ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ತೆನೆ ಇಳಿಸಿದ ರಮೇಶ್ ಬಾಬು:ಕಮಲಕ್ಕೆ ಗೆಲುವಿತ್ತ ನಾರಾಯಣಸ್ವಾಮಿ
- by Suddi Team
- June 13, 2018
- 31 Views
ಬೆಂಗಳೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದು ಉಪ ಚುನಾವಣೆಯಲ್ಲಿ ಕಳದುಕೊಂಡಿದ್ದ ಕ್ಷೇತ್ರವನ್ನು ಬಿಜೆಪಿ ಮತ್ತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರ್.ಸಿ ಕಾಲೇಜು ಮತ ಎಣಿಕೆ ಕೇಂದ್ರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗು ಬೆಂಗಳೂರು ಪದವೀಧರ ಕ್ಷೇತ್ರದ ಮತಗಳ ಎಣಿಕೆ ನಡೆಯಿತು. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಗೆಲುವಿನ ನಗೆ ಬೀರಿದರು.
ಗೆಲುವಿಗೆ ಅಗತ್ಯವಿದ್ದ 8441.5 ಮತದ ಸಂಖ್ಯೆಯನ್ನು ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಸುತ್ತಿನಲ್ಲಿ ಯಾವ ಅಭ್ಯರ್ಥಿಯೂ ತಲುಪದ ಕಾರಣ ನಡೆದ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅಗತ್ಯ ಮತ ಪಡೆಯುವ ಮೂಲಕ ತಮ್ಮ ರಾಜೀನಾಮೆಯಿಂದ ಕಳದುಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ನಾರಾಯಣಸ್ವಾಮಿ ಮರಳಿ ಪಕ್ಷಕ್ಕೆ ತಂದುಕೊಡುವಲ್ಲಿ ಯಶಸ್ವಿಯಾದರು.
1800 ಸಾವಿರ ಮತಗಳ ಅಂತರದಿಂದ ಗೆಲುವು ಸಿಕ್ಕಿದೆ,ನನಗೆ ಟಿಕೆಟ್ ನೀಡಿ ಗೆಲುವಿಗೆ ಸಹಕಾರ ನೀಡಿದ ಪಕ್ಷದ ನಾಯಕರು, ನನ್ನ ಪರ ಕೆಲಸ ಮಾಡಿದ ಐದು ಜಿಲ್ಲೆಗಳ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ,ಇದು ಪಕ್ಷದ ಗೆಲುವಾಗಿದೆ,ನನಗೆ ಮತ ನೀಡಿದ ಎಲ್ಲ ಶಿಕ್ಷಕ ಸಮೂಹಕ್ಕೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಯಾರಿಗೆ ಎಷ್ಟು ಮತ?
ಬಿಜೆಪಿಯ ವೈ.ಎ ನಾರಾಯಣಸ್ವಾಮಿ ಪಡೆದ ಮತ 8479
ಜೆಡಿಎಸ್ ನ ರಮೇಶ್ ಬಾಬು ಒಡೆದ ಮತ 6607
ಕಾಂಗ್ರೆಸ್ ನ ರಾಮಪ್ಪ ಪಡೆದ ಮತ 1652
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಹಾರಿದ ಕೇಸರಿ ಬಾವುಟ:
ಹೆಬ್ಬಾಳ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ನಾರಾಯಣಸ್ವಾಮಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಗೆದ್ದಿದ್ದರು.ಆದರೆ ಈಗ ನಡೆದ ಚುನಾವಣೆಯಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಜೆಡಿಎಸ್ ವಿಫಲವಾಗಿದ್ದು ಕಳೆದುಕೊಂಡಿದ್ದ ಕ್ಷೇತ್ರವನ್ನು ಬಿಜೆಪಿ ಮರಳಿ ಪಡೆದುಕೊಂಡಿದೆ.
Related Articles
Thank you for your comment. It is awaiting moderation.
Comments (0)