ಮೈತ್ರಿ ಸರ್ಕಾರ ಪತನಕ್ಕಾಗಿ ಬಿಜೆಪಿಯಿಂದ ಡಿಕೆ ಶಿವಕುಮಾರ್ ಟಾರ್ಗೆಟ್,ಐಟಿ ಇಡಿ ಅಸ್ತ್ರ ಪ್ರಯೋಗ: ಡಿ.ಕೆ ಸುರೇಶ್

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇ.ಡಿ, ಐ.ಟಿ ಬಳಸಿಕೊಂಡು ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನಕ್ಕೆ ಬಿಜೆಪಿ ರಾಜ್ಯ ನಾಯಕರು ಕೈ ಹಾಕಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಆರೋಪ ಮಾಡಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ.ಕೆ ಸುರೇಶ್,ಇ.ಡಿ, ಐ.ಟಿ ಬಳಸುಕೊಂಡು ಕೆಲವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ.ನನ್ನ ಸಹೋದರ ಡಿ ಕೆ ಶಿವಕುಮಾರ್ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ.ಆದರೂ ಏನು ಮಾಡಲಾಗಲಿಲ್ಲ ಹೀಗಾಗಿ ಬಿಜೆಪಿಗರು ಮತ್ತೆ ಐ.ಟಿ ಇ.ಡಿ ಇಟ್ಕೊಂಡು ಸರ್ಕಾರ ಅಸ್ಥಿರ ಪ್ರಯತ್ನ ಮಾಡ್ತಿದ್ದಾರೆ.
ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡ್ತಿಲ್ಲ ಸಿಬಿಐ ಮೋರ್ಚಾ, ಇಡಿ ಮೋರ್ಚಾ ಆಗಿ ಬದಲಾಗಿದೆ‌ ರಾಜ್ಯ ಬಿಜೆಪಿ ನಾಯಕರ ಒತ್ತಡವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ರು.

ಸುಭದ್ರ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ.ಬಿಜೆಪಿ ಸರ್ಕಾರ ರಚನೆಗೆ ಪ್ರಯತ್ನ ನಡೆಸುತ್ತಿದ್ದು ಅದಕ್ಕಾಗಿ ಡಿ.ಕೆ ಶಿವಕುಮಾರ್ ಟಾರ್ಗೆಟ್ ಮಾಡ್ತಿದ್ದಾರೆ‌ ಸಿಬಿಐ, ಐಟಿ, ಇಡಿ ಇಲಾಖೆಗೆ ನಾವು ಸಂಪೂರ್ಣ ಬೆಂಬಲ‌ ನೀಡಿದ್ದೇವೆ ಆದರೂ ಕಿರುಕುಳ ನೀಡ್ತಿದ್ದಾರೆ ಇವೆಲ್ಲಾ ಪ್ರಧಾನಿ ಗಮನಕ್ಕೆ ಬಂದಿದೆಯೋ ಇಲ್ವೋ ಗೊತ್ತಿಲ್ಲ ಅವರ ಭೇಟಿಗೆ ಅವಕಾಶ ಕೋರಿದ್ದೇವೆ ಸೋನಿಯಾ ಗಾಂಧಿ, ಉಪೇಂದ್ರ ಹೂಡಾ, ಮಮತಾ ಬ್ಯಾನರ್ಜಿ ಸೇರಿ ಅನೇಕರಿಗೆ ಇದೆ ರೀತಿ ಕಿರುಕುಳ ನೀಡಲಾಗ್ತಿದೆ‌ ರಾಜ್ಯದಲ್ಲಿ ಪ್ರಭಲ ಇದ್ದವರಿಗೆ ಕಿರುಕುಳ ನೀಡಲಾಗ್ತಿದೆ‌ ಗುಜರಾತ್ ಶಾಸಕರಿಗೆ ನಾವು ಬೆಂಬಲ ನೀಡಿದ್ದ ಕೋಪಕ್ಕೆ ಈ ರೀತಿ ನಮಗೆ ಕಿರುಕುಳ ನೀಡಲಾಗ್ತಿದೆ ಎಂದ್ರು.

ಗೋವಿಂದ ರಾಜ್ ಡೈರಿಯನ್ನು ಸದನದಲ್ಲಿ ಬಿಜೆಪಿಗರು ಹೇಗೆ ತೋರಿಸ್ತಾರೆ ಇದು ಹೇಗೆ ಸಾಧ್ಯ ? ಐಟಿ ಇಡಿಗೆ ಆರ್ ಟಿ ಐ ಅಪ್ಲೈ ಆಗಲ್ಲ ಆದರೂ ಗೋವಿಂದ ರಾಜ್ ಡೈರಿ ಬಿಜೆಪಿಗರಿಗೆ ಹೇಗೆ ಸಿಕ್ಕಿತು ಎಂದು ಡಿಕೆ ಸುರೇಶ್ ಪ್ರಶ್ನಿಸಿದ್ರು.

ಆಪರ್ಶೆನ್ ಕಮಲಕ್ಕೆ ಬಿಜೆಪಿ ನಾಯಕರು ಪ್ರಯತ್ನ‌ ನಡೆಸಿ ೬ ಶಾಸಕರಿಗೆ ಗಾಳ‌ ಹಾಕಿದ್ದು ಆಸೆ ಆಮಿಷ ಒಡ್ಡುತ್ತಿದ್ದಾರೆ. ನಾನು ಐಟಿ ಮತ್ತು ಇಡಿ ಗೆ ಹೆದರಿ ಪತ್ರಿಕಾಗೋಷ್ಠಿ ಮಾಡ್ತಾ ಇಲ್ಲ.ಪ್ರಧಾನಿ ಕಚೇರಿಯನ್ನು ಯಾವ ರೀತಿ ದುರ್ಬಳಕೆ ಮಾಡಲಾಗ್ತಾ ಇದೆ ಎಂಬುವುದನ್ನು ಪ್ರಧಾನಿ ಹಾಗೂ ರಾಜ್ಯದ ಜನರ ಗಮನಕ್ಕೆ ತರಲು ಪತ್ರಿಕಾ ಗೋಷ್ಟಿ ಮಾಡ್ತಾ ಇದ್ದೆನೆ ಎಂದರು.

ಸಹೋದರ ಸುದ್ದಿಗೋಷ್ಠಿ ನಡೆಸಿದ ಕುರಿತು ಸ್ಪಷ್ಟೀಕರಣ ನೀಡಿದ ಸಚಿವ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಯಾವ ಕಾರಣಕ್ಕೆ ಪತ್ರಿಕಾಗೋಷ್ಠಿ ಮಾಡಿದ್ದಾರೋ ಗೋತ್ತಿಲ್ಲ‌ ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೆನೆ ಈಗ ನಾನು ತುರ್ತಗಿ ಚಿನ್ನಸ್ವಾಮಿ ಸ್ಟೇಡಿಯಂ ಹೋಗಬೆಕು ಅಲ್ಲಿ ಕಾರ್ಕಕ್ರಮವೊಂದರ ಉದ್ಘಾಟನೆ ಇದೆ ಸಿಎಂ ಕಾಯುತ್ತಿದ್ದಾರೆ ಎಂದು‌ ಹೇಳಿ ಹೊರಟರು.

Related Articles

Comments (0)

Leave a Comment