ಸಿದ್ದು ಬಗ್ಗೆ ರೆಡ್ಡಿ ವೈಯಕ್ತಿಕ ವಿಷಯ‌ ಪ್ರಸ್ತಾಪ ಸರಿಯಲ್ಲ: ರವಿ ಸುಬ್ರಮಣ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ವೈಯಕ್ತಿಕ ವಿಷಯಗಳನ್ನು ಪ್ರಸ್ತಾಸಿದ್ದು ಸರಿಯಲ್ಲ‌ ಆದರೂ ಅವರು ಕ್ಷಮೆ ಕೇಳಿದ್ದು ಇದನ್ನು ಇಲ್ಲಿಗೆ ಮುಗಿಸುವುದು ಒಳಿತು ಎಂದು ಶಾಸಕ ರವಿಸುಬ್ರಮಣ್ಯ ಹೇಳಿದ್ದಾರೆ.

ಸರ್ದಾರ್ ಪಟೇಲ್ ಜನ್ಮದಿನದ ಅಂಗವಾಗಿ ಜಯನಗರದಲ್ಲಿ ಬಿಜೆಪಿ ನಾಯಕರ ನೇತೃತ್ವದಲ್ಲಿ ಏಕತಾ ಓಟ ನಡೆಸಲಾಯಿತು.
ಬಸವನಗುಡಿ ಶಾಸಕ‌ ರವಿ ಸುಬ್ರಮಣ್ಯ,ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ರಾಜ್ಯ ಕಾರ್ಯದರ್ಶಿ ಜಯದೇವ್, ರಾಜ್ಯ ಬಿಜೆಪಿ ಖಜಾಂಚಿ ಸುಬ್ಬಣ್ಣ,ಶಾಸಕ ಉದಯ ಗರುಡಾಚಾರ್ ಅವರ ನೇತೃತ್ವದಲ್ಲಿ ಜಯನಗರ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಏಕತಾ ಓಟ ನಡೆಯಿತು.ಚಂದ್ರಗುಪ್ತ ಮೌರ್ಯ ಸರ್ಕಲ್ ನಿಂದ ಪ್ರಾರಂಭವಾದ ಓಟ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮೂಲಕವಾಗಿ ಸಾಗಿ ಚಂದ್ರಗುಪ್ತ ಮೌರ್ಯ ಸರ್ಕಲ್ ನಲ್ಲಿ ಮುಕ್ತಾಯವಾಯಿತು.

ನಂತರ ಮಾತನಾಡಿದ ರವಿ ಸುಬ್ರಹ್ಮಣ್ಯ, ಮಾಜಿ‌ ಸಚಿವ ಜನರ್ದಾನರೆಡ್ಡಿ, ಸಿದ್ದರಾಮಯ್ಯ ಅವರ ವೈಯಕ್ತಿಕ ವಿಷಯ ಪ್ರಸ್ತಾಪಿಸಿ ಟೀಕಿಸಿದ್ದಾರೆ.ಯಾರೇ ಆದರು ಯಾರದೇ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕಬಾರದು ಅದು ಸೂಕ್ತವೂ ಅಲ್ಲ.
ರಾಜಕೀಯದಲ್ಲಿ ವೈಯಕ್ತಿಕ ವಿಚಾರವನ್ನು ತರಬಾರದು ಎಂದರು.

ನಾನು ಮಾತನಾಡಿರುವುದರಲ್ಲಿ ತಪ್ಪಿದ್ದರೆ ಕ್ಷಮೆ ಇರಲಿ ಎಂದು ರೆಡ್ಡಿ ಅವರು ಹೇಳಿದ್ದಾರೆ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದೂ ಹೇಳಿದ್ದಾರೆ.ಮಾಧ್ಯಮಗಳು ಅವರ ಕೆಲಸವನ್ನು ಮಾಡಿದ್ದಾರೆ.ಜನಾರ್ದನರೆಡ್ಡಿ ಹೇಳಿದ್ದನ್ನೂ ಅವರು ತೋರಿಸಿದ್ದಾರೆ.ನಂತರ ಅವರು ಕ್ಷಮೆಯಾಚಿಸಿದ್ದನ್ನು ತೋರಿಸಿದ್ದಾರೆ.ಇದರಲ್ಲಿ ಯಾರನ್ನು ದೂರುವುದು ಸರಿಯಿಲ್ಲ ಇದನ್ನು ಇಲ್ಲಿಗೆ ಬಿಡುವುದು ಒಳಿತು ಎಂದಿದ್ದಾರೆ.

Related Articles

Comments (0)

Leave a Comment