Video-ಬೆಂಗಳೂರನ್ನು ನಿಜವಾದ ಸಿಲಿಕಾನ್ ಸಿಟಿ ಮಾಡಬೇಕು;ಯಡಿಯೂರಪ್ಪ
- by Suddi Team
- July 23, 2021
- 31 Views

ಬೆಂಗಳೂರು:ಬೆಂಗಳೂರನ್ನು ನಿಜವಾಗಿಯೂ ಒಂದು ಸಿಲಿಕಾನ್ ಸಿಟಿ ಮಾಡಬೇಕು.ದೇಶ ವಿದೇಶಗಳಿಂದ ಬರುವವರೆಗಗೆ ಬೆಂಗಳೂರು ಪ್ರವಾಸಿ ತಾಣವಾಗಬೇಕು ಹೀಗಾಗಿ ಇಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು.
ಸಿಟಿ ರೌಂಡ್ಸ್ ಮುಗಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ,ಈಗ ನಿರ್ಮಾಣ ವಾಗಿರುವ ರಸ್ತೆಗಳು ಉತ್ತಮವಾಗಿ ನಿರ್ಮಾಣ ವಾಗಿವೆ.ಇನ್ಮುಂದೆ ಈ ರಸ್ತೆಗಳಲ್ಲಿ ಗುಂಡಿ ಬೀಳುವುದಿಲ್ಲ. ಆ ರೀತಿಯಾಗಿ ನಗರದ ಎಲ್ಲಾ ಕಡೆ ಚೆನ್ನಾಗಿ ರಸ್ತೆ ಕಾಮಗಾರಿಗಳ ಪೂರ್ಣ ಗೊಳಿಸಲಾಗಿದೆ.ರಾಜಕಾಲುವೆ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ.ಸಮಗ್ರ ಬೆಂಗಳೂರು ಅಭಿವೃದ್ಧಿಗೆ ಒತ್ತು.ಇದಕ್ಕೆ ಸೂಕ್ತ ಹಣಕಾಸು ಒದಿಸಲು ಕ್ರಮ ವಹಿಸಲಾಗಿದೆ ಎಂದ್ರು.
ಹಿರಿಯ ಅಧಿಕಾರಿಗಳ ಜೊತೆಗೆ ನಗರ ಪರಿಶೀಲನೆ ನಡೆಸಲಾಗಿದೆ. ಎನ್ ಎ ಹ್ಯಾರಿಸ್, ರಿಜ್ವನ್ ಅರ್ಷದ್ ಭಾಗಿಯಾಗಿ ಕೆಲಸ ಕಾರ್ಯಗಳನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದರು.ಬೆಂಗಳೂರು ನಗರ ಪ್ರವಾಸಿಗರ ತಾಣ ಆಗಬೇಕು
ಅದಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗ್ತಿದೆ. ಇಪ್ಪತ್ತು ವರ್ಷ ಆದರೂ ಸಣ್ಣ ಗುಂಡಿಯಾಗದ ರೀತಿ ರಸ್ತೆಗಳನ್ನು ಮಾಡಲಾಗಿದೆ. ಕ್ವಾಲಿಟಿ ರಸ್ತೆಗಳು, ರಾಜಕಾಲುವೆಗಳ ಅಭಿವೃದ್ಧಿ, ಕೆರೆ ಅಭಿವೃದ್ಧಿ ಗೆ ವಿಶೇಷ ಗಮನ ಕೊಡಲಾಗಿದೆ
ಬೆಂಗಳೂರಿನ ಎಲ್ಲಾ ರಸ್ತೆಗಳ ಅಭಿವೃದ್ಧಿ ಗೆ ಹಣಕಾಸಿನ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. 36 ರಸ್ತೆಗಳನ್ನು ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿ ಪಡಿಸಲಾಗ್ತಿದೆ. 69 ರಸ್ತೆಗಳು ವೈಟ್ ಟಾಪಿಂಗ್ ರಸ್ತೆಯಡಿ ಅಭಿವೃದ್ಧಿ ಪಡಿಸಲಾಗಿದೆ ಎಂದ್ರು.
ರಾಜ್ಯದ ಹಲವೆಡೆ ಮಳೆ ಹಿನ್ನೆಲೆ ಮಳೆಯಿಂದ ಅನಾಹುತ ಡಿಸಿಗಳ ಜೊತೆ ಚರ್ಚೆ ಮಾಡಿದ್ದೇನೆ ಸಂಜೆ ವೀಡಿಯೋ ಕಾನ್ಪೆರೆನ್ಸ್ ಕೂಡ ಮಾಡ್ತೇನೆ.ಅಗತ್ಯ ಬಿದ್ರೆ ಹೆಲಿಕಾಪ್ಟರ್ ನಲ್ಲಿ ಅಲ್ಲಿಗೆ ಹೋಗ್ತೇನೆ.ಆದರೆ ಮಳೆ ವಾತಾವರಣ ಇರುವ ಕಾರಣ ಹೆಲಿಕಾಪ್ಟರ್ ನಲ್ಲಿ ಹೋಗೋಕೆ ಆಗಲ್ಲ. ಈಗಿನ ಪರಿಸ್ಥಿತಿ ಯಲ್ಲಿ ಗಾಬರಿ ಯಾಗುವಂತ ಸಂದರ್ಭ ಸೃಷ್ಟಿ ಯಾಗಿಲ್ಲ.ಪ್ರವಾಹ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆ.ಡಿಸಿಗಳ ಜೊತೆ ಚರ್ಚೆ ಮಾಡಿದಾಗ, ಯಾವುದೇ ದೊಡ್ಡ ಅನಾಹುತ ಆಗಿಲ್ಲ ಎಂದಿದ್ದಾರೆ.ಹೀಗಾಗಿ ಮಳೆಯಿಂದ ಭಯ ಪಡುವ ಅಗತ್ಯ ಇಲ್ಲ ಎಂದ್ರು.
ಮಳೆಯಿಂದ ಅನಾಹುತ ಆಗ್ತಿರುವ ಜಿಲ್ಲೆಯ ಸಚಿವರ ಜೊತೆ, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕಳೆದ ನಾಲ್ಕೈದು ದಿನದಿಂದ ನಿರಂತರವಾಗಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದೇನೆ ಹೆಲಿಕಾಪ್ಟರ್ ಮೂಲಕ ವೀಕ್ಷಿಸಲು ವಾತಾವರಣ ಸರಿ ಇಲ್ಲ ಅನಾಹುತದ ಪರಿಸ್ಥಿತಿ ಏನೂ ಬಂದಿಲ್ಲ ಎಂದ್ರು.
ಕಳೆದ ಮೂರು ದಿನಗಳಿಂದಲೂ ನಾನು ಮಳೆ ಪೀಡಿತ ಡಿಸಿಗಳ ಸಂಪರ್ಕ ದಲ್ಲಿದ್ದೇನೆ.ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ತೆರಳದೆ ಇರುವ ವಿಚಾರ ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮ ಪ್ರತಿನಿಧಿ ಗಳ ಮೇಲೆ ಗರಂ ಆದ ಸಿಎಂ ಯಾರಿ ಹೇಳಿದ್ದು ಅಲ್ಲಿಗೆ ಹೋಗಿಲ್ಲ ಎಂದು ಗರಂ ಆಗಿ ತೆರಳಿದ್ರು.
Related Articles
Thank you for your comment. It is awaiting moderation.
Comments (0)