ಬೆಂಗಳೂರಿನ ಪೂರ್ವ ಪಶ್ಚಿಮ‌ ಮತ್ತು ಯಲಹಂಕ ವಲಯಗಳ ಕೋವಿಡ್-19 ಉಸ್ತುವಾರಿ ಸಚಿವರುಗಳ ಸಭೆ ನಡೆಸಿದ ಸಿಎಂ

ಬೆಂಗಳೂರು: ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಪೂರ್ವ ಪಶ್ಚಿಮ‌ ಮತ್ತು ಯಲಹಂಕ ವಲಯಗಳ ಕೋವಿಡ್-19 ಉಸ್ತುವಾರಿ ಸಚಿವರುಗಳು ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದರು.

ಬೆಂಗಳೂರಿನಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ವಲಯವಾರು ಸಭೆಯನ್ನು‌ ನಡೆಸಿದ ಮುಖ್ಯಮಂತ್ರಿ ಗಳು. ಹೆಚ್ಚು ಹೆಚ್ಚು ಟೆಸ್ಟ್ ಮಾಡಿ. 24 ಗಂಟೆಯ ಒಳಗೆ ವರದಿ‌ ಬರುವಂತೆ ಮಾಡಬೇಕು.
ವಾರ್ಡ್ ಗಳಲ್ಲಿ ಕೋವಿಡ್ – 19 ಬಗ್ಗೆ‌ ಮಾಹಿತಿ ನೀಡುವ ಜಾಹೀರಾತು ಫಲಕಗಳನ್ನು ಹಾಕಬೇಕು.
ಕುಂಟು‌ ನೆಪ ಹೇಳಿ ಕೆಲಸಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ದ‌ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೋಳ್ಳಿ ಅಂತ ಸೂಚನೆ ನೀಡಿದರು. ಜೊತೆಗೆ ನಿನ್ನೆಯಂತೆಯೇ 5 T
ಟಾರ್ಗೆಟ್ ಫಿಕ್ಸ್ ಮಾಡಿದ ಮುಖ್ಯಮಂತ್ರಿಗಳು.ನಿಮ್ಮ ನಿಮ್ಮ ವಲಯಗಳಲ್ಲಿ‌ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು. ಟಾರ್ಗೆಟ್ ರೀಚ್ ಆಗಲೇಬೇಕು ಅಂತ ತಾಕೀತು ಮಾಡಿದರು.

ನಿಮ್ಮ ವಲಯಗಳ ಪ್ರಗತಿ ಬಗ್ಗೆ ಪ್ರತಿ ವಾರ ನನಗೆ ಮಾಹಿತಿ ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಕೆಲವು ಕಡೆ ಸೋಂಕಿತರು ತಮ್ಮ ಮೊಬೈಲ್ ‌ನಂಬರ್ ತಪ್ಪಾಗಿ ನೀಡುತ್ತಿರುವ ಕಾರಣ.‌ ಟೆಸ್ಟ್ ಗು‌ ಮುನ್ನ ಓಟಿಪಿ ಅಥವಾ ಬೇರೆ ರೀತಿಯ ದಾಖಲಾತಿಗಳನ್ನು‌ ಪಡೆಯುವಂತೆ ಸೂಚಿಸಲಾಯಿತು

Related Articles

Comments (0)

Leave a Comment