ಕಬ್ಬನ್ ಪಾರ್ಕ್ ನಲ್ಲಿ ಫೋಟೋ ಶೂಟ್ ಬ್ಯಾನ್, ಜ್ಯೋತಿಷ್ಯ ಹೇಳುವುದಕ್ಕೂ ನಿರ್ಬಂಧ..!
- by Suddi Team
- June 11, 2025
- 10 Views

ಬೆಂಗಳೂರು:ಇನ್ಮುಂದೆ ಕಬ್ಬನ್ ಉದ್ಯಾನದಲ್ಲಿ ಶಿಸ್ತು ಪಾಲನೆ ಕಡ್ಡಾಯಗೊಳಿಸಲಾಗಿದೆ. ಶಾಸ್ತ್ರ/ಭವಿಷ್ಯ ಹೇಳುವುದು, ಸ್ಕೇಟಿಂಗ್, ಫೋಟೋಶೂಟ್ ಸೇರಿದಂತೆ 20ಕ್ಕಿಂತ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವುದು ನಿಷೇಧಿಸಲಾಗಿದೆ.
ಮಹಾನಗರದ ಹೃದಯಭಾಗದಲ್ಲಿರುವ, ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಕಬ್ಬನ್ ಪಾರ್ಕ್ ಜನತೆಯ ಅಚ್ಚುಮೆಚ್ಚಿನ ಸ್ಥಳ,ವಿಹಾರ,ವಿಶ್ರಾಂತಿ,ಕುಟುಂಬ ಸದಸ್ಯರ ಜತೆ ಕಾಲ ಕಳೆಯಲು ಹೆಚ್ಚಾಗಿ ಕಬ್ಬನ್ ಪಾರ್ಕ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಇತ್ತೀಚೆಗೆ ಕಬ್ಬನ್ ಪಾರ್ಕ್ ಗೆ ಭೇಟಿ ನೀಡುವವರಿಗೆ ಅನಗತ್ಯ ಕಿರಿಕಿರಿಯಾಗುವ ಘಟನೆಗಳು ನಡೆದಿದ್ದು ಇದರಿಂದ ಎಚ್ಚೆತ್ತ ಸರ್ಕಾರ ಕೆಲವೊಂದು ಚಟುವಟಿಕೆಗೆ ನಿಷೇಧ ಹೇರಿದೆ.
ಯಾವುದೆಲ್ಲ ನಿಷಿದ್ಧ?:
ಉದ್ಯಾನದ ಒಳ ರಸ್ತೆಗಳಲ್ಲಿ ಬಸ್ಸು, ಲಾರಿ, ಗೂಡ್ಸ್ ವಾಹನ ಹಾಗೂ ಆಟೋಗಳಿಗೆ ಪ್ರವೇಶವಿಲ್ಲ. ಉದ್ಯಾನದ ಆವರಣದಲ್ಲಿ ಮಾರಾಟ ನಿಷಿದ್ಧ ಹಾಗೂ ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ ಮಾಡುವಂತಿಲ್ಲ. ಪ್ಲಾಸ್ಟಿಕ್ ವಸ್ತುಗಳು, ಯಾವುದೇ ತ್ಯಾಜ್ಯಗಳನ್ನು ಉದ್ಯಾನಕ್ಕೆ ತರವುದು, ಎಲ್ಲೆಂದರಲ್ಲಿ ಎಸೆಯುವುದಕ್ಕೂ ಅವಕಾಶವಿಲ್ಲ. ಪಾರ್ಸೆಲ್ ಊಟ/ತಿಂಡಿ ತರುವುದು ನಿಷಿದ್ಧ. ಮರಗಳನ್ನು ಹತ್ತುವುದು ಅಥವಾ ಅವುಗಳಿಗೆ ಹಾನಿ ಮಾಡುವಂತಿಲ್ಲ. ಬ್ಯಾನರ್ ಹಾಕುವುದು, ಸಭೆ – ಸಮಾರಂಭ ನಡೆಸುವುದು ಸಂಪೂರ್ಣ ನಿಷೇಧ. ಉದ್ಯಾನದಲ್ಲಿ ಪಟಾಕಿ ಹಚ್ಚುವುದು, ಶಬ್ಧ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆ ನಡೆಸುವುದು ನಿಷೇಧಿಸಲಾಗಿದೆ.
Related Articles
Thank you for your comment. It is awaiting moderation.
Comments (0)