ರೈತರಿಗೆ ಸಿಹಿಸುದ್ದಿ ನೀಡಿದ ಸರ್ಕಾರ: ಎಲ್ಲಾ ಜಲಾಶಯಗಳಿಂದ ನಾಲೆಗೆ ನೀರು ಹರಿಸಲು ಸೂಚನೆ
- by Suddi Team
- July 10, 2018
- 846 Views
ಫೈಲ್ ಫೋಟೋ
ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಉತ್ತಮ ಒಳಹರಿವು ಬರುತ್ತಿದೆ. ಹೀಗಾಗಿ
ಐಸಿಐಸಿ ಮೀಟಿಂಗ್ ಗಳನ್ನ ಮಾಡಿ ರೈತರಿಗೆ ಅನುಕೂಲವಾಗುವ ರೀತಿ ನೀರು ಬಿಡಲು ತೀರ್ಮಾನವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಡಿಕೆಶಿ,ರಾಜ್ಯದಲ್ಲಿ ಉತ್ತಮವಾದ ಮಳೆಯಾಗುತ್ತಿದೆ
ಕಳೆದ ವರ್ಷಕ್ಕಿಂತ ಈ ವರ್ಷ ಎಲ್ಲಾ ಡ್ಯಾಂಗಳಲ್ಲಿ ಒಳ ಹರಿವು ಹೆಚ್ಚಿದೆ. ಕಬಿನಿ, ಹಾರಂಗಿ ಜಲಾಶಯಗಳು ತುಂಬಿವೆ
ಕಾವೇರಿ, ಕೃಷ್ಣಾ, ತುಂಗಭಧ್ರೆಯಲ್ಲೂ ಒಳಹರಿವು ಹೆಚ್ಚಾಗಿ ಬರ್ತಿದೆ ಐಸಿಐಸಿ ಮೀಟಿಂಗ್ ಗಳನ್ನ ಮಾಡಿ ರೈತರಿಗೆ ಅನುಕೂಲವಾಗುವ ರೀತಿ ನೀರು ಬಿಡಲು ತೀರ್ಮಾನವಾಗಿದೆ
ಭದ್ರಾಡ್ಯಾಂನಿಂದ 100 ದಿನ ನೀರು ಬಿಡಲು ಹೇಳಿದ್ದೇನೆ ಎಂದರು.
ನೀರಾವರಿ ಸಲಹಾ ಸಮಿತಿಗೆ ಸಚಿವನ್ನು ನೇಮಕ ಮಾಡಲಾಗಿದೆ. ತುಂಗಭದ್ರಾ ಜಲಾಶಯಕ್ಕೆ ನಾಡಗೌಡ,
ರಮೇಶ್ ಜಾರಕಿಹೊಳಿಯವರನ್ನ ಮಲಪ್ರಭ, ಘಟಪ್ರಭಕ್ಕೆ
ಕೆಆರ್ ಎಸ್ ಗೆ ಪುಟ್ಟರಾಜು, ಕಬಿನಿ ಜಲಾಶಯಕ್ಕೆ ಪುಟ್ಟರಂಗಶೆಟ್ಟಿ, ಹಾರಂಗಿ ಜಲಾಶಯಕ್ಕೆ ಸಾ.ರಾ ಮಹೇಶ್, ಹೇಮಾವತಿಗೆ ಎಚ್.ಡಿ ರೇವಣ್ಣನವರನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಕೂಡಲೇ ಸ್ಥಳೀಯ ಶಾಸಕರು, ಜಲಪ್ರತಿನಿಧಿಗಳ ಜೊತೆ ಮಾತಾಡಿ ನೀರು ಬಿಡಲು ಹೇಳಿದ್ದೇವೆ ತುಮಕೂರು ಭಾಗಕ್ಕೆ ಕುಡಿಯುವ ನೀರು ಬಿಟ್ಟಿದ್ದೇವೆ ಎಂದ್ರು.
ಕೆಆರ್ ಎಸ್ ನಿಂದ ತಮಿಳುನಾಡಿಗೆ ಕಳೆದ ಜೂನ್ ತಿಂಗಳಲ್ಲಿ 9 ಟಿಎಂಸಿ ನೀರು ಬಿಡಬೇಕಿತ್ತು ಆದರೆ 13 ಟಿಎಂಸಿ ಬಿಟ್ಟಿದ್ದೇವೆ ಈ ತಿಂಗಳಲ್ಲಿ 5 ಟಿಎಂಸಿ ನೀರು ಬಿಟ್ಟಿದ್ದೇವೆ ಎರಡು ತಿಂಗಳಲ್ಲಿ 18 ಟಿಎಂಸಿ ನೀರು ಬಿಟ್ಟಿದ್ದೇವೆ ಒಟ್ಟಾರೆ 40 ಟಿಎಂಸಿ ಬಿಡಬೇಕಿತ್ತು 18 ಟಿಎಂಸಿ ನೀರು ಬಿಟ್ಟಿದ್ದೇವೆ ರಾಜ್ಯದ ರೈತರ ಹಿತ ಕಾಪಾಡಬೇಕಾಗಿದೆ ಹಾಗಾಗಿ ಪರಿಸ್ಥಿತಿ ನೋಡಿಕೊಂಡು ನೀರು ಹರಿಸಲಾಗುತ್ತದೆ ಎಂದರು.
Related Articles
Thank you for your comment. It is awaiting moderation.
Comments (0)