ಅತಿವೃಷ್ಟಿ ಯಿಂದ 1685 ಕಿ.ಮೀ. ರಸ್ತೆ , 456 ಸೇತುವೆ ಹಾನಿ : ಡಿಸಿಎಂ ಗೋವಿಂದ ಕಾರಜೋಳ
- by Suddi Team
- August 14, 2020
- 10 Views

ಬಾಗಲಕೋಟೆ : ಆ.14 : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಪ್ರವಾಹದಿಂದ ಲೋಕೋಪಯೋಗಿ ಉಲಾಖೆಯ 1685 ಕಿ.ಮೀ ರಸ್ತೆ, 456 ಸೇತುವೆ ಹಾಗೂ 46 ಕಟ್ಟಡಗಳು ಹಾನಿಗೊಳಗಾಗಿದ್ದು, ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 2697 ಕೋಟಿ ರೂ ಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದ್ದು, ಲೋಕೋಪಯೋಗಿ ಇಲಾಖೆಯ ಹಾನಿಗೊಳಗಾದ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ಬಾಗಲಕೋಟೆ ಜಿಲ್ಲೆಉಲ್ಲಿ 2.65 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಪೈಕಿ 2.36 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಈ ವರೆಗೆ 98952 ಮೆಟ್ರಿಕ್ ಟನ್ ರಸಗೊಬ್ಬರವನ್ನು ರೈತರಿಗೆ ಪೂರೈಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಯೂರಿಯಾ 29950 ಮೆ.ಟನ್ ಅವಶ್ಯಕತೆಗೆ 37559 ಮೆ.ಟನ್ ಪೂರೈಸಲಾಗಿದೆ.ಡಿಎಪಿ 18982 ಮೆ.ಟನ್, ಕಾಂಪ್ಲೇಕ್ಸ್ 26752 ಮೆ.ಟನ್, ಎಂಒಪಿ 14226 ಮೆ.ಟನ್, ಎಸ್ಎಸ್.ಎ 1433 ಮೆ.ಟನ್ ಪೂರೈಸಲಾಗಿದೆ ಎಂದರು. ಜುಲೈ ಮಾಹೆಯಲ್ಲಿ ಕಾಪುದಾಸ್ತು ಅಡಿ ಸಹಕಾರ ಸಂಘಗಳಿಗೆ 3,436 ಮೆ.ಟನ್, ಖಾಸಗಿ ವಿತರಕರಿಗೆ 2,672 ಮೆ.ಟನ್ ಯೂರಿಯಾ ಗೊಬ್ಬರ ಪೂರೈಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಲಾಕಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಮುಸುಕಿನ ಜೋಳದ ಪ್ರತಿ ರೈತರಿಗೆ 5 ಸಾವಿರ ರೂ.ಗಳಂತೆ ಜಿಲ್ಲೆಯ 27855 ರೈತರಿಗೆ 13.92 ಕೋಟಿ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ ಎಂದರು.
ಬಿತ್ತನೆ ಬೀಜ ಯೋಜನೆಯಡಿ 1.39 ಕೋಟಿ ಸಹಾಯಧನದಲ್ಲಿ ಜಿಲ್ಲೆಯ 55560 ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಬೆಳೆ ವಿಮೆ ಯೋಜನೆಯಡಿ 2018-19ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನಲ್ಲಿ 65011 ರೈತರಿಗೆ 114.89 ಕೋಟಿ ರೂ. ಬೆಳೆ ವಿಮೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ರಾಜೇಂದ್ರ, ಸಿಇಓ ಮತ್ತಿತರರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)