- ಬೆಂಗಳೂರು
- ಮುಖ್ಯ ಮಾಹಿತಿ
- ರಾಜ್ಯ
- Like this post: 0
ಬೆಂಗಳೂರಿನಿಂದ ಹೋಗುವವರು ನಾಳೆ ಹೋಗಬಹುದು: ಅಶೋಕ್
- by Suddi Team
- July 12, 2020
- 52 Views

ಬೆಂಗಳೂರು: ಲಾಕ್ ಡೌನ್ ವೇಳೆ ಯಾರಿಗೆ ಬೆಂಗಳೂರಿನಲ್ಲಿ ಇರಲು ಸಾಧ್ಯವಿಲ್ಲವೋ ಅಥವಾ ತವರಿಗೆ ಮರಳಲು ಇಚ್ಚಿಸಿದ್ದೀರೋ ಅವರೆಲ್ಲಾ ನಾಳೆ ನಗರದಿಂದ ಹೊರಗೆ ಹೋಗಬಹುದು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಿಎಂ ಬಿಎಸ್ವೈ ಜೊತೆಗಿನ ಸಭೆ ಬಳಿಕ ಮಾತನಾಡಿದ ಅಶೋಕ್, ಬೆಂಗಳೂರು ತೊರೆಯುವವರಿಗೆ ನಾಳೆ ಕಾಲಾವಕಾಶ ನೀಡಲಾಗಿದೆ, ಹೋಗುವವರು ಹೋಗಬಹುದು ಎಂದು ಸ್ಪಷ್ಟ ಸಂದೇಶ ನೀಡಿದರು.
ಮಂಗಳವಾರ ರಾತ್ರಿಯಿಂದ ಒಂದು ವಾರ ಬೆಂಗಳೂರು ಲಾಕ್ಡೌನ್ ಆಗಲಿದೆ ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ, ತುರ್ತು ಸೇವೆ,ಔಷಧ,ಆಹಾರ,ಹಾಲು,ತರಕಾರಿಗೆ ಸಮಸ್ಯೆ ಆಗುವುದಿಲ್ಲ ಅದಕ್ಕೆಲ್ಲಾ ಅವಕಾಶ ಬರಲಿದೆ ಲಾಕ್ ಡೌನ್ ಹೇಗಿರಲಿದೆ ಎಂದು ನಾಳೆ ಸಿಎಂ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.
ನಾಳೆ ಡಿಸಿ,ಎಸ್ಪಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೀಟಿಂಗ್ ಇದೆ, ಸಿಎಂ ಮನೆಯಿಂದಲೇ ಸಭೆ ಮಾಡ್ತಾರೆ, ಜಿಲ್ಲೆಗಳ ಪರಿಸ್ಥಿತಿ ತಿಳಿಯಲಿದ್ದಾರೆ ಅಗತ್ಯ ಬಿದ್ದರೆ ಕೆಲ ಜಿಲ್ಲೆಗಳಿಗೂ ಲಾಕ್ ಡೌಮ್ ವಿಸ್ತರಣೆ ಮಾಡಬಹುದು ಎಂದು ಕೆಲ ಜಿಲ್ಲೆಗಳು ಲಾಕ್ ಡೌನ್ ಆಗುವ ಸಾಧ್ಯತೆ ಸುಳಿವು ನೀಡಿದರು.
Related Articles
Thank you for your comment. It is awaiting moderation.
Comments (0)