ವಿಧಾನಸಭೆ ಅಧಿವೇಶನ ಮುಂದುವರಿಕೆ: ತಲೆಕೆಳಗಾದ ರೇವಣ್ಣ ಅಮವಾಸ್ಯೆ ಲೆಕ್ಕಾಚಾರ!

ಬೆಂಗಳೂರು: ಇಂದು ಮುಕ್ತಾಯಗೊಳ್ಳ ಬೇಕಿದ್ದ ವಿಧಾನಸಭೆಯ ಮಳೆಗಾಲದ ಅಧಿವೇಶನ ಒಂದು ದಿನ ವಿಸ್ತರವಾಗಿದೆ. ಅಧಿವೇಶನ ನಾಳೆಯೂ ನಡೆಯಲಿದ್ದು, ಇಂದಿರಾ ಕ್ಯಾಂಟೀನ್ ಅವ್ಯವಹಾರ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.

ವಿಧಾನಸಭೆ ಕಲಾಪ ಒಂದು ದಿನ ಮುಂದುವರಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಸಭೆಯ ಬಳಿಕ ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಪ್ರಕಟಿಸಿದರು.

ಇಂದು ಮಧ್ಯಾಹ್ನದವರಗೆ ಬಜೆಟ್ ಮೇಲಿನ ಚರ್ಚೆ ಮುಂದುವರೆಯುತ್ತದೆ. ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಯವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಾರೆ. ನಾಳೆ ಬಾಕಿ ಉಳಿದಿರುವ ಗಮನ ಸೆಳೆಯುವ ಸೂಚನೆಗಳ ಮಂಡನೆಗೆ ಅವಕಾಶ ನೀಡಲಾಗಿದೆ.

ಇವತ್ತಿಗೆ ಮಗಿಯಬೇಕಿದ್ದ ಅಧಿವೇಶನ ವಿಪಕ್ಷಗಳ ಒತ್ತಾಯದ ಹಿನ್ನೆಲೆಯಲ್ಲಿ ನಾಳೆಯೂ ಮುಂದುವರೆಯಲಿದೆ. ಶುಕ್ರವಾರ ಅಮವಾಸ್ಯೆ ಹಿನ್ನಲೆಯಲ್ಲಿ  ಸದನದ ಕಲಾಪ ನಡೆಯ ಬಾರದು, ಇಂದೇ ಬಜೆಟ್‌ ಚರ್ಚೆಗೆ ಉತ್ತರ ನೀಡಿ ಕಲಾಪ ಅಂತ್ಯಗೊಳಿಸಲು ಸಚಿವ ಎಚ್‌.ಡಿ.ರೇವಣ್ಣ ಅವರು ಮುಂದಾಗಿದ್ದರು. ಆದರೆ ಅವರ ಲೆಕ್ಕಾಚಾರವನ್ನು ಬಿಜೆಪಿ ತಲೆಕೆಳಗೆ ಮಾಡಿದೆ ಎಂದು ತಿಳಿದು ಬಂದಿದೆ.

Related Articles

Comments (0)

Leave a Comment