ಕಾವೇರಿ ವಿಚಾರವಾಗಿ ತಂದೆಯಿಂದ ಸಲಹೆ ಪಡೆದ ಸಿಎಂ!

ಬೆಂಗಳೂರು: ಏಕಪಕ್ಷೀಯವಾಗಿ ಕಾವೇರಿ ನದಿ ನೀರು ಪ್ರಾಧಿಕಾರ ರಚನೆ ಮಾಡಿರುವ ಸಂಬಂಧ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.

ಪದ್ಮನಾಭನಗರದಲ್ಲಿ ಮಾಜಿ‌ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ನರೇಂದ್ರ ಮೋದಿಯವರಂತಹ ದೇಶದ ಪ್ರಧಾನಿಗಳೇ ನೀರಾವರಿ ವಿಚಾರದಲ್ಲಿ ದೇವೇಗೌಡರು ಎನ್ ಸೈಕ್ಲೋಪೀಡಿಯಾ ಇದ್ದ ಹಾಗೆ ಅಂತ ಹೇಳಿದ್ದಾರೆ. ಹಾಗಾಗಿ, ಕಾವೇರಿ ವಿಚಾರದಲ್ಲಿ ಕೋರ್ಟ್ ಸಂಬಂಧಿತ ಕೆಲವೊಂದು ತಾಂತ್ರಿಕ ವಿಚಾರಗಳನ್ನು ಚರ್ಚೆ ಮಾಡಬೇಕಾಗಿತ್ತು ಅದನ್ನು ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ ಎಂದರು ಹೇಳಿದರು.

ದೇವೇಗೌಡರಿಗೆ ನೀರಾವರಿ ವಿಚಾರದಲ್ಲಿ ಅಳವಾದ ಜ್ಞಾನ ಇದೆ, ಇವತ್ತೂ ಕೂಡಾ ನೀರಾವರಿ ವಿಚಾರ ಬಂದರೆ ಅವರು ಸ್ಟೂಡೆಂಟ್ ಇದ್ದ ಹಾಗೆ. ಈ ವಯಸ್ಸಿನಲ್ಲೂ ಕೂಡಾ ನೀರಾವರಿ ವಿಚಾರವಾಗಿ ಅಧ್ಯಯನ ನಡೆಸುತ್ತಾರೆ. ಕಾವೇರಿ ವಿಚಾರ ಮಾತ್ರ ಅಲ್ಲ, ರಾಜ್ಯದ ಎಲ್ಲಾ ನೀರಾವರಿ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ಅವರ ಸಲಹೆಗಳನ್ನು ಪಡೆದುಕೊಂಡೇ ಮುಂದುವರಿಯುತ್ತೇನೆ ಎಂದು ತಿಳಿಸಿದರು.

ರಾಜ್ಯದ ಜನತೆ ಕೆಲಸ ಮಾಡಲು ಒಂದು ಅವಕಾಶ ಕೊಟ್ಟಿದ್ದಾರೆ. ಕೊನೆಯ ಹಂತದವರೆಗೂ ಕಾವೇರಿ ಭಾಗದ ರೈತರ ಪರವಾಗಿ ಹೋರಾಟ ಮಾಡುತ್ತೇನೆ. ದೇವೇಗೌಡರ ಸಲಹೆ ಅಧಾರದಲ್ಲಿ ಮ್ಯಾನೇಜ್ಮೆಂಟ್ ಬೋರ್ಡ್ ನಲ್ಲಿರುವ ಎರಡು ತಪ್ಪುಗಳ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು.

Related Articles

Comments (0)

Leave a Comment