ಬಿಜೆಪಿ ಸರಕಾರದ ವರ್ಷದ ಸಾಧನೆಯ ವಿವರ ನೀಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ್
- by Suddi Team
- July 25, 2020
- 9 Views

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಅವಧಿ ಪೂರೈಸಿದ ಸಂದರ್ಭದಲ್ಲಿ ಅನೇಕ ಸವಾಲುಗಳ ನಡುವೆಯೂ ಹಾಗೂ ಕೊರೋನಾ ನಿರ್ವಹಣೆಯೊಂದಿಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಶ್ರಮಿಸಿದ್ದು, ರಾಜ್ಯ ಸರ್ಕಾರದ ಸಾಧನೆಯನ್ನು ಡಿಸಿಎಂ ಡಾ.ಅಶ್ವತ್ಥನಾರಾಯಣ ಜನತೆ ಮುಂದಿಟ್ಟಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ
ನಾವು ಅಂದು ಅಧಿಕಾರ ವಹಿಸಿಕೊಂಡಾಗ ಸಂದರ್ಭದಲ್ಲಿ ಅನಾವೃಷ್ಟಿ ಬರಗಾಲ ವಿತ್ತು. ನಂತರ ಕೆಲ ದಿನದಲ್ಲಿ ಅತಿವೃಷ್ಟಿ, ಉಪ ಚುನಾವಣೆ ಮತ್ತು ಈಗ ಕೋವಿಡ್ ಸೋಂಕು, ಈ ನಾಲ್ಕರ ಹಿನ್ನೆಲೆಯಲ್ಲಿ ಅನೇಕ ಸವಾಲು ಸಮಸ್ಯೆಗಳಿದ್ದರೂ, ರಾಜ್ಯದ ಆಡಳಿತ ಸುಧಾರಣೆ, ಅಭಿವೃದ್ಧಿಗೆ ಹಿನ್ನಡೆ ಯಾಗದಂತೆ ಹಲವಾರು ಸಾಧನೆಗಳನ್ನು ನಮ್ಮ ಸಿಎಂ ಯಡಿಯೂರಪ್ಪನವರು ಕೈಗೊಂಡಿದ್ದಾರೆ. ಅತಿವೃಷ್ಟಿಯಲ್ಲಿ ಮಳೆ ಪ್ರವಾಹ ಸಂದರ್ಭದಲ್ಲಿ 6 ಸಾವಿರ ಕೋಟಿಗೂ ಅಧಿಕ ನೆರವು ನೀಡಿ, ಇಡೀ ವ್ಯವಸ್ಥೆಯನ್ನು ಸಂತ್ರಸ್ತರ ಮನೆ ಬಾಗಿಲಿಗೆ ಕೊಂಡೊಯ್ಯಲಾಯಿತು. ಸಂತ್ರಸ್ತರ ಕಷ್ಟ ಕಾಲದಲ್ಲಿ ನೆರವಾದರು. 2 ಲಕ್ಷ ಅಧಿಕ ಕುಟುಂಬಕ್ಕೆ ತಲಾ 10 ಸಾವಿರ ಪರಿಹಾರ, 1.25 ಲಕ್ಷ ಮನೆ ದುರಸ್ತಿಗೆ 911 ಕೋಟಿ, ಸಂಪೂರ್ಣವಾಗಿ ಕುಸಿದ ಮನೆಗಳಿಗೆ 5 ಲಕ್ಷ ಹಣ ನೀಡಲಾಯಿತು. ಬೆಳೆಗಳ ನಾಶಕ್ಕೆ ಪರಿಹಾರವಾಗಿ 1185 ಕೋಟಿ ನೀಡಿ, ಒಟ್ಟು 6,018 ಕೋಟೆಯನ್ನು ಪ್ರವಾಹದ ವೇಳೆ ವ್ಯಯಿಸಲಾಗಿದೆ ಎಂದರು.
