ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಗೆ ಮೂಹುರ್ತ ಫಿಕ್ಸ್!

ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಹಾಗೂ ಎರಡೂ ವಿಧಾನಸಭೆಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಂಜೀವ್ ಕುಮಾರ್, ಅಕ್ಟೋಬರ್‌16 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, 17 ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ, 20 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆ ದಿನ ಹಾಗೂ ನವೆಂಬರ್ 3ಕ್ಕೆ ಮತದಾನ ನಡೆಯಲಿದ್ದು, 6 ರಂದು ಮತ ಏಣಿಕೆ ಕಾರ್ಯ ನಡೆಯಲಿದೆ. ನವೆಂಬರ್‌8 ಕ್ಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಅಧಿಕಾರಿಗಳ ವರ್ಗಾವಣೆ ಮಾಡುವಂತಿಲ್ಲ, ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಹೊಸ ಘೋಷಣೆಗಳನ್ನು ಮಾಡುವಂತಿಲ್ಲ, ಯಾವುದೇ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಮಾಹಿತಿ ನೀಡಿದರು.

ಲೋಕಸಭಾ ಕ್ಷೇತ್ರಗಳಾದ ಶಿವಮೊಗ್ಗದಲ್ಲಿ ಒಟ್ಟು 16ಲಕ್ಷದ 96ಸಾವಿರದ 978, ಬಳ್ಳಾರಿಯಲ್ಲಿ 17ಲಕ್ಷದ 1ಸಾವಿರದ 50, ಮಂಡ್ಯದಲ್ಲಿ 17ಲಕ್ಷದ 22ಸಾವಿರದ 476 ಮತದಾರರಿದ್ದು, ವಿಧಾನ ಸಭಾ ಕ್ಷೇತ್ರಗಳಾದ ಜಮಖಂಡಿಯಲ್ಲಿ 1ಲಕ್ಷದ 99ಸಾವಿರದ 339, ರಾಮನಗರದಲ್ಲಿ 2 ಲಕ್ಷದ 02ಸಾವಿರದ 599 ಮತದಾರರಿದ್ದಾರೆ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಇವಿಎಂ ಯಂತ್ರ ಬಳಕೆ ಮಾಡಲಾಗುತ್ತಿದೆ. ಈಗಾಗಲೇ ವಿವಿ ಪ್ಯಾಟ್ ರೆಡಿ ಇದ್ದಾವೆ. ವೋಟರ್ ಐಡಿಯಲ್ಲಿ ಹೆಸರು ಇರುವವರು ಮಾತ್ರ ವೋಟ್ ಮಾಡಬೇಕು. ಮೊದಲೇ ವೋಟರ್ ಐಡಿ ನೋಡಿಕೊಂಡು ಹೆಸರು ಇಲ್ಲದವರು ಈಗಲೂ ಸೇರಿಸಬಹುದು ಎಂದು ಹೇಳಿದರು‌.

5 ಕ್ಷೇತ್ರಗಳಲ್ಲಿ 6453 ಮತ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ಚುನಾವಣೆಗೆ ಬೇಕಿರೋ ಎಲ್ಲ ಇವಿಎಂ ಯಂತ್ರಗಳು ಮತ್ತು ವಿವಿ ಪ್ಯಾಟ್ ರೆಡಿ ಇದೆ. ಚುನಾವಣಾ ಪ್ರಕ್ರಿಯೆಗೆ 34433 ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿತ್ತಿದೆ ಎಂದರು.

Related Articles

Comments (0)

Leave a Comment