ರೈತ ಮಹಿಳೆಗೆ ಸಚಿವ ಮಾಧುಸ್ವಾಮಿ ಅವಾಜ್: ರಾಸ್ಕಲ್ ನಾನು ಕೆಟ್ಟ ಮನುಷ್ಯ ಇದೀನಿ ಎಂದ ಸಚಿವರು

ಬೆಂಗಳೂರು: ನಾನು ತುಂಬಾ ಕೆಟ್ಟ ಮನುಷ್ಯ ಇದ್ದೀನಿ. ರಾಸ್ಕಲ್, ಬಾಯಿ ಮುಚ್ಚಿಕೊಂಡು ಹೋಗು ಅಂತಾ ಕೋಲಾರದಲ್ಲಿ ರೈತ ಹೋರಾಟಗಾರ್ತಿಗೆ ಸಚಿವ ಮಾಧುಸ್ವಾಮಿ ಆವಾಜ್ ಹಾಕಿದ ಘಟನೆ ನಡೆದಿದೆ.

ಕೋಲಾರದ ಕೆಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳ ವೀಕ್ಷಣೆಯನ್ನ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಮಾಡಿದ್ರು. ಕೋಲಾರ ತಾಲೂಕಿನ ಎಸ್.ಆಗ್ರಹಾರ ಕೆರೆಯ ವೀಕ್ಷಣೆ ವೇಳೆ ಸಚಿವ ಮಾಧುಸ್ವಾಮಿ ಅವ್ರಿಗೆ ಕೋಲಾರ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ ಅವ್ರು ಕೆರೆ ಒತ್ತುವರಿ, ಚೆಕ್ ಡ್ಯಾಂಗಳ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ರು. ಈ ವೇಳೆ ಸಚಿವ ಮಾಧುಸ್ವಾಮಿ ಅವ್ರು, ಕೆರೆ ಒತ್ತುವರಿ ತೆರವು ನೀನೇ ಮಾಡು ಅಂತಾ ಹೇಳಿದ್ರು. ನಾವು ತೆರವು ಮಾಡುವುದಾದರೆ ಇಲಾಖೆ ಯಾಕೆ ಬೇಕು ಸರ್ ಅಂತಾ ನಳಿನಿ ಪ್ರಶ್ನೆ ಮಾಡಿದ್ರು. ಇದ್ರಿಂದ ಸಿಟ್ಟಾದ ಸಚಿವ ಮಾಧುಸ್ವಾಮಿ ಅವ್ರು, ನಾನು ತುಂಬಾ ಕೆಟ್ಟ ಮನುಷ್ಯ ಇದ್ದೀನಿ, ರಾಸ್ಕಲ್ ಬಾಯಿ ಮುಚ್ಚಿಕೊಂಡು ಹೋಗು ಅಂತಾ ಆವಾಜ್ ಹಾಕಿದ್ರು. ಈ ವೇಳೆ ಸಚಿವರು ಹಾಗೂ ನಳಿನಿ ನಡುವೆ ವಾಗ್ವಾದ ನಡೆಯಿತು.

ಕೂಡಲೇ ಪೊಲೀಸ್ರು ಮಧ್ಯೆ ಪ್ರವೇಶಿಸಿ ನಳಿನಿ ಅವ್ರನ್ನ ಅಲ್ಲಿಂದ ಹೊರಹಾಕಿದ್ರು. ನಂತ್ರ ಸಚಿವ ಮಾಧುಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಸಿ ವ್ಯಾಲಿಯ ನೀರನ್ನ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ರೈತರು ನೀರನ್ನ ಕದಿಯಬಾರದು ಅಂತ ಮನವಿ ಮಾಡಿದ್ರು. ನೀರು ಸರಾಗಾವಾಗಿ ಹರಿಯಲು ಚೆಕ್ ಡ್ಯಾಂಗಳ ಎತ್ತರವನ್ನು ಕಡಿತ ಮಾಡಲಾಗುತ್ತಿದೆ ಅಂತಾನೂ ಹೇಳಿದ್ರು.

Related Articles

Comments (0)

Leave a Comment