ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಮಂಗಳೂರು: ನಾಯಿಗಳ ದಾಳಿಯಿಂದ ಸುಮಾರು 10 ಕಾಡುಕುರಿಗಳು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ನಡೆದಿದೆ. ಈ ಹಿಂದೆ ಜಿಂಕೆಗಳು ಸಾವನ್ನಪ್ಪಿವೆ ಎಂಬ ವದಂತಿ ಹಬ್ಬಿತ್ತು.
ಜಿಂಕೆಗಳ ಸಾವಿನ ವದಂತಿ ಕುರಿತು ಸ್ಪಷ್ಟನೆ ನೀಡಿದ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಕೆಲ ದಿನಗಳ ಹಿಂದೆ ಸುರಿದ ಭಾರೀ ಗಾಳಿ ಮಳೆಗೆ ಮರಬಿದ್ದು ನಿಸರ್ಗಧಾಮದ ಆವರಣ ಗೋಡೆ ಒಂದು ಕಡೆ ಕುಸಿದಿದೆ. ಇಲ್ಲಿಂದ ರಾತ್ರಿ ಒಳನುಗ್ಗಿರುವ ನಾಲ್ಕೈದು ನಾಯಿಗಳು ಕಾಡುಕುರಿಗಳ ಮೇಲೆ ದಾಳಿ ನಡೆಸಿವೆ. ಬಾರ್ಕಿಂಗ್ ಡೀರ್ ಎಂದು ಕರೆಯಲ್ಪಡುವ ಕಾಡುಕುರಿಗಳ ಮೇಲೆ ದಾಳಿ ನಡೆಸಿದೆ.
ಕಾಡು ಕುರಿಗಳು ಮೇಲ್ನೋಟಕ್ಕೆ ಜಿಂಕೆಗಳಂತೆ ಕಾಣುತ್ತವೆ. ಆದರೆ ದಾಳಿಗೊಳಗಾಗಿದ್ದು ಕಾಡುಕುರಿಗಳು. ಸುಮಾರು 40 ರಷ್ಟಿದ್ದ ಕಾಡುಕುರಿಗಳ ಪೈಕಿ 10 ಕಾಡುಕುರಿಗಳು ಸಾವನ್ನಪ್ಪಿವೆ. ದಾಳಿ ವೇಳೆ ಐದರಷ್ಟು ಕಾಡುಕುರಿಗಳು ಗಾಯಗೊಂಡಿವೆ ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಅಂತಾ ಮಾಹಿತಿ ನೀಡಿದ್ರು.
Comments (0)