ನಮ್ಮ ಪಕ್ಷದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚನೆ ಮಾಡಲು. ಸಾಧ್ಯವಾಗಲಿಲ್ಲ. ರಾಜ್ಯದ ಜನ ತಿರಸ್ಕಾರ ಮಾಡಿದ ಕಾಂಗ್ರೆಸ್ ಪಕ್ಷ ಭಂಡತನದಿಂದ, ಅಪವಿತ್ರ ಮೈತ್ರಿ ಸರ್ಕಾರ ರಚನೆ ಮಾಡಿತು ಆದರೆ, ಜನ ಪಡಬಾರದ ಕಷ್ಟ ಪಡುವಂತಾಯಿತು. ನಂತರ ರಾಜ್ಯ ರಾಜಕೀಯ ಸನ್ನಿವೇಶದ ಸಂದರ್ಭದಲ್ಲಿ ಉಪ ಚುನಾವಣೆಯನ್ನು ರಾಜ್ಯ ಎದುರಿಸಬೇಕಾಯಿತು. ಈ ಉಪ ಚುನಾವಣೆ 15 ಸ್ಥಾನದಲ್ಲಿ 12 ಶಾಸಕರನ್ನು ಆಯ್ಕೆ ಮಾಡುವುದರ ಮೂಲಕ ಸ್ಥಿರವಾದ ಸರ್ಕಾರಕ್ಕೆ ಬಿಜೆಪಿ ಪಕ್ಷಕ್ಕೆ ರಾಜ್ಯದ ಜನರು ಆಶೀರ್ವಾದ ನೀಡಿದರು.ಹಿಂದಿನ ಮೈತ್ರಿ ಸರ್ಕಾರದ ವೇಳೆ ಸಾಂದರ್ಭಿಕ ಶಿಶು ಹೇಳಿಕೆಗಳು, ದಿನನಿತ್ಯ ಕಿತ್ತಾಟ-ಜಗಳ, ಗೊಂದಲವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ರಾಜ್ಯದ ಜನರ ಕಷ್ಟಗಳ ಬದಲು, ಕೇವಲ ಇವರ ಮೈತ್ರಿ ಸರ್ಕಾರದ ಕಷ್ಟಗಳನ್ನು ನೋಡಬೇಕಿತ್ತು. ಈಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ಪರಸ್ಪರ ಪ್ರಶ್ನೆಗಳು, ಹೆಳಿಕೆಗಳು ನೀಡುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಅವರು ಜನಪರ ಕೆಲಸ-ಕಾರ್ಯ ಮಾಡಲಿಲ್ಲ. ಕೇವಲ ಅಧಿಕಾರದ ಆಸೆಗೆ ಸ್ವಾರ್ಥ ರಾಜಕಾರಣ ಮಾಡಿದರು ಎಂದರು.
ಮಹಾಮಾರಿ ಕೊಡ್-19 ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಕೊರೊನಾ ನಿರ್ವಹಣೆಯಲ್ಲಿ ವೈದ್ಯಕೀಯ ಉಪಕರಣ ಕ್ಕೆ ಬೇರೆ ದೇಶಗಳು ಇನ್ನೂ ಅವಲಂಬನೆಯಲ್ಲಿದ್ದಾರೆ, ಆದರೆ ನಾವು ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಿದ್ದಾರೆ. ರಾಜ್ಯದಲ್ಲಿ ಕೊರೋನಾ ನಿರ್ವಹಣೆಯನ್ನು ಸಿಎಂ ನೇತೃತ್ವದಲ್ಲಿ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಆರ್ಥಿಕ ಮುಗ್ಗಟ್ಟು ಕಷ್ಟ ಕಾಲದ ನಡುವೆ ನಮ್ಮ ರಾಜ್ಯದಲ್ಲಿ 60 ದಿನ ನಿರಂತರ ಲಾಕ್ ಡೌನ್ ಜಾರಿ ಮಾಡಲಾಯಿತು. ರಾಜ್ಯದ ಜನತೆಗೆ ಯಾವುದಕ್ಕೂ ಕೊರತೆ ಆಗದಂತೆ ಆಹಾರ, ತರಕಾರಿ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಯಿತು. ನಂತರ ಇಡೀ ದೇಶದಲ್ಲೇ ಮೊದಲ ಬಾರಿಗೆ ಆರ್ಥಿಕ ವಿಶೇಷ ಪ್ಯಾಕೇಜ್ ನ್ನು ರಾಜ್ಯ ಸರ್ಕಾರ ಘೋಷಣೆ ಮಾಡಲಾಯಿತು. ರಾಜ್ಯದ ಅಸಂಘಟಿತ ವಲಯದ ಕಾರ್ಮಿಕರು, ರೈತರು, ಹೂ-ಹಣ್ಣು ಬೆಳೆಗಾರರು, ಆಗಸರು, ಮಡಿವಾಳರು, ಚರ್ಮ-ಕುಶಲಕರ್ಮಿಗಳು, ಆಟೋ-ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ಸಹಾಯ ಮಾಡಲಾಯಿತು ಎಂದರು.
