ಅನೈತಿಕ ಸಂಬಂಧದ ಸಂಶಯ:ಗರ್ಭಿಣಿ ಪತ್ನಿಯನ್ನೆ ಪತಿ ಚಾಕು ಇರಿದು ಕೊಲೆ

ಬಾಗಲಕೋಟೆ: ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆ ಗರ್ಭಿಣಿ ಪತ್ನಿಯನ್ನೆ ಪತಿ ಚಾಕು ಇರಿದು ಕೊಲೆಗೈದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ರಂಗನಾಥ ನಗರದಲ್ಲಿ ನಡೆದಿದೆ.

ಮಂಜುಳಾ ಸಂದೀಪ ಬಣಪಟ್ಟಿ (24) ಕೊಲೆಯಾದ ದುರ್ದೈವಿ. ಮಂಜುಳಾ ಪತಿ ಸಂದೀಪ ಬಣಪಟ್ಟಿ ಕೊಲೆಗೈದು, ನಂತರ ತಲೆಗೆ ಕಲ್ಲು ಹೊಡೆದುಕೊಂಡು ಆತ್ಮಹತ್ಯೆ ನಾಟಕವಾಡಿದ್ದಾನೆ. ಗಾಯಗಳಾಗಿದ್ದ ಆತನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Comments (0)

Leave a Comment