ಹೋಂ ಕ್ವಾರಂಟೇನ್ ಉಲ್ಲಂಘಿಸಿದ್ರೆ ಕ್ರಿಮಿನಲ್ ಕೇಸ್

ಬೆಂಗಳೂರು: ಹೋಂ ಕ್ವಾರಂಟೇನ್ ನಲ್ಲಿ ಇದ್ರೂ ಪೊಲೀಸರ ಕಣ್ಣಿಗೆ ಮಣ್ಣೆರೆಚೆ ಹೊರಗಡೆ ತಿರುಗಾಡಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್. ಹೌದು, ಕೊರೋನಾ ಸಂಕಷ್ಟವನ್ನ ಅರ್ಥ ಮಾಡಿಕೊಂಡು ಸಹಕರಿಸ ಬೇಕಾದ ಶಂಕಿತರು ಬೇಜವಬ್ದಾರಿಯಿಂದಹೊರೆಗೆ ತಿರುಗುತ್ತಾ ಸಮಾಜಕ್ಕೆ ಕಂಟಕವಾಗುವವರಿಗೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಿತ್ತಿರೋ ಹಿನ್ನೆಲೆಯಲ್ಲಿ ಇಂದು ಸಿಎಂ ಗೃಹ ಕೃಷ್ಣಾದಲ್ಲಿ ಬಿಎಸ್ವೈ ಅಧಿಕಾರಿಗಳ ಸಭೆ ನಡೆಸಿದ್ರು. ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೋಂ ಕ್ವಾರಂಟೇನ್ ನಲ್ಲಿ ಇರೋರು ಹೊರಗೆ ತಿರುಗಾಡಿರೋದು ಗೊತ್ತಾದ್ರೆ ಅವರ ಮೇಲಾ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ. ಇನ್ನೂ, ಕೋವಿಡ್ ಚಿಕಿತ್ಸೆಗೆ ಬೆಡ್ ಗಳ ಕೊರತೆಯಾಗುವುದನ್ನ ಮನಗೊಂಡು ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಬ್ಲಾಕ್ ತೆರೆಯಾಲಾಗುವುದು ಅಂತಾ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ರು.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರೋ ಹಿನ್ನೆಲೆ ಕೊರೋನಾ ಕಾಣಿಸಿಸಿಕೊಂಡ ಪ್ರದೇಶಗಳ ಸೀಲ್ ಡೌನ್ ಗೂ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಮಾಧ್ಯಮಗಳ ಕೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇಂದು ಐದು ವಾರ್ಡ್ ಗಳಲ್ಲಿ ಸಾಕಷ್ಟು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅದ್ರಲ್ಲೂ ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಕಲಾಸಿಪಾಳ್ಯ ಭಾಗದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಕೆ.ಆರ್.ಮಾರುಕಟ್ಟೆ ಬಂದ್ ಮಾಡಲಾಗುವುದು. ಅಲ್ಲದೆ, ಕೊರೋನಾ ಹೆಚ್ಚಾಗಿರುವ ವಿದ್ಯಾರಣ್ಯಪುರ, ಧರ್ಮರಾಯ ದೇವಸ್ಥಾನ, ಕಲಾಸಿಪಾಳ್ಯ, ಸಿದ್ದಾಪುರ, ವಿಶ್ವೇಶ್ವರಪುರ ವಾರ್ಡ್ ಗಳನ್ನ ಸೀಲ್ ಡೌನ್ ಮಾಡಲಾಗುವುದು ಅಂತಾ ತಿಳಿಸಿದ್ರು.

Related Articles

Comments (0)

Leave a Comment