ಡಿಕೆಶಿ ರಾಜೀನಾಮೆ ಕೊಡುವಂತದ್ದು ಏನು ಆಗಿಲ್ಲ: ಸಿಎಂ

ಬೆಂಗಳೂರು: ಐಟಿ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನ್ಮಕವಾಗಿ ಸಚಿವ ಡಿಕೆ ಶಿವಕುಮಾರ್ ಜಿತೆಗೆ ನಾವಿದ್ದೇವೆ.ಅವರೂ ಕೂಡ ಕಾನೂನತ್ಮಕವಾಗಿ ಹೋರಾಟ ನಡೆಸುತ್ತಿದ್ದಾರೆ ಇದನ್ನು ದೊಡ್ಡ ಸುದ್ದಿ ಮಾಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗೃಹ ಕಛೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಡಿಕೆಶಿಯವರು ರಾಜೀನಾಮೆ ಯಾಕೆ ಕೊಡಬೇಕು, ರಾಜೀನಾಮೆ ಕೊಡುವಂತದ್ದೇನೂ ಆಗಿಲ್ಲ. ಬಿಜೆಪಿಯವರು ಎಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ. ಅದರ ಬಗ್ಗೆ ಮುಂದೆ ಮಾತನಾಡ್ತೀನಿ ಎಂದರು.

ಜಮೀರ್ ಅಹಮದ್ ಮೆಕ್ಕಾ ಹೋಗಿ ಬಂದಿದ್ದಾರೆ. ಮೆಕ್ಕಾದಿಂದ ತಂದಿದ್ದ ಖರ್ಜುರಾ ಮತ್ತು ಹೋಲಿ ನೀರು ಕೊಡಲು ಬಂದಿದ್ರು ಅಷ್ಟೇ. ಇದನ್ನೂ ದೊಡ್ಡ ಸುದ್ದಿ ಮಾಡಬೇಕಾ? ಮೆಕ್ಕಾಗೆ ಹೋಗಿದ್ದರು ತಂದು ಕೊಟ್ಟಿದ್ದಾರೆ. ಪರಿಷತ್ ಸದಸ್ಯ ಫಾರುಕ್ ಸಹ ತಂದು ಕೊಟ್ಟಿದ್ದರು. ಅದ್ರಲ್ಲೇನೂ ವಿಶೇಷ ಇಲ್ಲ ಎಂದು ತಿಳಿಸಿದರು.

Related Articles

Comments (0)

Leave a Comment