ಸರ್ಕಾರ ಒಡೆಯುವುದು ಮಡಕೆ ಒಡೆದಷ್ಟು ಸುಲಭವಲ್ಲ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಅತಂತ್ರವಾಗಲಿದೆ, ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂಬ ಸುದ್ದಿ ಇತ್ತಿಚಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್‌ನ 20 ಮಂದಿ ಶಾಸಕರು ಸಂಪರ್ಕದಲ್ಲಿದ್ದಾರೆ ಅಂತಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಮೈತ್ರಿ ನಿಯಮಕ್ಕೆ ಕಟ್ಟು ಬಿದ್ದಿದ್ದು ಮುಂದಿನ 5 ವರ್ಷ ಕುಮಾರಸ್ವಾಮಿ ಸಿಎಂ ಅಂತಿದ್ದಾರೆ. ಹಾಗಾದ್ರೇ ರಾಜ್ಯ ರಾಜಕೀಯದಲ್ಲಿ ನಿಜಕ್ಕೂ ನಡೆಯುತ್ತಿರೊದಾದ್ರು ಏನು ಅಂತ ತಿಳಿಯಲು ಈ ಸ್ಟೋರಿ ಓದಿ.

ರಾಜ್ಯ ಮೈತ್ರಿ ಸರ್ಕಾರ ಅಭದ್ರವಾಗಿದೆ. 20 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕ ಸೇರಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕ ಸಿ ಟಿ ರವಿ ಬಾಂಬ್ ಸಿಡಿಸಿದ್ದಾರೆ. ಈ ಸುದ್ದಿ ಸುಳ್ಳು ಎಂದು ಸಮರ್ಥನೆ ಮಾಡೊದ್ರಲ್ಲಿ ಮೈತ್ರಿ ನಾಯಕರು ಕಸರತ್ತು ಶುರು ಮಾಡಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ನಾನೇ ಸಿಎಂ ಎಂದಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ತಲೆ ಬಿಸಿ ಮಾಡಿದೆ. ಹೌದು ಸದಾಶಿವನಗರದಲ್ಲಿ ಈ ಸಂಬಂಧ ಡಿಕೆ ಶಿವಕುಮಾರ್ ಮಾತನಾಡಿ , ರಾಜಕೀಯವಾಗಿ ಯಾರು ಸನ್ಯಾಸಿ ಅಲ್ಲ ,ಎಲ್ಲರಿಗೂ ಆಸೆ ಇದೆ. ಮುಂದಿನ ಅವಧಿಯಲ್ಲಿ ಸಿಎಂ ಎಂದಿರಾ ಬಹುದು? ಹೊರತಾಗಿ ಸಿದ್ದರಾಮಯ್ಯ ಮೈತ್ರಿಗೆ ತೊಂದರೆ ತರುವಂತ ನಾಯಕ ಅಲ್ಲ , ಅವರು ಸೀನಿಯರ್ ಲೀಡರ್ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ನಾಯಕರ ಸರ್ಕಾರ ರಚನೆ ಆಸೆಯಲ್ಲಿ ತಾಳ್ಮೆ ಇರಲಿ. ಮಡಕೆಯಂತೆ ಒಡೆದ್ರೆ ಸರ್ಕಾರ ಬೀಳಲ್ಲ. ಒಂದೊಮ್ಮೆ ಇದನ್ನ ಕೇಳಿಯೂ ಮುಂದುವರೆದ್ರೆ ಆಲ್ ದಿ ಬೆಸ್ಟ್ ಅಂತ ಹೇಳಿ ಬಿಜೆಪಿ ನಾಯಕರಿಗೆ ಡಿಕೆಶಿ ಟಾಂಗ್ ಕೊಟ್ಟರು.

ಡಿಕೆಶಿ ಮನೆಯ ಭೇಟಿ ಮುಗಿಸಿ ಮಾತನಾಡಿದ ಮಾಜಿ ಸಚಿವ ಎಚ್ ಎಂ ರೇವಣ್ಣ ಸಹ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಸಿದ್ದರಾಮಯ್ಯ ಸಿಎಂ ಅಂತ ಹೇಳಿರೊದ್ರಲಿ ತಪ್ಪಿಲ್ಲ. ಆದ್ರೆ ಮೈತ್ರಿ ಸರ್ಕಾರದಲ್ಲಿ ಸಿಎಂ ಅಂತ ಹೇಳಿಲ್ಲ ಎಂದರು.

Related Articles

Comments (0)

Leave a Comment