ಪ್ರತಿದಿನ 6 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವುಳ್ಳ ನೂತನ ಮೆಗಾಡೇರಿ ಉದ್ಘಾಟನೆ

ಮೈಸೂರು: ಪ್ರತಿದಿನ 6 ಲಕ್ಷ ಲೀಟರ್ (9 ಲಕ್ಷ ಲೀಟರ್‍ಗೆ ವರ್ಧಿಸಬಹುದಾದ) ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವುಳ್ಳ ನೂತನ ಮೆಗಾಡೇರಿಯನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮೈಸೂರು ನಗರದ ಆಲನಹಳ್ಳಿಯಲ್ಲಿ ಇಂದು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಹಾಲು ಉತ್ಪಾದನೆ ಹೆಚ್ಚಿಸಲು ಹಾಗೂ ರೈತರ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮೈಸೂರು ನಗರದ ಆಲನಹಳ್ಳಿ ಬಡಾವಣೆಯಲ್ಲಿ ಸುಮಾರು 38.19 ಎಕರೆ ಜಮೀನಿನಲ್ಲಿ ಸುಮಾರು 13 ಎಕರೆ(ಸುಮಾರು 50000 Sqm) ಸ್ಥಳವನ್ನು ಉಪಯೋಗಿಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನವುಳ್ಳ ನೂತನ “ಮೈಸೂರು ಮೆಗಾ ಡೇರಿ” ಯನ್ನು ಸ್ಥಾಪಿಸಲಾಗಿರುತ್ತದೆ.

ಕರ್ನಾಟಕದಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮೊದಲನೇ ಘಟಕವಾಗಿರುತ್ತದೆ. ಇದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಹಾಗೂ ಹಾಲಿನ ವಿವಿಧ ಉತ್ಪನ್ನಗಳು ಲಭ್ಯವಾಗುತ್ತದೆ ಹಾಗೂ ಇದರಿಂದ ಲಕ್ಷಾಂತರ ರೈತರುಗಳಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಆಭಿವೃದ್ದಿಯಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಮೆಗಾ ಡೇರಿ ಯೋಜನೆ–ಅಂದಾಜು ರೂ. 124 ಕೋಟಿಯದಗಾಗಿದ್ದು, ಮೈಸೂರು ಹಾಲು ಒಕ್ಕೂಟದ ವಂತಿಕೆ ರೂ. 41.66 ಕೋಟಿ, ಖಏಗಿಙ ಅನುದಾನ  – ರೂ. 6.00 ಕೋಟಿ ಓಆಆಃ  ಸಂಸ್ಥೆ ವತಿಯಿಂದ ಸಾಲ- ರೂ. 80.34 ಕೋಟಿಯಾಗಿರುತ್ತದೆ ಎಂದರು.

ಸರ್ಕಾರವು ಹಾಲು ಉತ್ಪದಕರಿಗೆ ಸಹಾಯಧನ ನೀಡುತ್ತಿದ್ದು, ಇದಕ್ಕಾಗಿ 2500 ಕೋಟಿ ರೂ ನೀಡಲಾಗುತ್ತಿದೆ. ರೈತರಿಗೆ ವಿದ್ಯುತ್‍ಗಾಗಿ 11000 ಕೋಟಿ ರೂ ಸಬ್ಸಿಡಿ ನೀಡಲಾಗುತ್ತಿದೆ. ಸಾಲ ಮನ್ನಾ ಯೋಜನೆಯಡಿ  40 ಲಕ್ಷ  ರೈತ ಕುಟುಂಬಗಳ ಸಾಲ ಮನ್ನಾ ಮಾಡಲಾಗುವುದು. ಕಾಯಕ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ  5 ಲಕ್ಷ ರೂ ಗಳ ವರೆಗೆ ಬಡ್ಡಿ ರಹಿತ ಸಾಲ ಹಾಗೂ 10 ಲಕ್ಷ ರೂಗಳವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದಿರುವ ಮೈತ್ರಿಯ ನಡಿಗೆ ಅಭಿವೃದ್ಧಿಯ ಕಡೆಗೆ ಕಿರುಪುಸ್ತಕ ಬಿಡುಗಡೆ ಮಾಡಿದರು. ಸಾಲಮನ್ನಾ ಯೋಜನೆಯಡಿ ಋಣಮುಕ್ತ ಪತ್ರ ವಿತರಿಸಲಾಯಿತು. ಬಡವರ ಬಂಧು ಯೋಜನೆ ಫಲಾನುಭವಿಗಳಿಗೆ ಚಕ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ,  ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಶಾಸಕರಾದ ಹೆಚ್.ವಿಶ್ವನಾಥ್, ಕೆ. ಮಹದೇವ, ಹರ್ಷವರ್ಧನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Comments (0)

Leave a Comment