ಪಡಿತರ ಯೋಜನೆ ಅಡಿಯಲ್ಲಿ ರಾಜ್ಯದ ಬಿ.ಪಿ.ಎಲ್ ಕಾರ್ಡ್ ಸೇರಿದಂತೆ ಎಲ್ಲರಿಗೂ ಉಚಿತವಾಗಿ ಕಳೆದ 3 ತಿಂಗಳಿಂದ ರೇಷನ್ ನೀಡಲಾಯಿತು. ಅಲ್ಲದೇ ಮುಂದಿನ ನವೆಂಬರ್ ತಿಂಗಳವರೆಗೆ ಉಚಿತ ರೇಷನ್ ನೀಡಲಾಗುತ್ತದೆ. ಕೊರೋನಾ ಚಿಕಿತ್ಸೆಯನ್ನು ರಾಜ್ಯದ ಬಡ-ಶ್ರೀಮಂತ ಎಂಬ ಬೇಧ ಭಾವವಿಲ್ಲದೆ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲೀಗ ಹೆಚ್ಚು ಟೆಸ್ಟಿಂಗ್ ಲ್ಯಾಬ್ ಆರಂಭಿಸಿದ್ದೇವೆ, ವೆಂಟಿಲೇಟರ್ ಸೇರಿ ಎಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಮಾಡಲಾಗಿದೆ. ನಮ್ಮ ರಾಜ್ಯವು ಪಿಪಿಇ ಕಿಟ್ ಉತ್ಪಾದನೆ ಯಲ್ಲಿ ಮುಂದಿದ್ದಾರೆ, ಇಡಿ ದೇಶಕ್ಕೆ ಬೇಕಾದ ಪಿಪಿಇ ಕಿಟ್ ಪೂರೈಸುವ ಶಕ್ತಿಯನ್ನು ನಾವು ಹೊಂದಿದ್ದೇವೆ. ಜನಪರ ನಾಯಕ, ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಯಾವುದಕ್ಕೂ ಕೊರತೆ ಆಗದಂತೆ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ರಾಜ್ಯದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕೃಷಿ ಭೂಮಿ ಖರೀದಿಯಲ್ಲೂ ಬರೀ ಭ್ರಷ್ಟಾಚಾರಕ್ಕೆ ಇದ್ದ ಕಾನೂನನ್ನು ನಾವು ತಿದ್ದುಪಡಿ ಮಾಡಿ “ಭೂ ಸುಧಾರಣೆ ಕಾಯ್ದೆ”, “ ನನ್ನ ಬೆಳೆ-ನನ್ನ ಹಕ್ಕು” ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ರೈತರ ಸಮಗ್ರ ಏಳ್ಳಿಗೆಗೆ, ಕೃಷಿಗೆ ಉತ್ತೇಜನ ಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿಶ್ವದಲ್ಲೇ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ನಲ್ಲಿ ನಂಬರ್ ಒನ್ ಆಗಿ ಬೆಂಗಳೂರು ಆಯ್ಕೆಯಾಗಿದೆ. ವಿರೋಧ ಪಕ್ಷದವರು ಕೇವಲ ಬರಿ ಬಣ್ಣ ಬಳಿಯುವ ಕೆಲಸ ಮಾಡಿದ್ದು, ಸರಿ-ತಪ್ಪು ಆಲೋಚನೆ ಮಾಡುವ ಸಮಾಧಾನ ಇವರಿಗೆ ಇಲ್ಲ, ಜನರ, ರಾಜ್ಯದ ಅಭಿವೃದ್ಧಿ ಚಿಂತನೆ ಇಲ್ಲದೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹೂಡಿಕೆದಾರರನ್ನು ಆಕರ್ಷಿಸಲು ದಾವೋಸ್ನಲ್ಲಿ
ನಡೆದ “ವಲ್ಡ್ ಎಕನಾಮಿಕ್ ಫೋರಂ” ಸಮಾವೇಶದಲ್ಲಿ ಭಾಗವಹಿಸಿ, ವಿಶ್ವ ಮಟ್ಟದ ನಾಯಕರ ಜೊತೆ ಚರ್ಚೆ ಮಾಡಿ ಹಲವಾರು ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪನೆ ಯಾಗುವಂತೆ, ಬಂಡವಾಳ ಹೂಡಿಕೆ ಮಾಡುವಂತೆ ಮಾಡಿದ್ದರು. ಆದರೆ ಈ ಹಿಂದಿನ ಸರ್ಕಾರಗಳು ದಾವೋಸ್ಗೆ ಹೋಗದೆ ಇಲ್ಲೇ ಸುತ್ತುತ್ತಾ ಇದ್ದರು. ಬೀದಿ ನಾಟಕ ಮಾಡುತ್ತಿದ್ದರು. ಆದರೆ ಯಡಿಯೂರಪ್ಪನವರು ದಾವೋಸ್ಗೆ ಹೋಗಿ ಬಂದು ನಮ್ಮ ಅಕ್ಕಪಕ್ಕದ ರಾಜ್ಯಗಳ ಸ್ಪರ್ಧೆಯ ಜೊತೆಗೆ ವಿದೇಶಗಳ ಜೊತೆಯೂ ಪೈಪೋಟಿ ಅಗತ್ಯ ಎಂದು ತೋರಿಸಿದರು. ಇನ್ಸೆಸ್ಟ್ ಕರ್ನಾಟಕ, ಅಕ್ರಮ-ಸಕ್ರಮ ಸೇರಿದಂತೆ ಬಹಳಷ್ಟು ಸುಧಾರಣೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೀಗೆ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯ ಪಕ್ಷಿ ನೋಟದ ಕುರಿತು ಸಮಗ್ರ ವಿವರವನ್ನು ಈ ಸಂದರ್ಭದಲ್ಲಿ ನೀಡಿದರು.
Related Articles
Thank you for your comment. It is awaiting moderation.
Comments (0)