ಮೇಕೆದಾಟು ಯೋಜನೆಗೆ ತಮಿಳುನಾಡು,ಕೇಂದ್ರ ಸರ್ಕಾರದ ತಕರಾರು ಸಲ್ಲದು; ಸಿಎಂ ಸಿದ್ದರಾಮಯ್ಯ
- September 13, 2025
- 0 Likes
ಚಾಮರಾಜನಗರ: ಜನರನ್ನು ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಪೋಲೀಸರು ಒಂದು ವಾರದಲ್ಲಿಯೇ ಭೇದಿಸಿ 15 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಹಣಕಾಸು ವಿಚಾರದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಪೋಲೀಸರು ಚಾಲೆಂಜಾಗಿ ತೆಗೆದುಕೊಂಡು 18 ಆರೋಪಿಗಳನ್ನು ಕಂಡು ಹಿಡಿದು 15 ಆರೋಪಿಗಳನ್ನು ಬಂಧಿಸಿದ್ದಾರೆ.
ಹಣಕಾಸು ವಿಚಾರದಲ್ಲಿ ಮೇ26 ರಂದು ರಾತ್ರಿ 8.30 ರಲ್ಲಿ ನಡೆದ ಪ್ರಕರಣದಲ್ಲಿ ಜಕಾವುಲ್ಲ, ಇದ್ರೀಶ, ಕೈಸರ್ ಕೊಲೆಯಾಗಿದ್ರು.
ಪ್ರಕರಣದ ಸಂಬಂದ ಅನ್ಸು, ಅಸ್ಲಂಪಾಷಾ, ಅಕ್ರಂಪಾಷಾ, ಅನೀಶ್ ಪಾಷಾ, ಜಮೀರ್, ಮನ್ಸೂರ್, ಇನಾಯತ್, ಅನ್ವರ್ ಪಾಷಾ, ಏಜಿಯಸ್ ಪಾಷಾ, ಮುದಾಸಿರ್, ಫಾರುಕ್, ಸುಹೇಲ್ ಪಾಷಾ, ಇದಿಯಾಸ್, ಅಲ್ತಾಫ್, ಮುಜಾಮಿಲ್, ಅಮ್ಜದ್ ಪಾಷಾ ಎಂಬ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.
ಚಾಮರಾಜನಗರದಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತ್ರಿವಳಿ ಕೊಲೆ ಪ್ರಕರಣವನ್ನು ಭೇದಿಸಲು ಪೋಲೀಸರು ಹಗಲು ರಾತ್ರಿ ಶ್ರಮಿಸಿದ್ದಾರೆ ಘಟನೆಗ ಸಂಬಂಧಿಸದಂತೆ ಒಟ್ಟು 18 ಆರೋಪಿಗಳನ್ನು ಕಂಡು ಹಿಡಿದು ಇದೀಗ 15 ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ತ್ರಿವಳಿ ಪ್ರಕರಣ ಭೇದಿಸಲು ಡಿವೈಎಸ್ಪಿಗಳ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಲಾಗಿತ್ತು ಎಂದು ತಿಳಿಸಿದ್ರು.
Comments (0)