ಮೈಸೂರು ದಸರಾ ಉದ್ಘಾಟಿಸಲಿರೋ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ. ಜೂತೆಗೆ ಐವರು ಕೊರೊನಾ ವಾರಿಯರ್ಸ್ ಗಳನ್ನು ದಸರಾ ಉದ್ಘಾಟನೆ ವೇಳೆ ಸನ್ಮಾನಿಸಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿಂದು ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ದಸರಾ ಉದ್ಘಾಟನೆ ಮತ್ತು ಜಂಬೂ ಸವಾರಿ ವೇಳೆ ಎಷ್ಟು ಜನರು ಪಾಲ್ಗೂಳ್ಳಬೇಕು ಹಾಗೂ  ಕೊರೊನಾ ಹರಡದಂತೆ ಯಾವ ಮುಂಜಾಗ್ರತಾ ಕ್ರಮ ಕೈಗೂಳ್ಳಬೇಕು ಎಂಬ ಬಗ್ಗೆ ಸರ್ಕಾರ ಮಾರ್ಗಸೂಚಿ ಮಾಡಲಾಗಿದೆ ಎಂದರು.

ಮೈಸೂರು ದಸರಾ ಉದ್ಘಾಟನೆಗೆ 200 ಜನರು ಮತ್ತು ಜಂಬೂ ಸವಾರಿ ಮೆರವಣೆಗೆ ವೇಳೆ 300 ಜನರಿಗೆ ಮಾತ್ರ ಸೀಮಿತವಾಗುವುದು. ಮೈಸೂರು ನಗರದ ದೀಪಾಲಂಕಾರ ನೋಡಲು ಜನ ಸಂದಣಿ ಆಗದಂತೆ ನೋಡಿಕೊಳ್ಳಲು ನಗರದ ಯಾವ ಸ್ಥಳದಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಿರುವುದಿಲ್ಲ. ಒಟ್ಟಾರೆ ಓಣಂನಂತೆ ದಸರಾದಲ್ಲಿ ಕೊರೊನಾ ಅಟ್ಟಹಾಸ ಮೆರೆಯದಂತೆ ಹಲವು ಮುಂಜಾಗ್ರತಾ ಕ್ರಮ ಕೈಗೂಳ್ಳಲಾಗುವುದು ಎಂದು ಹೇಳಿದರು.

Related Articles

Comments (0)

Leave a Comment