ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸ್ನೇತನನ್ನೆ ಹತ್ಯೆ ಮಾಡಿದ್ದ ಪಾತಕಿ ಸೆರೆ

ದಾವಣಗೆರೆ: ಚನ್ನಗಿರಿ ತಾಲೂಕಿನ ನಾಗರಕಟ್ಟೆ ಗ್ರಾಮದ ಯುವಕನ ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನ ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಹನಮಂತರಾಯ ಕೆಲವೇ ದಿನಗಳಲ್ಲಿ ಪ್ರಕರಣ ಭೇದಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯನ್ನ ಬಂಧಿಸಲಾಗಿದೆ ಅಂತಾ ಮಾಹಿತಿ ನೀಡಿದ್ರು.

ಜುಲೈ 9 ರಂದು ಹಣದ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಾಗಕಟ್ಟೆ ಗ್ರಾಮದ ಯುವಕ ಚಂದ್ರಾನಾಯಕ್ (25) ಹತ್ತೆಯಾಗಿತ್ತು. ಕೊಲೆಯಾದ ಚಂದ್ರನಾಯಕ್ ತನ್ನ ಸ್ನೇಹಿತನಿಗೆ 1 ಲಕ್ಷದ 80 ಸಾವಿರ ಹಣ ಸಾಲ ನೀಡಿದ್ದ‌. ತಾನು ನೀಡಿದ ಹಣ ವಾಪಸ್ ಕೇಳಿದಾಗ ನಾಗರ ಕಟ್ಟೆ ಸಮೀಪದ ಸೂಳೆಕೆರೆ ಗುಡ್ಡದ ಹತ್ತಿರ ಬಾ ನಿನ್ನ ಹಣ ನೀಡುತ್ತೇನೆ ಅಂತ ಹೇಳಿದ ಸ್ನೇಹಿತನ ಮಾತು ನಂಬಿ ಸೂಳೆಕೆರೆ ಗುಡ್ಡಕ್ಕೆ ಚಂದ್ರನಾಯಕ್ ತೆರಳಿದ್ದಾನೆ. ಈ ವೇಳೆ ಆತನನ್ನ ಶೂಟ್ ಮಾಡಿ ಹತ್ಯೆಗೈಯಲಾಗಿದೆ.

ಹತ್ಯೆ ಬಳಿಕ ಶೂಟ್ ಮಾಡಿರೋ ಬಗ್ಗೆ ಅನುಮಾನ ಬಾರದಿರಲಿ ಅಂತ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಲಾಗಿತ್ತು. ಮೊದಲು ಪೊಲೀಸರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಅಂತಾನೆ ನಂಬಿದ್ದರು. ನಂತರ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಶೂಟ್ ಮಾಡಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ. ಈ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿ ಚೇತನ್ ನಾಯ್ಕ್ ನನ್ನ ಬಂಧಿಸಲಾಗಿದ್ದಾರೆ.

Related Articles

Comments (0)

Leave a Comment