ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣ ಮೊದಲ ಪತ್ನಿ ನಾಗರತ್ನ ವಿಚಾರಣೆ?

ಬೆಂಗಳೂರು: ನಟ ದುನಿಯಾ ವಿಜಯ್‌ ಜೈಲಿನಲ್ಲಿದ್ದಾಗ ವಿಜಯ್ 2 ನೇ ಪತ್ನಿ ಎನ್ನಲಾದ ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನರನ್ನು ಗಿರಿನಗರ ಠಾಣೆಯ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ನಟ ದುನಿಯ ವಿಜಯ್ ಜೈಲಿನಲ್ಲಿದ್ದಾಗ ಕೀರ್ತಿ ಗೌಡ ಮನೆಯವರೊಂದಿಗೆ ಕುಳಿತಿದ್ದ ವೇಳೆ ನಾಗರತ್ನ ಅವರು ಏಕಾಏಕಿ ಮನೆಗೆ ನುಗ್ಗಿ  ಚಪ್ಪಲಿಯಲ್ಲಿ  ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದಾಳಿ ನಡೆಸಿದ ಬಳಿಕ ನಾಗರತ್ನ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ಕೀರ್ತಿಗೌಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರನ್ನೂ ದಾಖಲಿಸಿದ್ದರು. ಈ ಕುರಿತು ಮಗಳು ಮೋನಿಕ ತಾಯಿ ಪರ ಸಾಕ್ಷಿ ಹೇಳಿದ್ದಳು.

ಹಲ್ಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ನಾಗರತ್ನ ಹಲ್ಲೆ ನಡೆಸಿದ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ದೃಶ್ಯಗಳು ಬಹಿರಂಗವಾಗಿವೆ. ಸಿಸಿ ಟಿವಿ ದೃಶ್ಯಾವಳಿಗಳ ಪ್ರಕಾರ ನಾಗರತ್ನ ಹಲ್ಲೆ ನಡೆಸಲು ಮಗಳು ಮೋನಿಕ ಸಹಾಯ ಮಾಡಿದ್ದಾಳೆ‌. ಹಲ್ಲೆ ವೇಳೆ ಮನೆಯಲ್ಲಿದ್ದ ಇತರರು ನಾಗರತ್ನ ಅವರನ್ನು ತಡೆದಿದ್ದರು. ಆದರೆ ಅವರಿಂದ ತಾಯಿಯನ್ನು ರಕ್ಷಿಸಿ ಕೀರ್ತಿಗೌಡಗೆ ಥಳಿಸಲು ತಾಯಿ ನಾಗರತ್ನಗೆ ಮೋನಿಕ ಸಹಾಯ ಮಾಡಿದ್ದಾಳೆ.

ಇಂದು ನಾಗರತ್ನ ಅವರನ್ನು ವಶಕ್ಕೆ ಪಡೆಯಲು ಗಂಟೆಗಳ ಕಾಲ ಮನೆಯ ಮುಂದೆ ಕಾಯಬೇಕಾದ ಪರಿಸ್ಥಿತಿ ಪೊಲೀಸರಿಗೆ ಬಂದೊದಗಿತು. ಮನೆಯೊಳಗಿದ್ದ ನಾಗರತ್ನ ಮತ್ತು ಪುತ್ರಿಯರಾದ ಮೋನಿಶಾ, ಮೋನಿಕಾ ಪೊಲೀಸರಿಗೆ ಬಾಗಿಲು ತೆರೆಯದೆ ಕಿಟಕಿಯಿಂದಲೇ ಸಂಭಾಷಣೆ ನಡೆಸಿದರು. ನಂತರ ನಾಗರತ್ನ ಪರ ವಕೀಲೆ ಆಗಮಿಸಿದ ಬಳಿಕ ಮಕ್ಕಳು ಬಾಗಿಲು ತೆರೆದು ಹೊರ ಬಂದು ಠಾಣೆಗೆ ತೆರಳಿದರು.

ಗಿರಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ ನಟ ದುನಿಯಾ ವಿಜಯ್‌ ಮಗಳನ್ನು ವಿಚಾರಣೆ ನಡೆಸಬೇಡಿ. ನಮ್ಮ ಜಗಳಕ್ಕೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳನ್ನು ಠಾಣೆಯಲ್ಲಿರಿಸ ಬೇಡಿ ಎಂದು ಮನವಿ ಮಾಡಿದರು.

Related Articles

Comments (0)

Leave a Comment