ಸೆಲ್ಫಿ ಕ್ರೇಜ್ ಗೆ ಹೇಮಾವತಿ ನದಿಯಲ್ಲಿ ಕೊಚ್ಚಿಹೋದ ಯುವಕ

ಮಂಡ್ಯ: ಪ್ರವಾಹದ ಸೆಲ್ಫಿ ತೆಗೆದುಕೊಳ್ಳಲು‌ ಹೋಗಿ ಯುವಕನೊಬ್ಬ ನೀರು ಪಾಲಾದ ಘಟನೆ ಹರಿಹರಪುರ ಗ್ರಾಮದ ಸಮೀಪದಲ್ಲಿರುವ ಹೇಮಾವತಿ ನದಿ ಸೇತುವೆ ಬಳಿ ನಡೆದಿದೆ.

ಮಂಡ್ಯ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದ ಶಿವು(30)ನೀರು ಪಾಲಾದ ಯುವಕ.ಉಕ್ಕಿ ಹರಿಯುತ್ತಿದ್ದ ಹೇಮಾವತಿ ನದಿಯ ಪ್ರವಾಹವನ್ನು ಸೇತುವೆ ಮೇಲೆ ನಿಂತು ಮೊಬೈಲ್ ನಲ್ಲಿ ಸೆಲ್ಫಿ ತೆಗೆಯಲು ಹೋಗಿದ್ದಾ ದುರ್ಘಟನೆ ಸಂಭವಿಸಿದೆ. ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ.

ಯುವಕ ನದಿ ನೀರಿನಲ್ಲಿ ಕೋಚ್ಚಿ‌ ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಯುವಕ ಈಜುವ ಪ್ರಯತ್ನ ನಡೆಸಿದರೂ ನೀರು ಹರಿವ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ, ಕಣ್ಣೆದುರೇ ತಮ್ಮೂರಿನ ಯುವಕ ನೀರು ಪಾಲಾಗುತ್ತಿದ್ದರೂ ಯಾವ ಸಹಾಯವನ್ನೂ ಮಾಡಲಾಗಿದೆ ಸ್ಥಳೀಯುರು ಮೂಖ ಪ್ರೇಕ್ಷಕರಾಗಬೇಕಾಯ್ತು.

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭಿಸಲಾಗಿದೆ.ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Comments (0)

Leave a Comment