿಸಲಾಗಿದೆ. ಕೇಂದ್ರದ ತುರ್ತು ವಾರ್ಡ್ ಮತ್ತು 10 ಹಾಸಿಗೆಗಳ ಐಸಿಯು ಹೊಂದಿದ್ದು, ಇದರಲ್ಲಿ ರೋಗಿಗಳ ಹಾಸಿಗೆಗಳು, ಮಾನಿಟರ್ಗಳು, ಆಮ್ಲಜನಕ ಪೂರೈಕೆ ಮತ್ತು ಆಮ್ಲಜನಿಕ ಸಾಂದ್ರತೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಐಸಿಯು ಅನ್ನು ಟೈಟಾನ್ ಕಂಪನಿಯು ಪ್ರಯೋಗಿಸುತ್ತಿದೆ. ರೋಗಿಗಳು ಆಸ್ಪತ್ರೆಯಲ್ಲಿ. ಹಾಸಿಗೆ ಸಿಗುವವರೆಗೂ ಅವರನ್ನು ಇಲ್ಲಿ ತಾತ್ಕಾಲಿಕವಾಗಿ ನೋಡಿಕೊಳ್ಳಲಾಗುತ್ತದೆ, ಹೆಚ್ಚಿನ ವೈದ್ಯಕೀಯ ಅಗತ್ಯ ಕಂಡುಬಂದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದರು
ಸಾಲಿಗೆ ಸಂಜೀವಿನಿ ಆಂಬ್ಯುಲೆನ್ಸ್ ( 07 ಎಫ್ 77) ಗೆ ಚಾಲನೆ:
ಕೆ ಎಸ್ ಆರ್ ಟಿ ಸಿ, ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರಿನಲ್ಲಿ ಅಂತರಿಕವಾಗಿ ಲಭ್ಯವಿರುವ ವಸ್ತುಗಳಲ್ಲಿ ಮಿಡಿ ಬಸ್ಸನ್ನು ಆಂಬುಲೆನ್ಸ್ ಆಗಿ ನಿರ್ಮಿಸಲಾಗಿದ್ದು, ವೆಚ್ಚ ಸುಮಾರು 25 ಲಕ್ಷಗಳಾಗಿದೆ.
ತುರ್ತುಸ್ಥಳದಿಂದ ಆಂಬ್ಯುಲೆನ್ಸ್ಗೆ ರೋಗಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ವರ್ಗಾಹಿಸಲು ಮತ್ತು ಆಸ್ಪತ್ರೆಯನ್ನು ತಲುಪಿದ ನಂತರ ತುರ್ತು ಕೋಣೆ ರೋಗಿಯನ್ನು ತ್ವರಿತವಾಗಿ ಮತ್ತು ಆರಾಮದಾಯಕವಾಗಿ ವರ್ಗಾಹಿಸಲು ಅನುಕೂಲವಾಗುವಂತೆ 2 ಸ್ಟೇಚರ್ಗಳನ್ನು ಹೊಂದಿದ ಬಸ್ ಅಂಬ್ಯುಲೆನ್ಸ್ ಆಗಿದೆ. ಬ್ಯಾಂಡೇಜ್,ಕ್ರಿಮಿನಾಶಕ, ಸೋಂಕು ನಿವಾರಕ ಪರಿಹಾರಗಳನ್ನು ಒಳಗೊಂಡಿರುವ ಪ್ರಥಮ ಚಿಕಿತ್ಸಾ ಶಿಟ್ಗಳನ್ನು ಹೊಂದಿದ್ದು, ಅಂಬ್ಯುಲೆನ್ಸ್ನಲ್ಲಿ ಆಕ್ಸಿಜನ್, ಶುದ್ಧವಾದ ಆಮ್ಲಜನಕವನ್ನು ಕೃತಕವಾಗಿ ಒದಗಿಸುವ ಮೂಲಕ ರೋಗಿಯ ಜೀವವನ್ನು ಉಳಿಸಲು ಸಹಾಯ ಮಾಡುವ ಒಂದು ಆಮ್ಲಜನಕ ಸಿಲಿಂಡರನ್ನು ಆಂಬ್ಯುಲೆನ್ಸ್ನಲ್ಲಿ ಇರಿಸಲಾಗಿದೆ. ಸಂಪೂರ್ಣ ಕ್ರಿಯಾತ್ಮಕ ಮತ್ತು ತುಂಬದ 1 ಕೆಜಿ ಅಗ್ನಿಶಾಮಕ ಯಂತ್ರವನ್ನು ಅಂಬ್ಯುಲೆನ್ಸ್ನಲ್ಲಿ ಇರಿಸಲಾಗಿದೆ. ಕೈ ತೊಳೆಯಲು ಸಲೂನ್ ನೊಳಗೆ 20 ಅಟರ್ ನ ನೀರಿನ ಟ್ಯಾಂಕ್, ಮತ್ತೊಂದು ಟ್ಯಾಂಕ್ ನೀರು ಸಂಗ್ರಹಿಸಲು ಒದಗಿಸಲಾಗಿದೆ. ಕೈ ತೊಳೆದು ನೀರನ್ನು ಸಂಗ್ರಹಿಸಲು ಪ್ರತ್ಯೇಕ ಪ್ಲಾಸ್ಟಿಕ್ ಟ್ಯಾಂಕ್ ಒದಗಿಸಲಾಗಿದೆ. ಡ್ರೈವರ್ಗೆ ಸುಲಭವಾದ ಪ್ರತ್ಯೇಕ ಚಾಲಕ ವಿಭಾಗವನ್ನು ಒದಗಿಸಲಾಗಿದೆ. ಸಿಸಿ ಕ್ಯಾಮೆರಾ ಒದಗಿಸಲಾಗಿದೆ. ಕೆಂಪು ಅಂಬ್ಯುಲೆನ್ಸ್ನ ಮುಂಭಾಗದ ಮೇಲ್ಬಾಗದಲ್ಲಿ ಕೆಂಪು ಮತ್ತು ನೀಲಿ ಬಣ್ಣ ಸೂಚಕ ಬೆಳಕನ್ನು ಮತ್ತು ಸೈರನ್ ಆಂಬ್ಯುಲೆನ್ಸ್ನಲ್ಲಿ ಜೋಡಿಸಲಾಗಿದೆ. ಒಟ್ಟು 5 ಸಂಖ್ಯೆ 2 ಆಸನಗಳ ಪ್ರಯಾಣಿಕರ ಆಸನ ಚೌಕಟ್ಟುಗಳನ್ನು ಸಲೂನ್ ಒಳಗೆ ಒದಗಿಸಲಾಗಿದೆ. (ಚಾಲಕರ ಕ್ಯಾಚಿನ್ ಜೋಡನೆಗೆ ಎದುರಾಗಿರುವ ಸ್ವೀಟ್ ಲೈಟ್ಗೆ 3 ಸಂಖ್ಯೆ ಮತ್ತು ರೋಗಿಗಳ ಹತ್ತಿರ ಬರುವ ವಿರುದ್ಧ ದಿಕ್ಕಿನಲ್ಲಿ 1 ಸಂಖ್ಯೆ ನೀಲಿ ಬಣ್ಣದ ಕಿಟಕಿ ಪರದೆಗಳನ್ನು ಎರಡೂ ಕಡೆ ಒದಗಿಸಲಾಗಿದೆ. 4 ಫ್ಯಾನ್ಗಳನ್ನು ಅಳವಡಿಸಲಾಗಿದೆ. Foot operated sanitizer ಅನ್ನು ಒಳಗೆ ಅಳವಡಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
Related Articles
Thank you for your comment. It is awaiting moderation.
Comments (0)